ತಿಪಟೂರು | ಸಾಂಸ್ಕೃತಿಕ ಶ್ರೀಮಂತಿಕೆಗೆ ಯಾವುದೂ ಸರಿಸಮವಲ್ಲ : ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ

Date:

Advertisements

ಸಾಂಸ್ಕೃತಿಕ ಶ್ರೀಮಂತಿಕೆಗೆ ಯಾವುದೂ ಸರಿಸಮವಲ್ಲ. ಆಧುನಿಕ ಕಾಲದಲ್ಲಿ ಶ್ರೀಮಂತಿಕೆಯ ಹೊಸ ಮಾನದಂಡವನ್ನು ನಾವು ತಿಳಿಯಬೇಕಾಗಿದೆ ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.

ತಿಪಟೂರು ನಗರದ ಬಯಲು ರಂಗಮಂದಿರದಲ್ಲಿ  ಕಲಾಕೃತಿ , ತಿಪಟೂರು  ಧಾತ್ರಿ ರಂಗ ಸಂಸ್ಥೆ ಸಿರಿಗೇರಿ ಪ್ರಸ್ತುತ ಪಡಿಸಿರುವ ” ಕಲಾಕೃತಿ ವಸಂತೋತ್ಸವ ” 2024-25 ನೇ ಸಾಲಿನ ಧಾತ್ರಿ ತಿರುಗಾಟದ 3 ನಾಟಕಗಳ ಪ್ರದರ್ಶನ  ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು,  ಹಾಡುಗಾರಿಕೆ, ಚಿತ್ರಕಲೆ,ಸಂಗೀತ, ನಾಟಕ ನೋಡುವ ಅಭಿರುಚಿ ಉಳ್ಳವರು,ರಾಸಾಯನಿಕ ಮುಕ್ತ ಆಹಾರ ಸೇವಿಸುವವರು ಶ್ರೀಮಂತರು ಎನ್ನಬಹುದು. ಕಾಲೇಜು ರಂಗಭೂಮಿ,ಶಾಲಾ ರಂಗಭೂಮಿ ಬೆಳೆಯದೆ ಪ್ರೇಕ್ಷಕರು ಹುಟ್ಟುವುದಿಲ್ಲ. ಪ್ರೀತಿ ತತ್ವವನ್ನು ಅಲ್ಲಿಯೇ ಹೇಳಿಕೊಡಬೇಕು. ಸಮುದಾಯ, ಸಮಾಜವನ್ನು ಆ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕಲಾತ್ಮಕವಾಗಿ ತಿಳಿಸಿಕೊಡಬೇಕು. ಎಲ್ಲಾ ವೃತ್ತಿಯನ್ನು ಅವರವರು ಒಂದು ಕಲೆಯಾಗಿ ಸ್ವೀಕರಿಸಿ ಆನಂದಿಸಬೇಕು.ಶಿಕ್ಷಕರು, ಉಪನ್ಯಾಸಕರು ಈ ಕಾಲಕ್ಕೆ ಬೇಕಾದ ದೊಡ್ಡ ಶಕ್ತಿಯನ್ನು ಕಟ್ಟಬೇಕು ಎಂದು ಹೇಳಿದರು.

ನಗರಸಭಾ ಅಧ್ಯಕ್ಷೆ  ಯಮುನಾ ಧರಣೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜನರಿಗೆ ರಂಗಭೂಮಿಯ ಆಸಕ್ತಿ ಕ್ಷೀಣಿಸುತ್ತಿದೆ.ರಂಗಭೂಮಿ ಕಲಾವಿದರ ಅಭಿನಯವು ಬಹಳ ನೈಜವಾಗಿದ್ದು,ಖ್ಯಾತ ಚಲನಚಿತ್ರ ಕಲಾವಿದರು ರಂಗಭೂಮಿಯಿಂದಲೇ ಬಂದವರು.ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹಿಸುವುದರಿಂದ ಅವರಿಗೆ ಹೆಚ್ಚಿನ ಗೌರವ ನೀಡಿದಂತಾಗುತ್ತದೆ.ನಾವೆಲ್ಲರೂ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

Advertisements

ನಗರಸಭಾ ಸದಸ್ಯ ಯೋಗೀಶ್ ಎಂ.ಎಸ್. ಮಾತನಾಡಿ ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಬೀದಿ ನಾಟಕಗಳ ಮೂಲಕ ಜನರಿಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಇದೇ ರೀತಿ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಬೀದಿ ನಾಟಕದ ಮುಖಾಂತರ ಜನರಿಗೆ ತಿಳಿಸಬೇಕು ಎಂದು ಹೇಳಿದರು.

ದೇಶೀಯ ಪುರೋಹಿತಶಾಹಿಯ ಹಿಡಿತದಲ್ಲಿ ಭಾರತೀಯ ಸಮಾಜ ನಲುಗುತ್ತಿರುವಾಗ ಉದಯಿಸಿದ ದಿವ್ಯ ಜ್ಯೋತಿಗಳೇ ಸಾವಿತ್ರಿಬಾಯಿ ಫುಲೆ ದಂಪತಿಗಳು. ಅಂದಿನ ಮೌಢ್ಯ, ಅನಕ್ಷರತೆ, ಆಹಾರದ ಅಲಭ್ಯತೆ,ಆರೋಗ್ಯದ ಕಡೆಗಣನೆ ಹೀಗೆ ಎಲ್ಲಾ ಸಾಮಾಜಿಕ ಪಿಡುಗುಗಳ ವಿರುದ್ಧ ಸೆಟೆದು ನಿಂತು ಹೋರಾಡಿದ ವೀರ ಮಹಿಳೆ ಸಾವಿತ್ರಿಬಾಯಿ ಪುಲೆಯ ಜೀವನಾಧಾರಿತ ಘಟನೆಗಳನ್ನು ಬೆಂಬಲಿಸುವ ನಾಟಕ “ಸರಸತಿಯಾಗಲೊಲ್ಲೆ”  ನಾಟಕ ದರ್ಶನವಾಯಿತು.

ಕಾರ್ಯಕ್ರಮದಲ್ಲಿ  ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜೀನ ಪ್ರಾಂಶುಪಾಲ ಕುಮಾರಸ್ವಾಮಿ, ಕಲಾಕೃತಿ ಸಂಸ್ಥೆಯ ಪದಾಧಿಕಾರಿಗಳಾದ ತಿಪಟೂರು ಕೃಷ್ಣ,ಎಸ್.ಎಸ್. ಗಂಗಾಧರ್,  ಸೋಭಾ ಜಯದೇವ್ ಮತ್ತಿತರರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X