ತುಮಕೂರು | ಇ-ಸ್ವತ್ತು ವಿಚಾರಕ್ಕೆ ದಿನವಿಡೀ ನಡೆದ ಮಾವಿನಹಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ!

Date:

Advertisements

ಕಳೆದ ಆರೇಳು ತಿಂಗಳಿಂದ ಆರು ಗುಂಟೆ ಜಮೀನಿಗೆ ಇ-ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದ ಬಳಿಕ ಕೆಲ ಪ್ರಭಾವಿಗಳ ಕೈಗೊಂಬೆಯಾಗಿ ವಿನಾಕಾರಣ ತೊಂದರೆ ನೀಡುತ್ತಿರುವ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಗ್ರಾಮಸ್ಥರು ಎರಡನೇ ಬಾರಿ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ ನಡೆದಿದೆ.

ಬೆಳಗ್ಗೆ 11 ರಿಂದ ನಿರಂತರ ಸಂಜೆ 5 ಗಂಟೆಯವರೆಗೆ ನಡೆದ ಸುದೀರ್ಘ ಸಾಮಾನ್ಯ ಸಭೆಯಲ್ಲಿ ಮಾವಿನಹಳ್ಳಿ ಗ್ರಾಮದ ಸರ್ವೇ ನಂಬರ್ 52/4 ನ 0.6 ಗುಂಟೆ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೇಳಿ ನಂತರ ಇ-ಸ್ವತ್ತು ಮಾಡಿಕೊಡಲು ಅಭಿಷೇಕ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಲೇ ಮಾಡಿದ ಗ್ರಾಮ ಪಂಚಾಯಿತಿ ಆಡಳಿತ ವಿನಾ ಕಾರಣ ತೊಂದರೆ ನೀಡುತ್ತಿದೆ. ಕಾನೂನು ರೀತಿ ಸರಿಯಾಗಿದ್ದರೂ ಸಲ್ಲದ ಕಾರಣ ಹುಡುಕಿ ಇ ಸ್ವತ್ತು ಮಾಡಿಕೊಡಲು ಮುಂದೂಡುತ್ತಿದ್ದಾರೆ ಎಂದು ದೂರಿದ ನೂರಾರು ಗ್ರಾಮಸ್ಥರು, ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಮೂರು ಸಭೆಯಲ್ಲಿ ಈ ಅರ್ಜಿಯನ್ನು ಮುಂದೂಡಿ ಸೋಮವಾರ ನಡೆಯಬೇಕಿದ್ದ ಸಾಮಾನ್ಯ ಸಭೆ ಇಡೀ ಗ್ರಾಮವೇ ಕುತೂಹಲದಲ್ಲಿ ಕಾದಿತ್ತು. ಸಾಮಾನ್ಯ ಸಭೆಯಲ್ಲಿ ಇ-ಸ್ವತ್ತು ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಿದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕಾನೂನು ಅರಿವಿಗೆ ಮತ್ತೊಮ್ಮೆ ವಕೀಲರ ಭೇಟಿ ಮಾಡುವುದಾಗಿ ಶುಕ್ರವಾರಕ್ಕೆ ಸಭೆ ಮುಂದೂಡಿದ್ದು, ಅಲ್ಲಿದ್ದ ಗ್ರಾಮಸ್ಥರನ್ನು ಕೆರಳಿಸಿದೆ.

ಗ್ರಾಮಸ್ಥರು 2

ಪಂಚಾಯತಿ ಕಚೇರಿಯಲ್ಲೇ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಈ ಹಿಂದೆ ಕಾನೂನು ತೊಡಕಿನ ಬಗ್ಗೆ ವಕೀಲರ ಮೂಲಕ ಕಾನೂನು ಸಲಹೆ ಕೇಳಿದ್ದಾರೆ. ಮತ್ತೇ ಸಭೆ ಮುಂದೂಡಿದ್ದು, ಕೇವಲ ರಾಜಕೀಯ ಪ್ರಭಾವ. ಮಾಜಿ ಶಾಸಕರ ಪುತ್ರನೊಬ್ಬನ ಕೈ ಗೊಂಬೆಯಂತೆ ಪಿಡಿಒ ವರ್ತಿಸಿದ್ದಾರೆ. ಇಲ್ಲಿ ಸ್ವ-ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಮನಬಂದಂತೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಈ ತಕ್ಷಣಕ್ಕೆ ಸ್ಥಳಕ್ಕೆ ತಾಪಂ ಇಓ ಭೇಟಿ ನೀಡಬೇಕು ಎಂದು ಅರ್ಜಿದಾರ ಅಭಿಷೇಕ್ ಆಗ್ರಹಿಸಿದರು.

ಸಂಜೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ತಾಪಂ ಇಓ ಪರಮೇಶ್ ಕುಮಾರ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಇಂದ್ರೇಶ್ ಪ್ರತಿಭಟನಾಕಾರರ ಜೊತೆ ಚರ್ಚಿಸಿದರು. ಸಾಮಾನ್ಯ ಸಭೆಯಲ್ಲಿ ತೀರ್ಮಾನ ಆಗದ ವಿಚಾರಕ್ಕೆ ಮೂರು ದಿನಗಳ ನಂತರ ವಿಶೇಷ ಸಭೆ ನಡೆಸಿ, ಇ-ಸ್ವತ್ತು ಮಾಡುವ ವಿಚಾರಕ್ಕೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಕಾನೂನು ಸಲಹೆ ಪಡೆದು ಒಂದು ದಿನದಲ್ಲಿ ಹಿಂಬರಹ ನೀಡಿ ಎಂದು ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದರು.

“ಖಾತೆ ಮಾಡುವ ಜಮೀನಿನ ಮೇಲಿನ ಕಾನೂನು ತೊಡಕು ಬಗ್ಗೆ ಸಲಹೆ ಪಡೆಯಲಾಗಿತ್ತು. ಪಿಡಿಓ ಈಗಾಗಲೇ ವಕೀಲರ ಭೇಟಿ ಮಾಡಿ ಕಾನೂನು ಸಲಹೆ ಪಡೆದಿದ್ದಾರೆ. ಇದರ ಬಗ್ಗೆ ಕೆಲ ಸದಸ್ಯರ ಸಮ್ಮತಿ ಇಲ್ಲದ ಕಾರಣ ಮತ್ತೊಮ್ಮೆ ಎಲ್ಲಾ ಸದಸ್ಯರ ಒಟ್ಟಾಗಿ ಕಾನೂನು ತಜ್ಞರನ್ನು ಇವತ್ತೇ ಭೇಟಿ ಮಾಡಿ ಸೂಕ್ತ ಪರಿಹಾರ ತಂದು ಆಗಸ್ಟ್ ಮಾಹೆ 2 ನೇ ತಾರೀಖು ನಿರ್ಧರಿಸಲಾಗುವುದು ಎಂದು ಮಾವಿನಹಳ್ಳಿ ಗ್ರಾಪಂ ಅಧ್ಯಕ್ಷೆ ಎನ್.ಲಕ್ಷ್ಮಿ ಅವರು ಹೇಳಿದ್ದಾರೆ.

” ಕಾನೂನು ರೀತ್ಯಾ ಸರಿ ಇರುವ ಜಮೀನಿಗೆ ಇ ಸ್ವತ್ತು ಮಾಡಿಕೊಡಲು ನಿರಾಕರಿಸಿದ ಗ್ರಾಮ ಪಂಚಾಯಿತಿ ಆಡಳಿತ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ನನಗೆ ವೈಯಕ್ತಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕಾನೂನು ಸಲಹೆ ಇಂದೇ ಪಡೆಯುವ ಆಡಳಿತ ನಾಳೆ ತೀರ್ಮಾನ ತಿಳಿಸದೆ ನಾಲ್ಕು ದಿನಗಳ ಅವಧಿ ನೀಡಿರುವುದು ಹಲವು ಅನುಮಾನಕ್ಕೀಡು ಮಾಡಿದೆ ಎಂದು ಸಂತ್ರಸ್ತ ಅರ್ಜಿದಾರ ಮಾವಿನಹಳ್ಳಿ ಅಭಿಷೇಕ್ ಹೇಳಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

Download Eedina App Android / iOS

X