ಚಿನ್ನಾಭರಣವಿದ್ದಂತಹ ಬ್ಯಾಗನ್ನು ಹಿಂತಿರುಗಿಸಿ ಆಟೋ ಚಾಲಕನೊಬ್ಬ ಪ್ರಮಾಣಿಕತೆ ತೋರಿದ್ದಾನೆ.ಆಟೋ ಚಾಲಕನ ಪ್ರಮಾಣಿಕತೆ ಕಂಡು ತುಮಕೂರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುಮಕೂರು ನಗರದ ಹನುಮಂತಪುರ ನಿವಾಸಿಯಾದ ರವಿಕುಮಾರ್ ಪ್ರಮಾಣಿಕತೆ ಮೆರೆದ ಆಟೋ ಚಾಲಕ.ಹಾಸನ ಜಿಲ್ಲೆ ಅರಸೀಕೆರೆ ಮೂಲದ ಗಾಯತ್ರಿ ಚಿನ್ನಾಭರಣವಿದ್ದಂತಹ ಬ್ಯಾಗ್ನ ಮಾಲೀಕರು.ಗಾಯತ್ರಿ ಕುಂದೂರಿನಲ್ಲಿನ ತನ್ನ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದರು. ಗಾಯತ್ರಿ, ತುಮಕೂರು ಹೊರವಲಯದ ಕುಂದೂರಿನಿಂದ ಸಿಟಿ ಬಸ್ ನಿಲ್ದಾಣಕ್ಕೆ ಹೋಗಿ, ಆಟೋದಿಂದ ಇಳಿದು ಹೋಗುವಾಗ ಬ್ಯಾಗನ್ನ ಬಿಟ್ಟು ಹೋಗಿದ್ದರು. ನಂತರ, ಬ್ಯಾಗ್ ನೋಡಿದ ಆಟೋ ಚಾಲಕ ಬ್ಯಾಗ್ನ ಮಾಲೀಕರನ್ನು ಹುಡುಕಾಟ ನಡೆಸಿದ್ದಾರೆ.
ಆಟೋ ಚಾಲಕನಿಗೆ ಬ್ಯಾಗ್ನ ಮಾಲೀಕರು ಸಿಗದಿದ್ದಕ್ಕೆ ಪೊಲೀಸ್ ಠಾಣೆಗೆ ಬ್ಯಾಗ್ನ ಒಪ್ಪಿಸಿದ್ದಾರೆ. ನಂತರ ಶೋಧ ಕಾರ್ಯ ನಡೆಸಿದ ಪೊಲೀಸರು ಮಾಲೀಕರನ್ನ ಪತ್ತೆ ಮಾಡಿ ಬ್ಯಾಗ್ನಲ್ಲಿ ಇದ್ದಂತಹ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನ ಮಾಲೀಕರಾದ ಗಾಯತ್ರಿಗೆ ಒಪ್ಪಿಸಿದ್ದಾರೆ.
ಆಟೋ ಚಾಲಕ ರವಿಕುಮಾರ್ನ ಪ್ರಮಾಣಿಕತೆಗೆ ಗಾಯತ್ರಿ ಧನ್ಯವಾದ ತಿಳಿದ್ದಾರೆ. ತುಮಕೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.