ತುಮಕೂರು | ಸಹೋದ್ಯೋಗಿ ವರದಿಗಾರನಿಗೆ ಜಾತಿನಿಂದನೆ, ಹಲ್ಲೆ ಪಬ್ಲಿಕ್ ಟಿ.ವಿ ವರದಿಗಾರನ ವಿರುದ್ಧ ಎಫ್‌ಐಆರ್

Date:

ತುಮಕೂರು: ಸಹೋದ್ಯೋಗಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದರು ಎನ್ನಲಾದ ಪಬ್ಲಿಕ್ ಟಿ.ವಿ. ವರದಿಗಾರನ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. 

ಏ.21 ರಂದು ತುಮಕೂರು ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಮೇಲೆ ಇ.ಡಿ ದಾಳಿ ನಡೆದಿತ್ತು. ಈ ವೇಳೆ ಝೀ ಟಿ.ವಿ ಸುದ್ದಿ ವಾಹಿನಿಯ ವರದಿಗಾರ ಮಂಜುನಾಥ್ ಜಿ.ಎನ್ ಅವರು ವರದಿ ಮಾಡಲೆಂದು ಎಸ್‌ಎಸ್‌ಐಟಿಗೆ ಕಾಲೇಜಿಗೆ ತೆರಳಿದ್ದರು. 

ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಪಬ್ಲಿಕ್ ಟಿ.ವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಎಂಬಾತ  ಝೀ ಟಿ.ವಿ ವರದಿಗಾರ ಮಂಜುನಾಥ್ ಜಿ.ಎನ್ ಎಂಬುವವರ ಮೇಲೆ ಎರಗಿ ಪಬ್ಲಿಕ್ ಟಿ.ವಿ ಕಬ್ಬಿಣದ ಲೋಗೋ ಮೈಕಿನಿಂದ ಹಲ್ಲೆ ಮಾಡಿರುವುದು ಅಲ್ಲದೆ, ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಝೀ ನ್ಯೂಸ್ ವರದಿಗಾರ ಮಂಜುನಾಥ್ ಜಿ.ಎನ್ ಅವರಿಗೆ ಕುತ್ತಿಗೆಗೆ ಪೆಟ್ಟಾಗಿದ್ದು, ರಕ್ತಗಾಯಗಳಾಗಿವೆ. ಈ ವೇಳೆ ಸಹೋದ್ಯೋಗಿ ಮಿತ್ರರು ಮಂಜುನಾಥ್ ಜಿ.ಎನ್ ಅವರನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಆಡಂಬರವಿಲ್ಲದೆ ಸಂವಿಧಾನ ಸಾಕ್ಷಿಯಾಗಿ ಅಂತರ್ಜಾತಿ ವಿವಾಹವಾದ ನವದಂಪತಿ

ಮದುವೆ ಎಂದರೆ ಅಲ್ಲಿ ಆಡಂಬರ, ವೈಭವವಿರುತ್ತದೆ. ಆದರೆ, ಹೊಸಪೇಟೆಯ ಇಲ್ಲೊಂದು ಜೋಡಿ...

ಬಳ್ಳಾರಿ | ವಿಕಲಚೇತನರು ಸರ್ಕಾರಿ ಸೌಲಭ್ಯ ಪಡೆದು ಅಭಿವೃದ್ಧಿಯಾಗಬೇಕು: ಗೋವಿಂದಪ್ಪ

'ವಿಶೇಷಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಬೇಕು' ಎಂದು ಬಳ್ಳಾರಿ...

ಮೈಸೂರು | ಪ್ರೇಮಿಯ ಜೊತೆ ಊರು ತೊರೆದ ಯುವತಿ; ಕುಟುಂಬಸ್ಥರು ಆತ್ಮಹತ್ಯೆ

ಪ್ರೀತಿಸುತ್ತಿದ್ದ ಯುವಕನ ಜೊತೆ ಯುವತಿ ಊರು ತೊರೆದಿದ್ದು, ಮರ್ಯಾದೆ ಹೋಯಿತೆಂದು ನೊಂದ...

ಮೈಸೂರು | ‘ ಬಸವ ಚರಿತ್ರೆ ‘ ಎಂಬುದು ಪ್ರಜಾಪ್ರಭುತ್ವ ಸ್ಥಾಪನೆಯ ಹೋರಾಟವಾಗಿದೆ : ಸಚಿವ ಡಾ. ಹೆಚ್. ಸಿ. ಮಹದೇವಪ್ಪ

ಮೈಸೂರಿನ ಕಲಾಮಂದಿರದಲ್ಲಿ ಇಂದು ಬಸವ ಬಳಗ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ "ಬಸವ...