ತುಮಕೂರು | ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ರೈತರಿಂದ ಪ್ರತಿಭಟನೆ : ತಹಶೀಲ್ದಾರ್ ವರ್ಗಾವಣೆಗೆ ಒತ್ತಾಯ

Date:

Advertisements

ಬಗರ್‌ ಹುಕ್ಕುಂ ಸಮಸ್ಯೆ ಬಗೆಹರಿಸದೆ ರೈತರನ್ನು ಅವಮಾಾನಿಸಿ,  ರೈತರ ಮೇಲೆ ಗೂಂಡಾ ವರ್ತನೆ ತೋರಿದ ಗುಬ್ಬಿ ಶಾಸಕ ಶ್ರೀನಿವಾಸ್  ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಗುಬ್ಬಿ ತಹಶೀಲ್ದಾರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೆಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಪಿಐಎಂ, ಕೆಪಿಆರ್ ಎಸ್, ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಿಪಿಐಎಂ ಪಕ್ಷದರಾಜ್ಯ ಕಾರ್ಯದರ್ಶಿ ಡಾ ಕೆ. ಪ್ರಕಾಶ್‌ ಮಾತನಾಡಿ ಐದು ಬಾರಿ ಶಾಸಕರಾಗಿ ಆಯ್ಕೆಯಾದರು ಬಗರ್ ಹುಕ್ಕುಂ ಸಾಗುವಳಿದಾರರ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವುದರಿಂದ ರೈತರು ಅರ್ಜಿ ಸಲ್ಲಿಸಿಕೊಂಡು  ಭೂಮಿಗಾಗಿ ಅಲೆದಾಡುತ್ತಿದ್ದಾರೆ ಎಂದರು.

ಗುಬ್ಬಿ ತಾಲೂಕು ಕಚೇರಿ ಮುಂದೆ ಮಾರ್ಚ್ 5  ರಂದು ಪ್ರತಿಭಟನಾ ನಿರತ ರೈತರ ಮೇಲೆ ಶಾಸಕ ಶ್ರೀನಿವಾಸ್ ಗೂಂಡಾ ವರ್ತನೆ ತೋರಿರುವುದು ಖಂಡನೀಯ ಎಂದರು.

Advertisements

 ಭೂ ಸುಧಾರಣೆಯ ಹರಿಕಾರರು ಎಂದು ಹೇಳಿಕೋಳ್ಳುವ ಕಾಂಗ್ರೇಸಿಗರೆ ತಮ್ಮ ಪಕ್ಷದ ಶಾಸಕನ ಈ ರೀತಿಯ ವರ್ತನೆಗೆ ಏನು ಹೇಳುತ್ತಿರಿ ಎಂದು ಪ್ರಶ್ನಿಸಿದರು. ರೈತರ ಬಗ್ಗೆ  ಕಾಂಗ್ರೇಸ್ ನೀತಿ ಏನು ಎಂಬುದರ ಬಗ್ಗೆ ಬಹಿರಂಗ ಪಡಿಸಬೇಕು ಎಂದು  ಆಗ್ರಹಿಸಿದರು. 

1001232184

ಸಂಯುಕ್ತ ಹೋರಾಟ -ಕರ್ನಾಟಕದ ಜಿಲ್ಲಾ ಸಂಚಾಲಕ ಸಿ ಯತಿರಾಜು ಮಾತನಾಡಿ ಶಾಸಕರ ವರ್ತನೆ ಒಪ್ಪಲು ಆಗದು. ಅವರು ಗೂಂಡಗಿರಿಯಿಂದ ವರ್ತಿಸಿದ್ದಾರೆ. ರೈತರ ಪ್ರಶ್ನೆಯನ್ನು ನಿಭಾಯಿಸಬೇಕಾದ ತಹಶೀಲ್ದಾರ್ ಅವರು ರಾಜಕೀಯ ಪುಡಾರಿತರ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ಎಐಕೆಎಸ್‌ ಸಂಘಟನೆಯ ಕಂಬೇಗೌಡ  ಮಾತನಾಡಿ ರೈತರ ಪ್ರಶ್ನೆಗಳ ಬಗ್ಗೆ ಜನ ಪ್ರತಿನಿಧಿಗಳು ರೈತರ ಪರ ವಹಿಸಿ ಪರಿಹಾರ ರೂಪಿಸದೆ ಬೆದರಿಸುವ ತಂತ್ರಗಾರಿಕೆ ಸರಿಯಲ್ಲ ಎಂದರು

ಭೂಮಿ ಮತ್ತು ವಸತಿರಹಿತರ ಹೊರಾಟ ಸಮಿತಿ ಜಿಲ್ಲಾ ಸಂಚಾಲಕ  ನಾಗಭೂಷಣ್‌ ಹಂದ್ರಾಳ್  ಮಾತನಾಡಿ ರೈತರನ್ನು ಬೆದರಿಸಿರುವವರ ಮೇಲೆ ದೂರುದಾಖಲು ಮಾಡಬೇಕು. ಜಿಲ್ಲಾ ಪೋಲಿಸ್ ಇಲಾಖೆ ಬಲಾಢ್ಯರ ಮೇಲೆ ದೂರುಗಳನ್ನು ಯಾಕೆ ದಾಖಲಿಸುತ್ತಿಲ್ಲ ಎಂದು ಪ್ರಶ್ನೆಮಾಡಿದರು.

ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ಅರ್.ಎಸ್. ಚನ್ನಬಸಣ್ಣ ಮಾತನಾಡಿ ಗುಬ್ಬಿಯ ಗಂಗಯ್ಯನ ಪಾಳ್ಯದಲ್ಲಿ ಹೋರಾಟ ನಿರತ ರೈತರ ಮೇಲೆ 11ಕ್ಕೂ ಹೆಚ್ಚು ಕೇಸ್ ಗಳನ್ನು ಹಾಕಿಸಿದೆ. ಮಹಿಳೆಯು ಮತ್ತು ರೈತರ ಮೇಲೆ ತಲೆಒಡೆದು ಕೈ- ಕಾಲು ಮುರಿಯಲಾಗಿದೆ. ಅದರು ಸರ್ಕಾರ ಬಡರೈತ ಪರ ವಹಿಸದೆ ಬೆದರಿಸುವುದನ್ನು ರೈತರು ಸಹಿಸಬಾರದು, ಮತ್ತು ಹಿಂದೆ 5 ಲಕ್ಷ ಕೊಟ್ಟರೆ  ಬಗರ್ ಹುಕ್ಕುಂ ಸಾಗುವಳಿ  ಬೇಕಾದವರಿಗೆ ಮಂಜೂರು ಮಾಡಿಿಸುವ ದಲ್ಲಾಳಿಗಳು ಇದ್ದಾರೆ. ಹೋರಾಟದಿಂದ ಅವರ ಅಂಗಡಿ ಮುಚ್ಚಿ ರೈತ ಸಂಘದ ಮೇಲೆ ಸುಳ್ಳು ಅಪಾದನೆ ಮಾಡುತ್ತಿದ್ದಾರೆ ಎಂದರು.

ಸಿಐಟಿಯು ಜಿಲ್ಲಾಅಧ್ಯಕ್ಷ ಸೈಯದ್ ಮುಜೀಬ್, ಕಟ್ಟಡಕಾರ್ಮಿಕರ ಸಂಘದ ಬಿ.ಉಮೇಶ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್. ಕೆ.ಸುಬ್ರಮಣ್ಯ ಮಾತನಾಡಿದರು.

ಪ್ರತಿಭಟನೆಯಲ್ಲಿ ಪ್ರಾಂತರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಜಪ್ಪ , ಬಗರ್ ಹುಕ್ಕುಂ ಸಾಗುವಳಿ ಹೋರಾಟ ಸಮಿತಿ ದೊಡ್ಡನಂಜಪ್ಪ ,ಮಹಿಳಾ ನಾಯಕಿ ರಾಜಮ್ಮ ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೇಶ್, ಕಟ್ಟಡಕಾರ್ಮಿಕ ಸಂಘದ ಕಲೀಲ್‌, ಯುವ ಮುಖಂಡ ಸುಜೀತ್ ನಾಯಕ್, ಜನವಾದಿ ಮಹಿಳಾ ಸಂಘಟನೆಯ ಅರ್‌ಕಲ್ಪನಾ , ಇನ್ಸಾಪ್ ನ ರಫೀಕ್ ಪಾಷ, ರಾಜ್ಯರೈತ ಸಂಘದ ಶಬ್ಬಿರ್‌ ಅಹಮದ್  ಸೇರಿದಂತೆ ಹಲವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X