ತುಮಕೂರು | ಕೆ ಬಿ ಸಿದ್ದಯ್ಯ ಅವರ ಕಾವ್ಯ ಸೆಕ್ಯುಲರ್ ಕಾವ್ಯ: ಅಗ್ರಹಾರ ಕೃಷ್ಣಮೂರ್ತಿ

Date:

Advertisements

ಕಾವ್ಯ‌ ಆಧ್ಯಾತ್ಮಿಕ ಮತ್ತು ರಾಜಕೀಯವಾಗಿರಬೇಕೆಂಬುದು ಕೆ ಬಿ ಸಿದ್ದಯ್ಯ ಅವರ ನಿಲುವಾಗಿತ್ತು. ಹಾಗಾಗಿ ಅವರ ಕಾವ್ಯ ಸೆಕ್ಯುಲರ್ ಕಾವ್ಯ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ತುಮಕೂರು ನಗರದ ಕನ್ನಡ ಭವನದಲ್ಲಿ ಚಲನ ಪ್ರಕಾಶನ ಸಹಕಾರಿ ಮತ್ತು ಕೆ ಬಿ ಗೆಳೆಯರ ಬಳಗದ ವತಿಯಿಂದ ಕೆ ಬಿ ಸಿದ್ದಯ್ಯ ಅವರ ‘ತೊಗಲ ಮಂಟಪ’ ಖಂಡಕಾವ್ಯ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಕೆ ಬಿ ಸಿದ್ದಯ್ಯ ಅವರು ಕೆ ಬಿ ಕಾವ್ಯಕ್ಕೆ ವಿಮರ್ಶಕರು ನ್ಯಾಯ ಒದಗಿಸಿಲ್ಲ. ರವಿಕುಮಾರ್ ನೀಹ ವಿಮರ್ಶೆಯಲ್ಲಿ ಸಿದ್ದಯ್ಯ ಅವರ ಕಾವ್ಯಕ್ಕೆ ನ್ಯಾಯ ಒದಗಿಸಿದ್ದಾರೆ. ಕೆ ಬಿ ಸಿದ್ದಯ್ಯ ಕಾವ್ಯ ರಚನೆಯ ಆರಂಭದಲ್ಲೇ ಭಿನ್ನ ಮಾರ್ಗ ಆಯ್ಕೆ ಮಾಡಿಕೊಂಡಿದ್ದರು. ಅನುಭವ ನೆಲೆಯಲ್ಲಿ ಹುಡುಕಾಟ ನಡೆಸುವ ಮೂಲಕ ಕುಲಮೂಲ ಭಾಷೆ ಬಳಸಿದ್ದಾರೆ. ಕೆ ಬಿ ಕಾವ್ಯ ಹಲವರನ್ನು ಪ್ರಭಾವಿಸಿದೆ” ಎಂದರು.

Advertisements

ರಂಗಕರ್ಮಿ ಕೋಟಾಗನಹಳ್ಳಿ ರಾಮಯ್ಯ ಮಾತನಾಡಿ, “ಕೆ ಬಿ ಸಿದ್ದಯ್ಯ ಕಾವ್ಯದ ಮಣೆಗಾರ. ವಿಮರ್ಶೆ ಮತ್ತು ಸ್ಥಾನಮಾನಗಳನ್ನು ಮೀರುವ ಶಕ್ತಿ ಕೆ ಬಿ ಕಾವ್ಯಕ್ಕಿದೆ” ಎಂದರು.

ಐಜಿಪಿ ರವಿಕಾಂತೇಗೌಡ ಮಾತನಾಡಿ, “ಕೆ ಬಿ ಅವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವಂತಹ ಸಿದ್ದತೆ ಕನ್ನಡದ ಕಾವ್ಯ ವಿಮರ್ಶಕರಿಗೆ ಪ್ರಾಪ್ತವಾಗಿಲ್ಲ. ಕಾವ್ಯ ಮತ್ತು ಕವಿಯ ಜತೆ ವಿಮರ್ಶೆ ನಡೆಯಬೇಕು. ಕೆ ಬಿ ಸಿದ್ದಯ್ಯ ಲೋಕ ನೀತಿಗೆ ವಿರುದ್ಧವಾಗಿ ಯೋಚಿಸಿದವರು” ಎಂದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಾರ್ಮಿಕ ವಿರೋಧಿ ನೀತಿ: ವಾಡಿ ಎಸಿಸಿ ಕಾರ್ಖಾನೆ ಗುತ್ತಿಗೆ ಕಾರ್ಮಿಕರಿಂದ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಕರ್ನಾಟಕದ ದೆಹಲಿ ಪ್ರತಿನಿಧಿ ಟಿ ಬಿ ಜಯಚಂದ್ರ, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ ಎಂ ಪುಟ್ಟಯ್ಯ, ಕವಯತ್ರಿ ಸವಿತಾ ನಾಗಭೂಷಣ್, ಹಿರಿಯ ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ, ಚರಕ ಆಸ್ಪತ್ರೆಯ ಡಾ ಬಸವರಾಜು, ಗಂಗರಾಜಮ್ಮ ಕೆ ಬಿ ಸಿದ್ದಯ್ಯ, ಕೊಟ್ಟಶಂಕರ್ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X