ತುಮಕೂರು | ಎಂ ಎಂ ಕಲ್ಬುರ್ಗಿ ಅವರ ವಿಚಾರ ಎಂದಿಗೂ ಜೀವಂತ : ರಾಯಸಂದ್ರ ರವಿಕುಮಾರ್

Date:

Advertisements

ಎಂ ಎಂ ಕಲ್ಬುರ್ಗಿರವರು 12ನೇ ಶತಮಾನದ ಬಸವಣ್ಣನವರ ವಚನ ಸಾಹಿತ್ಯವನ್ನು ಹುಡುಕಿ ಸತ್ಯಾಂಶವನ್ನು ಜಗತ್ತಿಗೆ ತಿಳಿಸಿದ್ದಕ್ಕೆ ಇದನ್ನು ಸಹಿಸದ ಮೂಲಭೂತವಾದಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ವ್ಯಕ್ತಿಯನ್ನು ಕೊಂದಿರಬಹುದೇ ಹೊರೆತು ವಿಚಾರಗಳನ್ನಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಯುವ ಘಟಕದ ರಾಜ್ಯ ಸಂಚಾಲಕರು ಹಾಗೂ ಭಾರತೀಯ ಶರಣ ಸೇನಾ ತುಮಕೂರು ಘಟಕ ಸಂಚಾಲಕ ರಾಯಸಂದ್ರ ರವಿಕುಮಾರ್ ತಿಳಿಸಿದರು.

ತುಮಕೂರು ನಗರದ ಜಯದೇವ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಭಾರತೀಯ ಶರಣ ಸೇನೆ ವತಿಯಿಂದ ಡಾ. ಎಂ ಎಂ ಕಲ್ಬುರ್ಗಿ ರವರ 9ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಸವಣ್ಣನವರ ಹಾಕಿಕೊಟ್ಟ ಹಾದಿಯಲ್ಲಿ ಕಲ್ಬುರ್ಗಿಯವರು ಸಾಗುತ್ತಿದ್ದರು. ಲಿಂಗಾಯತ ಎಂಬುದು ಜಾತಿಯಲ್ಲ ಅದೊಂದು ಧರ್ಮ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಸಮಾನತೆಯ ಧರ್ಮ ಎಂದು ಹೇಳಿದರು.

ಶರಣಸೇನಾ ಸಂಚಾಲಕ ಹೆಚ್. ಎಲ್. ಕುಮಾರಸ್ವಾಮಿ ಮಾತನಾಡಿ ಕಲಬುರ್ಗಿ ಅವರು ವಚನಸಾಹಿತ್ಯದ ನೈಜ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದವರು. ಸಂಶೋಧನೆ ಹಾಗೂ ಐತಿಹಾಸಿಕ ದಾಖಲೆಯ ಸಮೇತ ನೀಡಿದ ವಿಚಾರಧಾರೆಗಳನ್ನು, ಕನ್ನಡ ನೆಲದಲ್ಲಿ ಕಾಯಕ ಜೀವಿಗಳಿಂದ ಹುಟ್ಟಿದ ಏಕೈಕ ಧರ್ಮ ಅದು ಲಿಂಗಾಯತ ಧರ್ಮ ಎಂಬ ವಿಚಾರಗಳನ್ನ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರಬೇಕು ಎಂದರು.

Advertisements

ಕಲಬುರ್ಗಿ ಅವರು ಕನ್ನಡ ಶಾಸನಗಳ ಹಾಗೂ ವಚನ ಸಾಹಿತ್ಯದ ಸಂಶೋಧನೆಗೆ ಶ್ರಮಿಸಿದ ಅಪಾರ ಕೊಡುಗೆಯನ್ನು ವಿವರಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಉಪನ್ಯಾಸಕ ಬಸವಲಿಂಗಯ್ಯ ಮಾತನಾಡಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನ ಗಳಿಸಬೇಕಾದರೆ ಬಸವಣ್ಣನವರ ವಿಚಾರಧಾರೆಗಳು ಬಹುಮುಖ್ಯ. ಡಾ. ಎಂ ಎಂ ಕಲ್ಬುರ್ಗಿರವರು ವಚನ ಸಾಹಿತ್ಯದಲ್ಲಿರುವ ಸತ್ಯಾಂಶವನ್ನು ಹೊರತೆಗೆದು ಸಮಾಜಕ್ಕೆ ತಿಳಿಸಿದ್ದಾರೆ. ಇತ್ತೀಚಿಗೆ ಕಾಶ್ಮೀರ ಫೈಲ್ ಹೊರಬಂದಿದೆ. ಆದರೆ ಇದಕ್ಕೂ ಮುಖ್ಯವಾಗಿ ಸಮಾಜಕ್ಕೆ ಸತ್ಯ ತಿಳಿಯಬೇಕಾದರೆ ಬಸವಕಲ್ಯಾಣದ ಫೈಲ್ ಬರಬೇಕಿದೆ ಎಂದರು.

WhatsApp Image 2024 08 31 at 11.13.42 PM

ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಮಾತನಾಡಿ ಎಂ ಎಂ ಕಲ್ಬುರ್ಗಿರವರು ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು. ಅವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ ಬಸವಾದಿ ಶರಣರ ವಿಚಾರಧಾರೆಗಳು ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ನಾಗಭೂಷನ್ ಮಾತನಾಡಿ ನಾನು ಲಿಂಗಾಯತ, ನನ್ನ ಧರ್ಮ ಲಿಂಗಾಯತ ಎಂದು ಎದೆ ತಟ್ಟಿ ಹೇಳಬೇಕು. ವಿಶೇಷವಾಗಿ ಯುವಕರು ಲಿಂಗಾಯತ ಧರ್ಮದ ವಿಚಾರಧಾರೆಗಳನ್ನು ಅಧ್ಯಯನ ಮಾಡಬೇಕು. ಲಿಂಗಾಯತ ಧರ್ಮ ಉಳಿಯಬೇಕೆಂದರೆ ಮುಂದಿನ ದಿನಗಳಲ್ಲಿ ನಡೆಯುವ ಜಾತಿ ಹಾಗೂ ಜನಗಣತಿಯಲ್ಲಿ ಧರ್ಮ ಅಥವಾ ಜಾತಿಯ ಕಲಾಂ ನಲ್ಲಿ ಲಿಂಗಾಯತ ಎಂಬುದಾಗಿ ನಮೂದಿಸಿ ಎಂದು ಹೇಳಿದರು

ಈ ಸಂದರ್ಭದಲ್ಲಿ ರಾಜೇಶ್ವರಿ ಶಿವಾನಂದ, ಸಿದ್ದು ಬಿ.ಎಸ್. ಸೂರನಹಳ್ಳಿ, ಬಸವರಾಜು, ದೇವರಾಜು ಕೆ, ಅಭಿಷೇಕ್ ಹಿರೇಮಠ್, ಗೋಪಾಲಕೃಷ್ಣ, ಮತ್ತಿತರ ಭಾರತೀಯ ಶರಣಸೇನಾ ಸದಸ್ಯರು ಇದ್ದರು

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X