ತುಮಕೂರು | ಗಾಂಧೀಜಿ ಕುರಿತು ಸುಳ್ಳುಗಳನ್ನು ಬಿತ್ತಲಾಗುತ್ತಿದೆ: ರವಿಕುಮಾರ್‌ ನೀಹ

Date:

Advertisements

ಗಾಂಧಿಯವರನ್ನು ವಿರೋಧಿಸುವ ಶಕ್ತಿಗಳು ಇಂದು ವಿಜೃಂಭಿಸುತ್ತಿವೆ. ಯುವಕರಲ್ಲಿ ಗಾಂಧೀಜಿ ಕುರಿತು ಹಲವು ಸುಳ್ಳುಗಳನ್ನು ಬಿತ್ತಲಾಗುತ್ತಿದೆ. ಇಂತಹ ವಿಷಮ ಪರಿಸ್ಥಿಯಲ್ಲಿ ಗಾಂಧಿಯನ್ನು ಯುವಜನತೆಗೆ ತಲುಪಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಲೇಖಕ ರವಿಕುಮಾರ್ ನೀಹ ಹೇಳಿದರು.

ತುಮಕೂರಿನ ಓಶೋ ಧ್ಯಾನ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ನಡೆದ ‘ಯುವಜನತೆಗೆ ಬೇಕಾದ ಗಾಂಧಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಗಾಂಧಿಯ ಯುದ್ಧ ವಿರೋಧಿ ನೀತಿ, ಅಪರಿಗ್ರಹ, ಅಹಿಂಸೆಗಳು, ಜೀವ ಪರವಾದ ಸಮಾನತೆಯ ಆಶಯವುಳ್ಳ ಮಾನವೀಯ ಮೌಲ್ಯಗಳನ್ನೇ ಉಸಿರಾಡುತ್ತಿವೆ. ಇವುಗಳನ್ನು ಕುರಿತು ಯುವಜನತೆಗೆ ಅರಿವು ಮೂಡಿಸಬೇಕಿದೆ. ಗಾಂಧಿ ನಮಗೆ ಹಲವು ವಿಚಾರಗಳಲ್ಲಿ ಮುಖ್ಯವಾಗುತ್ತಾರೆ. ಅವರು ಸವೆಸಿದ ಹಾದಿ ಹಲವು ಪ್ರಯೋಗಗಳಿಂದ ಕೂಡಿದ್ದು, ಈ ಸತ್ಯದ ಪ್ರಯೋಗಗಳಿಂದಲೇ ಮೋಹನದಾಸರು ಗಾಂಧಿಯಾದದ್ದು. ಇಂದು ಇಡೀ ಜಗತ್ತು ಭಾರತವನ್ನು ನೋಡುತ್ತಿರುವುದು, ಬುದ್ಧ, ಗಾಂಧಿ ಮತ್ತು ಅಂಬೇಡ್ಕರರ ಕಾರಣಕ್ಕಾಗಿ. ಗಾಂಧಿ ಒಂದು ವ್ಯಕ್ತಿಯಲ್ಲ, ಆಗುತ್ತಿರುವ ಕ್ರಿಯೆ. ಗಾಂಧಿಯವರ ಅಹಿಂಸೆ, ಅಪರಿಗ್ರಹ, ಸರಳ ಜೀವನ, ಸ್ವಚ್ಛತೆಯಂತಹ ವಿಚಾರಗಳು ಇಂದಿಗೆ ಹೆಚ್ಚು ಪ್ರಸ್ತುತ” ಎಂದರು.

Advertisements

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, “ಇತ್ತೀಚೆಗೆ ಯುವಜನತೆ ಗಾಂಧಿಯವರಿಂದ ದೂರವಾಗುತ್ತಿದ್ದಾರೆ. ಇಡೀ ಮನುಕುಲಕ್ಕೆ, ಸರ್ವಕಾಲಕ್ಕೂ ಪ್ರಸ್ತುತವಾಗುವ ಚಿಂತನೆಗಳನ್ನು, ಸತ್ಯ, ಅಹಿಂಸೆ, ಪ್ರೀತಿಯಂತಹ ಸಶಕ್ತ ಮಾರ್ಗಗಳನ್ನು ಗಾಂಧೀಜಿ ನಮಗೆ ನೀಡಿದ್ದಾರೆ. ಗಾಂಧಿಯವರ ಬದುಕು ಪ್ರಕೃತಿ ಸಹಜವಾದದ್ದು. ಎಲ್ಲವನ್ನೂ ಸಮತೆಯಿಂದ, ಸಮಚಿತ್ತದಿಂದ ನೋಡುವುದನ್ನು ಗಾಂಧಿ ನಮಗೆ ಕಲಿಸಿದ್ದಾರೆ. ನಮಗೆ ಅವಕಾಶ ಸಿಕ್ಕಾಗಲೆಲ್ಲ ಮುಂದಿನ ತಲೆಮಾರಿಗೆ ಗಾಂಧಿಯವರನ್ನು ತಲುಪಿಸುವ ಕಾರ್ಯವನ್ನು ಮಾಡಬೇಕು” ಎಂದರು.

 ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾ ಜಂಬೂಸವಾರಿ; 49 ಸ್ತಬ್ಧ ಚಿತ್ರಗಳ ಪ್ರದರ್ಶನ

ಕಾರ್ಯಕ್ರಮದಲ್ಲಿ ವೀರಣ್ಣ ಮಡಿವಾಳ, ಡಾ ಪ್ರಿಯಾಂಕ ಎಂ ಜಿ, ಮರಿಯಂಬೀ, ಗಾಯಕಿ ಪಾರ್ವತಮ್ಮ ರಾಜ್‌ಕುಮಾರ್, ಡಾ ರಜನಿ, ಡಾ ಮೂರ್ತಿ, ವಿಚಾರ ಮಂಟಪ ಬಳಗದ ವರುಣ್ ರಾಜ್, ನವೀನ್ ಕುಮಾರ್ ಪಿ ಆರ್, ಮುತ್ತುರಾಜು, ಸುರೇಶ್ ಮುಂತಾದವರ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X