ತುಮಕೂರು | ಎಲ್ಲ ಜಾತಿಗಳ ಪರವಾಗಿ ಹೋರಾಟ ಸಾಗಿದೆ: ದಸಂಸ ಸಂಚಾಲಕ

Date:

Advertisements

ಪ್ರೊ‌. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ 50ವರ್ಷದ ಸಂಭ್ರಮದಲ್ಲಿದೆ. ಬುದ್ಧ, ಬಸವ, ಅಂಬೇಡ್ಕರ್ ರಚಿಸಿ ಸ್ಥಾಪಿಸಿದ ಸಂವಿಧಾನದಡಿಯಲ್ಲಿ ಶೋಷಿತ, ದಮನಿತ, ದಲಿತರ ಪರವಾಗಿ ಸಾಮಾಜಿಕ ನ್ಯಾಯ ಒದಗಿಸಿ ಎಲ್ಲಾ ಜಾತಿಗಳ ಪರವಾಗಿ ಹೋರಾಟ ನಡೆಸುತ್ತಾ ಸಮಿತಿ ಸಾಗಿದೆ ಎಂದು ದಸಂಸ ತುಮಕೂರು ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಹೇಳಿದರು.

ತುಮಕೂರಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಿಪಟೂರಿನಲ್ಲಿ ಸ್ಥಾಪಿತವಾಗಿ 46ವರ್ಷ ತುಂಬಿದೆ. ಶೋಷಿತರಾ, ಸಾಮಾಜಿಕ ನ್ಯಾಯಕ್ಕಾಗಿ ಸಾವಿರಾರು ಕಿ.ಮೀ. ಪಾದಯಾತ್ರೆ ನಡೆಸಿ ನ್ಯಾಯ ದೊರಕಿಸಿ ಕೊಟ್ಟಿದ್ದೇವೆ. ಸಮಿತಿಯ ಆದೇಶದಂತೆ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ ಎಂದರು.

ಸಾಮಾಜಿಕ ನ್ಯಾಯಗಳಿಂದ ವಂಚಿತರಾದ ಯಾವುದೇ ಸಮುದಾಯದ ಪರ ಹೋರಾಟ ಮಾಡಲು ಸಮಿತಿ ಸಿದ್ಧವಿದೆ. ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರಕ್ಕೆ ಧನವಂತರು ದಲಿತರನ್ನು ಜಾತಿನಿಂದನೆ ಪ್ರಕರಣಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ದಲಿತರು ಎಚ್ಚೆತ್ತುಕೊಳ್ಳಬೇಕು, ಸಮಿತಿ ನ್ಯಾಯದ ಪರವಿರುತ್ತದೆ ಎಂದರು.

Advertisements

ಕರ್ನಾಟಕ ದಸಂಸ ಸ್ಥಾಪಿತವಾಗಿ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ ಈ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಮೊದಲ ಬಾರಿಗೆ ತಾಲೂಕು ಸಂಚಾಲಕನಾಗಿ ಆಯ್ಕೆಯಾದಾಗ ಪಾದಯಾತ್ರೆಯ ಮುಖಾಂತರ, ಹೋರಾಟ ನಡೆಸಿ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿದ್ದೇವು ಎಂದರು.

ತಿಪಟೂರು ತಾಲೂಕು ಸಂಚಾಲಕರಾಗಿ ಮೋಹನ್ ಜಕ್ಕನಹಳ್ಳಿ, ಸಂಘಟನಾ ಸಂಚಾಲಕರಾಗಿ ಮಂಜುನಾಥ್ ಹರಚನಹಳ್ಳಿ, ರಂಗಸ್ವಾಮಿ ಹುಲಿಹಳ್ಳಿ, ಉಗ್ರ ನರಸಿಂಹಯ್ಯ ಯಗಚಿಕಟ್ಟೆ, ಚಂದ್ರಶೇಖರ್ ಗಡಬನಹಳ್ಳಿ, ಚಂದ್ರಶೇಖರ್ ಕರಡಾಳು, ಸುರೇಶ್ ಕರಿಕೆರೆ, ಲೋಕೇಶ್ ಚಿಗ್ಗಾವಿ, ರವೀಶ್ ಮಂಜುನಾಥ್ ಪುರ, ಮೋಹನ್ ಬಾಬು ಬೈರಾಪುರ, ಖಜಾಂಚಿಯಾಗಿ ರಮೇಶ್ ಶಿವಪುರ, ಕಾನೂನು ಸಲಹೆಗಾರರಾಗಿ ವೆಂಕಟೇಶ್, ತಿಪಟೂರು, ಮಹಿಳಾ ಸಂಚಾಲಕಿಯಾಗಿ ಧನಲಕ್ಷ್ಮಿ ಕೊನೇಹಳ್ಳಿ, ಸಂಘಟನಾ ಸಂಚಾಲಕರಾಗಿ ನಂದಿನಿ, ಮಡೆ ನೂರು, ಶಾರದಾ ಕಲ್ಲು ಶೆಟ್ಟಿಹಳ್ಳಿ, ನಗರ ಸಂಚಾಲಕರಾಗಿ ರಮೇಶ್ ಮಾರನಗೆರೆ ನಗರ ಸಂಘಟನಾ ಸಂಚಾಲಕರಾಗಿ, ಮಂಜುನಾಥ್ ಮಾರನಗೆರೆ, ಸಂದೀಪ್ ಮಣಿಕಂಠ ಮುನ್ನು ಕಂಚಾಘಟ್ಟ ಮನೋಜ್ ಲೋಕೇಶ್, ಕಸಬಾ ಹೋಬಳಿ ಸಂಚಾಲಕರಾಗಿ ಗಿರೀಶ್ ಕುಮಾರ್ ನಾಗಹಳ್ಳಿ, ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ನಾಗತಿಹಳ್ಳಿ ಕೃಷ್ಣಮೂರ್ತಿ, ಶಿವಲಿಂಗಪ್ಪ, ಮುರುಳಿ, ಮಧುಸೂಧನ್, ಧನಲಕ್ಷ್ಮಿ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

Download Eedina App Android / iOS

X