ಉಡುಪಿ | ಪೋಪ್ ಫ್ರಾನ್ಸಿಸ್ ಬ್ಯಾನರ್‌ಗೆ ಹಾನಿ, ಅಂಬೇಡ್ಕರ್ ಯುವಸೇನೆ ಖಂಡನೆ

Date:

Advertisements

ಇತ್ತೀಚೆಗೆ ನಿಧನರಾದ ಜಗತ್ತಿನ ಮಹಾಮಾನವತವಾದಿ ಪಾಪಾ ಫೋಪ್ ಫ್ರಾನ್ಸಿಸ್‌ರವರ ಆತ್ಮಕ್ಕೆ ಚಿರಶಾಂತಿ ಕೋರಿ ಹಾಕಿರುವ ಫ್ಲಕ್ಸ್ ಬ್ಯಾನರಿಗೆ ಹಾನಿಮಾಡಿರುವ ಘಟನೆಯನ್ನು ಅಂಬೇಡ್ಕರ್ ಯುವಸೇನೆ ಖಂಡಿಸಿದೆ.

ಮಲ್ಪೆ ವಡಭಾಂಡೇಶ್ವರದ ಪೊಲೀಸ್ ಠಾಣೆಯ ಎದುರಿಗೆ ಹಾಕಿರುವ ಈ ಬ್ಯಾನರನ್ನು ಅದಿತ್ಯವಾರ ಮಧ್ಯರಾತ್ರಿ ಕೆಲವು ಸಮಾಜ ಘಾತುಕ ದುಷ್ಕರ್ಮಿಗಳು ಬ್ಯಾನರಿನ ಹಿಂಬದಿಯಿಂದ ಬಂದು ಹರಿದು ಹಾಕುತ್ತಿರುವುದು ಪಕ್ಕದ ಸಿ.ಸಿ.ಕ್ಯಾಮರದಲ್ಲಿ ದಾಖಲಾಗಿದೆ.

ಮಲ್ಪೆ ಪೊಲೀಸರು ಜಗತ್ತಿನ ಧರ್ಮಗುರುವಿನ ಭಾವಚಿತ್ರವನ್ನು ಅಮಾನುಷ್ಯವಾಗಿ ಹರಿದುಹಾಕಿದ್ದರೂ ಯಾವುದೇ ಕಾನೂನುಕ್ರಮ ಕೈಗೊಳ್ಳದಿರುವುದು ದುಷ್ಟಶಕ್ತಿಗೆ ಬೆಂಬಲಿಸಿದ್ದಂತಿದೆ.

Advertisements

ಬ್ಯಾನರಿಗೆ ಹಾನಿಮಾಡಿರುವ ಬಗ್ಗೆ ಸಂಬಂಧಪಟ್ಟವರು ದೂರು ನೀಡದಿದ್ದರೂ, ಪೊಲೀಸ್ ಠಾಣೆಯ ಎದಯರೇ ಈರೀತಿ ದುಷ್ಕೃತ್ಯ ನಡೆದರೂ ಮೌನವಾಗಿರುವುದು ಅನೇಕ ಶಂಸಯಕ್ಕೆ ಎಡೆಮಾಡಿದೆ.

ಮಲ್ಪೆ ಪೊಲೀಸರು ಸುಮೊಟೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ವಡಭಾಂಡೇಶ್ವರದ ಸುತ್ತುಮುತ್ತಲಿನ ಸಿ.ಸಿ.ಕ್ಯಾಮಾರವನ್ನು ತಪಾಸನೆಮಾಡಿದರೆ ಆರೋಪಿಗಳನ್ನು ಪತ್ತೆಹಚ್ಚಬಹುದಾದರೂ ಈ ಬಗ್ಗೆ ನಿರ್ಲಕ್ಷವಹಿಸಿರುವುದು ಖಂಡನೀಯ ಎಂದು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಅಲ್ಲ ಪುಣ್ಯಾತ್ಮ ಅಂಬೇಡ್ಕರ್ ಸಂಘಟನೆ ಮತ್ತು ಕ್ರೈಸ್ತ ಗುರು ಪೋಪ್ ಗೂ ಯಂತ ಸಂಬಂಧ ಮರಾಯ? ಪೋಪ್ ಕೇವಲ ಕ್ರೈಸ್ತ ಧರ್ಮದ ಗುರು ಮಾತ್ರ. ಜಗತ್ತಿನ ಧರ್ಮ ಗುರುವಲ್ಲ.ಯಾಕಂದರೆ ಜಗತ್ತಿನಲ್ಲಿ ಹಲವು ಧರ್ಮಗಳಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X