ಉಡುಪಿ | 15 ದಿನದಲ್ಲಿ ತಯಾರಿಸಿದ ಸಂವಿಧಾನ ಒಪ್ಪಲು ಸಾಧ್ಯವಿಲ್ಲ – ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ

Date:

Advertisements

ನಾನು ಧೈರ್ಯದಿಂದ ಇದ್ದೀನಿ ಹೊಸ ಸಂವಿಧಾನ ಆಗಲು ಸಾಧ್ಯವೇ ಇಲ್ಲ ಎಂದು, ಹೊಸ ಸಂವಿಧಾನ ಅವರಿಗೋಸ್ಕರ ಬರೆದು ಕೊಂಡಿರಬಹುದು ಅಷ್ಟೇ ನಮಗಾಗಿ ಅದನ್ನು ಅನುಷ್ಠಾನ ಮಾಡಲು ಆಗುವುದಿಲ್ಲ ಮತ್ತು ಆಗಲು ನಾವು ಬಿಡುವುದಿಲ್ಲ. 15 ದಿನದಲ್ಲಿ ಹತ್ತು ಜನ ಕುಳಿತುಕೊಂಡು ತಯಾರಿಸಿದ ಸಂವಿಧಾನ ಒಪ್ಪಲು ಸಾಧ್ಯವೇ ಇಲ್ಲ ಹೊಸ ಸಂವಿಧಾನ ತರಲು ಹೊರಟರೆ ಅದಕ್ಕೆ ವಿರೋಧ ಮಾಡಲು ಈಗಿನಿಂದಲೇ ಪ್ರಾರಂಭ ಮಾಡೋಣ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು

ಅವರು ಇಂದು ಉಡುಪಿಯ ಹಿರಿಯಡ್ಕದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದ ಗಾಂಧಿ ಭಾರತ ಬೃಹತ್ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

1004296000

ಮುಂದುವರೆದು ಮಾತನಾಡಿದ ಅವರು ನಮಗೆ ಗೌರವವಿರುವ ಸಂವಿಧಾನ ನಮಗೆ ಬೇಕು ಎಂದು ಹೇಳುವವರು ಇದನ್ನು ತಿಳಿದುಕೊಳ್ಳಬೇಕು ಭಾರತದ ಸಂವಿಧಾನ ಏನು ಗೌರವ ಕಟ್ಟಿದೆ ಅದಕ್ಕಿಂತಲೂ ದೊಡ್ಡ ಗೌರವನ್ಬು ಕೊಟ್ಟ ಸಂವಿಧಾನ ಬೇರೊಂದಿಲ್ಲ. ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿದಾಗಲೆ ಹೇಳಿದ್ದರು ಈ ಸಂವಿಧಾನದ ವಿಷಯದಲ್ಲಿ ಗೊಂದಲ ಎಬ್ಬಿಸುವವರು ಇರುತ್ತಾರೆ ಆಗಲು ಇದ್ದರೂ ಈಗಲೂ ಇದ್ದಾರೆ ಮುಂದೆಯೂ ಇರುತ್ತಾರೆ ಇಡೀ ಸಂವಿಧಾನವೇ ಜಾತ್ಯಾತೀತತೆ ಭಾರತಕ್ಕೆ ಹೆಸರು ಬಂದದ್ದೆ ಜಾತ್ಯಾತೀತತೆಯಿಂದ ಪ್ರತಿಯೊಬ್ಬರೂ ಇತಿಹಾಸವನ್ನು ತಿಳಿಯಬೇಕು ಓದುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

Advertisements

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಿಂದು ರಾಷ್ಟ್ರದ ಸಂವಿಧಾನದ ತಯಾರಾಗಿದೆ ಎಂದು ಹೇಳಲಾಗುತ್ತಿದೆ. ನಮ್ಮ ಸಂವಿಧಾನವನ್ನು ಉಳಿಸುವ ಅವಕಾಶ ಬಂದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಹೋರಾಟಕ್ಕೂ ತಯಾರಾಗಬೇಕು ಎಂದು‌ ಹೇಳಿದರು.

1004296002

ಕಾಂಗ್ರೆಸ್ ನ ಯುವ ಮುಖಂಡ ಹಾಗೂ ಕೆಪಿಸಿಸಿ ವಕ್ತಾರರಾದ ನಿಕೀತ್ ರಾಜ್ ಮೌರ್ಯ ಹಾಗೂ ಸುಧೀರ್ ಕುಮಾರ್ ಮುರುಳಿ ಮುಖ್ಯ ಭಾಷಣ ಮಾಡಿದರು. ಉಡುಪಿ ಕಾಂಗ್ರೆಸ್ ನ ಹಿರಿಯ ಮುಖಂಡ ಜಯಂತ್ ರಾವ್ ಎಲ್ಲರನ್ನೂ ಸ್ವಾಗತಿಸಿದರು, ಕಾಂಗ್ರೆಸ್ ಮುಖಂಡರುಗಳಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಗೋಪಾಲ ಪೂಜಾರಿ, ಅಶೋಕ್ ಕೊಡವೂರು, ವಿರೋನಿಕ ಕರ್ನೇಲಿಯೂ ಮುಂತಾದವರು ಉಪಸ್ಥಿತರಿದ್ದರು. ನಾಗೇಶ್ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

Download Eedina App Android / iOS

X