ನವ ಉದಾರವಾದಿ ಆರ್ಥಿಕ ನೀತಿಗಳು ಈ ದೇಶದ ಸಾಮಾನ್ಯ ಜನತೆಯನ್ನು ಬಡತನಕ್ಕೆ ದೂಡಿದ್ದು, ಇದರ ಲಾಭಗಳನ್ನು ದೊಡ್ಡ ಬಂಡವಾಳಗಾರರು ಪಡೆಯುತ್ತಿದ್ದಾರೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು.
ಕುಂದಾಪುರದ ಹೆಂಚು ಕಾರ್ಮಿಕರ ಭವನದಲ್ಲಿ ಭನುವಾರ ಕುಂದಾಪುರ ವಲಯ ಸಿಪಿಐ 4ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಬಂಡವಾಳದಾರರು ಹೆಚ್ಚಿನ ಲಾಭ ಪಡೆಯುತ್ತಿರುವುದರಿಂದ ಸಂಪತ್ತಿನ ಅಸಮಾನ ಹಂಚಿಕೆ ತೀವ್ರ ಹೆಚ್ಚಳವಾಗುತ್ತಿರುವುದನ್ನು ಕಾಣಬಹುದಾಗಿದೆ” ಎಂದರು.
“ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುತ್ತಿರುವ ಕಾರ್ಮಿಕನ ವೇತನ ಹಾಗೂ ಕಾರ್ಮಿಕರನ್ನು ದುಡಿಸುವ ಮುಖ್ಯಸ್ಥರ ವೇತನಗಳಲ್ಲಿ ಇದೇ ಕಾರಣಕ್ಕೆ ಅಜಗಜಾಂತರ ವ್ಯತ್ಯಾಸಗಳಿವೆ ಎಂಬ ಅಂಶಗಳನ್ನು ಇತ್ತೀಚಿನ ವರದಿಗಳು ಹೇಳುತ್ತಿವೆ. ಈ ಅಸಮಾನತೆಗಳನ್ನು ಸಿಪಿಎಂ ವಿರೋಧಿಸುತ್ತದೆ. ಮಾತ್ರವಲ್ಲದೆ ಅಸಮಾತೆ ಕೊನೆಗಾಣಿಸುವರೆಗೆ ಸಿಪಿಎಂ ಪಕ್ಷ ನಿರಂತರ ಹೋರಾಟ ನಡೆಸುತ್ತದೆ” ಎಂದು ಹೇಳಿದರು.
ಸಮ್ಮೇಳನದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಿಪಿಐ(ಎಂ) ಹಿರಿಯ ಮುಖಂಡ ವಿ ನರಸಿಂಹ ಧ್ವಜಾರೋಹಣ ನೆರವೇರಿಸಿದರು.
ಪಕ್ಷದ ಕಾರ್ಯದರ್ಶಿ ಎಚ್ ನರಸಿಂಹ ಮೂರು ವರ್ಷಗಳ ಕರಡು ವರದಿ ಮಂಡಿಸಿದರು. ವರದಿ ಮೇಲೆ ಪ್ರತಿನಿಧಿಗಳು ಚರ್ಚಿಸಿ ಅಂಗೀಕಾರ ಮಾಡಿದರು. ಶ್ರದ್ಧಾಂಜಲಿ ಠರಾವು ಗಣೇಶ್ ಮಂಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ʼದೂಡಾ ಕಚೇರಿʼ ಉದ್ಘಾಟನೆ; ಆಹ್ವಾನ ನೀಡದ ಆಯುಕ್ತರಿಗೆ ಶಾಸಕ ಬಿ ಪಿ ಹರೀಶ್ ತರಾಟೆ
ಸಮ್ಮೇಳನ ಕುಂದಾಪುರ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ನಿರ್ಣಯಗಳನ್ನು ಕೈಗೊಂಡಿತು. ಮುಂದಿನ ಮೂರು ವರ್ಷದ ಅವಧಿಗೆ ನೂತನ ತಾಲೂಕು ಸಮಿತಿಯನ್ನು ಸಮ್ಮೇಳನ ಆಯ್ಕೆ ಮಾಡಿತು. ನೂತನ ಸಮಿತಿಯು ಕುಂದಾಪುರ ತಾಲೂಕು ಸಮಿತಿಗೆ ಕಾರ್ಯದರ್ಶಿಯಾಗಿ ಚಂದ್ರಶೇಖರ ವಿ ಅವರನ್ನು ಆಯ್ಕೆ ಮಾಡಿತು.