ಉಡುಪಿ | ಕೋಮು ಗಲಭೆ ಎಂದಾಗ ನೀವು ಹಿಂದೂಗಳ ತಲೆಗೆ ಕೋಮು ಬಣ್ಣ ಕಟ್ಟಬೇಡಿ

Date:

Advertisements

ಯಶ್ಪಾಲ್ ಸುವರ್ಣ ರಿಂದ ಬ್ರ್ಯಾಂಡ್ ಉಡುಪಿ ಮಾಡಲು ಸಾಧ್ಯವಿಲ್ಲ, ಉಡುಪಿ ಶತಮಾನದ ದಿನಗಳಿಂದ ಬ್ರ್ಯಾಂಡ್ ಆಗಿಯೇ ಇದೆ, ಈಗ ಉಡುಪಿ ಶಾಸಕರು ಬ್ಯಾಂಕ್ ಪೆಡರೇಷನ್ ಎಲ್ಲಾ ಕೊಳ್ಳೆ ಹೊಡೆದು ಬ್ರ್ಯಾಂಡ್ ಆಗಲು ಹೊರಟಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳ್ಳರು ಖದೀಮರಿಗೆ ಮಾತ್ರ ಇಂತಹ ನಿಗ್ರಹ ಪಡೆಗಳು ಬಂದರೆ ಬಯವಾಗುತ್ತದೆ, ಯಶ್ಪಾಲ್ ಸುವರ್ಣ ಆ ಗುಂಪಿಗೆ ಸೇರಿ ಕೊಂಡಿರಬಹುದು ಹಾಗಾಗಿ ಈ ರೀತಿ ಕಳವಳ ಎಂದಿದ್ದಾರೆ.

ಕೋಮು ನಿಗ್ರಹ ಪಡೆಯಿಂದ ಜಿಲ್ಲೆಯ ಜನತೆ ಶಾಂತಿ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸರಕಾರ ಈ ನಿರ್ಧಾರ ಮಾಡಿದೆ, ಸರಕಾರದ ಒಳ್ಳೆಯ ಕಾರ್ಯಕ್ರಮವನ್ನು ಅಭಿನಂದಿಸಲು ಸಾಧ್ಯವಾಗದೆ, ಈ ರೀತಿಯ ಹತಾಶೆಯ ಹೇಳಿಕೆಯನ್ನು ಉಡುಪಿ ಶಾಸಕರು ಹೇಳಿದ್ದಾರೆ.

Advertisements

ಕೋಮು ಗಲಭೆ ಎಂದಾಗ ನೀವು ಹಿಂದೂಗಳ ತಲೆಗೆ ಕೋಮು ಬಣ್ಣ ಕಟ್ಟಬೇಡಿ ಉಡುಪಿ ಶಾಸಕರೇ, ಯಾವುದೇ ಕೋಮಿನ ವ್ಯಕ್ತಿಯಾಗಿರಲಿ ಕೋಮು ಸಂಘರ್ಷ ಸೃಷ್ಟಿ ಮಾಡಿದರೆ “ಕೋಮು ನಿಗ್ರಹ ಪಡೆ “ಅವರ ಕೆಲಸ ಮಾಡುತ್ತಾರೆ,” ಸರಕಾರದ ಕೋಮು ನಿಗ್ರಹ ಪಡೆ “ಅಂದಾಗ ಅದು ಸಾರ್ವಜನಿಕರನ್ನು ಬಂಧಿಸುವುದಕ್ಕಲ್ಲ, ಸಮಾಜದಲ್ಲಿ ವಿಷ ಬೀಜ ಬಿತ್ತಿ ಜಾತಿ ಜಾತಿಗಳ ಮಧ್ಯೆ ಬಿನ್ನಾಭಿಪ್ರಾಯ ಮೂಡಿಸಿ ಪ್ರಚೋದನೆ ಮಾಡುವವರನ್ನು, ಸೌಹಾರ್ದತೆ ಹಾಳುಮಾಡುವವರ ವಿರುದ್ಧ ಈ ನಿಗ್ರಹ ಪಡೆಯನ್ನು ರಚಿಸಿದ್ದಾರೆ, “ಗುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳೋದು ಯಾಕೆ ಶಾಸಕರೇ ” ಎಂದು ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X