ಉಡುಪಿ | ಪ್ರವೀಣ್ ಪೂಜಾರಿಯನ್ನು ಕೊಂದಾಗ ಉಡುಪಿಯ ಘನತೆಗೆ ಧಕ್ಕೆ ಆಗಿಲ್ವಾ ?

Date:

Advertisements
Bose Military School
Advertisements
Bose Military School

ಅಂದು ಆದಿ ಉಡುಪಿಯಲ್ಲಿ ದನ ಕದ್ದರೆಂಬ ಕ್ಷುಲ್ಲಕ ಕಾರಣನೀಡಿ ಹಾಜಬ್ಬ ಮತ್ತು ಹಸನಬ್ಬರನ್ನು 2004 ರಲ್ಲಿ ಬೆತ್ತಲೆ ಗೊಳಿಸಿ ಥಳಿಸಿದಾಗಲೇ ಬ್ರಾಂಡ್ ಉಡುಪಿಯ ಘನತೆಗೆ ಧಕ್ಕೆ ಆಗಿದೆ. ಆನಂತರ ಸರಣಿ ಕೋಮುವಾದಿ ಘಟನೆಗಳು ಉಡುಪಿಯ ಘನತೆಯನ್ನು ಹರಾಜು ಹಾಕಿದ್ದಾವೆ, ಸರಿಪಡಿಸಲಾಗದ ಧಕ್ಕೆಯನ್ನುಂಟು ಮಾಡಿದ್ದಾವೆ.
ಕೊಕ್ಕರ್ಣೆ ಪಾದೇ ಮಠದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತ ಪ್ರವೀಣ ಪೂಜಾರಿಯನ್ನು ಟೆಂಪೋದಲ್ಲಿ ದನಗಳನ್ನು ಬಾಡಿಗೆ ಮಾಡುವಾಗ ನಿಮ್ಮದೇ ಪಕ್ಷದ ಕಾರ್ಯಕರ್ತರು ಹೊಡೆದು ಕೊಂದರಲ್ಲಾ ಆಗ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ , ಒಂದು ಧರ್ಮದ ಸಂಪ್ರದಾಯ, ಆಚರಣೆಗೆ ಅಡ್ಡಿಪಡಿಸಿ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಹಾಗಿಲ್ಲಾ ಎಂದು ಹುಯಿಲೆಬ್ಬಿಸಿ ಇಡೀ ವಿಶ್ವದಲ್ಲೇ ಉಡುಪಿ ತಲೆ ತಗ್ಗಿಸುವಂತೆ ಮಾಡಿ, ಆ ವಿದ್ಯಾರ್ಥಿಗಳ ಭವಿಷ್ಯಕ್ಕೇ ಕೊಳ್ಳಿ ಇಟ್ಟೀರಲ್ಲಾ ಆಗ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ? ಮೊನ್ನೆ ಮೊನ್ನೆಯಷ್ಟೇ ಮೀನು ಕದ್ದರೆಂಬ ಸಣ್ಣ ಕಾರಣಕ್ಕೆ ಒಬ್ಬ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಸಾರ್ವಜನಿಕವಾಗಿ ವಿಡಿಯೋ ಮಾಡುತ್ತಾ ಹೊಡೆದರಲ್ಲಾ ಆಗ ಉಡುಪಿಯ ಘನತೆಗೆ ಧಕ್ಕೆ ಬರಲಿಲ್ಲವೇ? ಅದೂ ಇರಲೀ ಒಬ್ಬ ಜನ ಪ್ರತಿನಿಧಿಯಾಗಿ ಅದೇ ಹಲ್ಲೆಗೊಳಗಾದ ಮಹಿಳೆಯನ್ನು ಕೇಸ್ ವಾಪಾಸು ಪಡೆಯುವಂತೆ ಒತ್ತಾಯಿಸಿ ಇಡೀ ಸಮೂದಾಯವನ್ನೇ ಎತ್ತಿಕಟ್ಟಿ ಉಡುಪಿ ಜಿಲ್ಲಾಧಿಕಾರಿಯವರ ಕಛೇರಿ ಎದುರು ಮೆರವಣಿಗೆ ನಡೆಸಿ ಸಂತ್ರಸ್ತ ಮಹಿಳೆಯಿಂದಲೇ ಕೇಸು ವಾಪಾಸು ಪಡೆಯುವ ಮನವಿ ಕೊಡಿಸಿದಿರಲ್ಲಾ ಆಗ ಅಷ್ಟ ಮಠಗಳ ತವರೂರಾದಾ ಕನಕದಾಸರ ಭಕ್ತಿಗೆ ಮೆಚ್ಚಿ ತಿರುಗಿ ನಿಂತ ಕ್ರಷ್ಣ ನೆಲೆನಿಂತಿರುವ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ. ಈಗ ಹೇಳಿ ಉಡುಪಿಯ ಘನತೆಗೆ ಧಕ್ಕೆ ತಂದವರು ಯಾರು? ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ದಲಿತರ ಹೆಸರಿನಲ್ಲಿ ಸಂಘಟನೆ ಮಾಡಿಕೊಳ್ಳುವ ಬದಲು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ .ಉತ್ತಮ ಭವಿಷ್ಯವಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಕಾಲ್ತುಳಿತಕ್ಕೆ ಕಾಂಗ್ರೆಸ್ ಸರ್ಕಾರ ನೇರ ಹೊಣೆ : ಬಿಜೆಪಿ ಆರೋಪ

ಖಾಸಗಿ ಕ್ಲಬ್ ಆಯೋಜನೆಯ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ ಕಪ್ ಗೆದ್ದ...

ಗುಬ್ಬಿ | ರಾಜ್ಯಕ್ಕೆ ಮತ್ತೊಮ್ಮೆ ಎಚ್ ಡಿಕೆ ಅನಿವಾರ್ಯ : ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ದುರಾಡಳಿತ ನೋಡಿ ಬೇಸತ್ತ ರಾಜ್ಯದ ಜನರ ಬಾಯಲ್ಲಿ ಕುಮಾರಸ್ವಾಮಿ...

ದಕ್ಷಿಣ ಕನ್ನಡ | ನಿರಂತರ ಮಳೆಯ ನಡುವೆಯೇ ಕಂಪಿಸಿದ ಭೂಮಿ: ಸ್ಥಳಕ್ಕೆ ಅಧಿಕಾರಿಗಳ ದೌಡು

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ-ಕೇರಳ ಗಡಿಭಾಗಗಳಲ್ಲಿ ಕಳೆದ...

ಕೊಪ್ಪಳ | ಅಂಜನಾದ್ರಿ‌ ದೇವಾಲಯ ಬಳಿಯ ಅಂಗಡಿಗಳಲ್ಲಿ ಸರಣಿ ಕಳ್ಳತನ; ಪೊಲೀಸರ ಭೇಟಿ

ಕೊಪ್ಪಳ ಜಿಲ್ಲೆಯ ಗಂಗಾವತಿಯ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ ಬಳಿಯ ಅಂಗಡಿಗಳಲ್ಲಿ...

Download Eedina App Android / iOS

X