ತುಮಕೂರಿನಲ್ಲಿ ಇಂದು ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನದಲ್ಲಿ ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ರಾಜ್ಯ ಸಂಘಟನಾ ಸಂಚಾಲಕರಾಗಿ ಉಡುಪಿಯ ಸುಂದರ್ ಮಾಸ್ಟರ್ ಆಯ್ಕೆ ಆಗಿದ್ದಾರೆ.
ದಲಿತ ಸಂಘರ್ಷ ಸಮಿತಿ ಹುಟ್ಟಿದಾಗಿನಿಂದಲೂ ಸತತ ನಲವತ್ತು ವರ್ಷಕ್ಕೂ ಮಿಕ್ಕಿ ಉಡುಪಿಯಲ್ಲಿ ದಲಿತ ಚಳುವಳಿಯನ್ನು ಕಟ್ಟಿ ನಡೆಸಿಕೊಂಡು ಬರುತ್ತಿರುವ, ಉಡುಪಿ ಜಿಲ್ಲೆಯ ಅಪ್ರತಿಮ ದಲಿತ ನಾಯಕ ಪ್ರಗತಿಪರ ಹೋರಾಟಗಾರ ಎಂದೇ ಪರಿಚಿತರಾಗಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಕೆಆರ್ಎಸ್ ಅಣೆಕಟ್ಟೆಯ ಹಳೆಯ ಕ್ರಸ್ಟ್ಗೇಟ್ ಕಡಿಮೆ ಬೆಲೆಗೆ ಮಾರಾಟ: ರೈತ ಮುಖಂಡರ ಆರೋಪ
ಉಡುಪಿ ಜಿಲ್ಲೆಯ ಶೋಷಿತ ಸಮುದಾಯದ ಧ್ವನಿಯಾಗಿರುವ ಸುಂದರ ಮಾಸ್ಟರ್ ಅವರಿಗೆ ಉಡುಪಿ ಜಿಲ್ಲೆಯ ದ.ಸಂ.ಸ. ಅಂಬೇಡ್ಕರ್ ವಾದದ ಸರ್ವ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
