ಚಿಕ್ಕಮಗಳೂರು l ರಸ್ತೆ ಮಧ್ಯೆ ಅನಧಿಕೃತ ಗೋಪುರ ನಿರ್ಮಾಣ, ವಾಹನ ಸಂಚಾರಕ್ಕೆ ಅಡಚಣೆ: ಬೇಸತ್ತು ಹೋದ ಸಾರ್ವಜನಿಕರು

Date:

Advertisements

ಕಳಸ ತಾಲ್ಲೂಕಿನ ಹೊರನಾಡು ಗ್ರಾಮಕ್ಕೆ ಬೇರೆ ಭಾಗಗಳಿಂದ  ಪ್ರವಾಸಿಗರು ಹಾಗೂ ಜನರು ಬರುತ್ತಾರೆ, ಅದರಲ್ಲೂ, ಹೊರನಾಡು ಎಂದರೆ ತಕ್ಷಣ ನೆನಪು ಆಗುವುದೇ ಹೊರನಾಡಿನಲ್ಲಿ ನೆಲೆಸಿರುವ  ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರು ಎಂದು ಜನರ ನಂಬಿಕೆ ಮಾತಾಗಿದೆ.

ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಇರುವ ಜಾಗದಲ್ಲಿ, ನನ್ನದೇ ಜಾಗ ಎಂಬುವ ರೀತಿಯಲ್ಲಿ ಸರ್ಕಾರದ ಜಾಗ, ಅದರಲ್ಲೂ ಡಾಂಬರೀಕರಣ ಹಾಕಿರುವ ಜಾಗದಲ್ಲಿ ಗೋಪುರ ನಿರ್ಮಾಣ ಮಾಡಲು ಓರ್ವ ವ್ಯಕ್ತಿ ಮುಂದಾಗಿದ್ದಾನೆ. ದೇವಾಲಯದ ಎದುರಿಗೆ ಇರುವ ಹೊರನಾಡು ಮುಖ್ಯ ರಸ್ತೆಯಲ್ಲಿ ತಿರುಗಾಡುವ ರಸ್ತೆಯ ಮಧ್ಯ ಭಾಗದಲ್ಲಿ ಗೋಪುರ ನಿರ್ಮಿಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ತೊಂದರೆ ಆಗುತ್ತಿದೆ.

Screenshot 2025 05 07 10 39 21 41 7352322957d4404136654ef4adb64504

ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಎದುರು ಭಾಗದಿಂದ ಹೊಕ್ಕಳಿಕೊಪ್ಪ, ದಿಂಡಿನಮಕ್ಕಿ, ಮಕ್ಕಿಹಾಳಿ, ಗೋಳಿಬಿಳಲು ಗ್ರಾಮಸ್ಥರು ದೇವಾಲಯದ ದಕ್ಷಿಣಕ್ಕೂ ಮತ್ತು ಹೊಕ್ಕಳಿಕೊಪ್ಪಕ್ಕೆ ಹೋಗುವ ತಿರುವಿನಲ್ಲಿ ಪ್ರಯಾಣ ಮಾಡಬೇಕಿದೆ. ಈ ಸಮಸ್ಯೆಯನ್ನ ಸೃಷ್ಟಿ ಮಾಡಿರುವುದು ಬೇರೆ ಯಾರು ಅಲ್ಲ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಭೀಮೇಶ್ವರ ಜೋಷಿ. ತನ್ನ ಪೂರ್ವಜರ ಪುತ್ಥಳಿ ಗೋಪುರ ನಿರ್ಮಾಣ ಮಾಡುವುದಕ್ಕೆ, ಈ ರಸ್ತೆಯ ಅಂಚಿನಲ್ಲಿ ವಸತಿ ಗೃಹ, ಹೋಟೆಲ್, ಬಸದಿ, ಮನೆಗಳು, ಹೋಂಸ್ಟೇಗಳು, ವಸತಿ ಗೃಹಗಳಿಗೆ ನೂರಾರು ಗ್ರಾಹಕರು ತೊಂದರೆ ಕೊಟ್ಟು ಗೋಪುರ ನಿರ್ಮಾಣ ಮಾಡಿ ಅದನ್ನ ಅನಾವರಣಗೊಳಿಸುತ್ತಿದ್ದಾರೆ. ನಾವು ಎಷ್ಟೇ ಹೇಳಿದರೂ ನಮ್ಮ ಮಾತಿಗೆ ಬೆಲೆ ಇಲ್ಲದಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವ ಕ್ರಮ ತೆಗೆದುಕೊಂಡಿಲ್ಲ, ಎಂದು ಸಾರ್ವಜನಿಕರು ಈದಿನ.ಕಾಮ್ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Advertisements

ಪುತ್ಥಳಿ ಜಾಗವನ್ನು ವಿಸ್ತರಿಸಲು ದೇವಾಲಯದವರು ಮುಂದಾಗಿದ್ದು,  “ನೂರಾರು ವರ್ಷಗಳಿಂದ ತಿರುಗಾಡುವ ರಸ್ತೆಯ ಮಧ್ಯಭಾಗದಲ್ಲಿ ಗೋಪುರ ನಿರ್ಮಿಸುತ್ತಿರುವುದು ಯಾವ ನ್ಯಾಯ ಅವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯನಾ” ಇದರಿಂದಾಗಿ ಎಂಟು ಚಕ್ರದ ವಾಹನಗಳನ್ನು ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಸಂಚಾರಕ್ಕೆ ಅಡಚಣೆ ಮಾಡುತ್ತಿರುವ ಅಕ್ರಮವಾಗಿ ನಿರ್ಮಿಸಿರುವ ಗೋಪುರವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಭಾಗದ ಗ್ರಾಮಸ್ಥರು ಈದಿನ.ಕಾಮ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಲಿತರ ಗುಡಿಸಲನ್ನು ನೆಲಸಮ ಮಾಡಿದ ತಾಲೂಕು ಅಧಿಕಾರಿಗಳು

ಪಟ್ಟಣಗಳಿಗೆ ಹೋಗಬೇಕಾದ ವಾಹನಗಳ ಸಂಚಾರಕ್ಕೆ ಅಡಚಣೆ ಹಾಗೂ ಇದರಿಂದ ಆ ಭಾಗದಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸರ್ಕಾರದ ಜಾಗ ಹಾಗೂ ಡಾಂಬರೀಕರಣ ಮಾಡಿರುವ ಮಧ್ಯ ರಸ್ತೆಯಲ್ಲಿ, ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪುತ್ಥಳಿ ಗೋಪುರವನ್ನು ಸಂಬಂಧ ಪಟ್ಟ, ಅಧಿಕಾರಿಗಳು ತೆರವುಗೊಳಿಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡುವರೇ ಕಾದು ನೋಡಬೇಕಾಗಿದೆ.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ಮೊದಲನೇಯದಾಗಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಭೀಮೇಶ್ವರ ಜೋಷಿ ಅವರ ಸ್ವಂತದ್ದು, ಸಾರ್ವಜನಿಕ ದೇವಾಲಯ ಅಲ್ಲ. ಭಕ್ತಿಯಿಂದ ಜನರು ಅಲ್ಲಿಗೆ ಬರುತ್ತಾರೆಯೇ ಅಷ್ಟೆ. ಭೀಮೇಶ್ವರ ಜೋಷಿ ಅಲ್ಲಿನ‌ ಪ್ರಧಾನ ಅರ್ಚಕ ಅಲ್ಲ. ಅವರು ಧರ್ಮದರ್ಶಿಗಳು. ಹೊರನಾಡು ಪ್ರಸಿದ್ದಿ ಪಡೆಯಲು ಕಾರಣವೇ ಭೀಮೇಶ್ವರ ಜೋಷಿ‌ ಮನೆತನದ ದೇವರು ಶ್ರೀ ಅನ್ನಪೂರ್ಣೇಶ್ವರಿ.

  2. ಮೊದಲನೇಯದಾಗಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಭೀಮೇಶ್ವರ ಜೋಷಿ ಅವರ ಸ್ವಂತದ್ದು, ಸಾರ್ವಜನಿಕ ದೇವಾಲಯ ಅಲ್ಲ. ಭಕ್ತಿಯಿಂದ ಜನರು ಅಲ್ಲಿಗೆ ಬರುತ್ತಾರೆಯೇ ಅಷ್ಟೆ. ಭೀಮೇಶ್ವರ ಜೋಷಿ ಅಲ್ಲಿನ‌ ಪ್ರಧಾನ ಅರ್ಚಕ ಅಲ್ಲ. ಅವರು ಧರ್ಮದರ್ಶಿಗಳು. ಹೊರನಾಡು ಪ್ರಸಿದ್ದಿ ಪಡೆಯಲು ಕಾರಣವೇ ಭೀಮೇಶ್ವರ ಜೋಷಿ‌ ಮನೆತನದ ದೇವರು ಶ್ರೀ ಅನ್ನಪೂರ್ಣೇಶ್ವರಿ. ಹೊರನಾಡಲ್ಲಿ ಹೋಂ ಸ್ಟೇ, ವಸತಿಗೃಹಗಳು ನಿರ್ಮಾಣವಾಗಲು ಕಾರಣವೇ ಭೀಮಶ್ವರ ಜೋಷಿ ಅವರ ಪೂರ್ವಜನ ಅಂದರೆ ಮನೆತನದ ದೇವರು ಶ್ರೀ ಅನ್ನಪೂರ್ಣೇಶ್ವರಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X