12ನೇ ಶತಮಾನದಲ್ಲಿ ಮೌಢ್ಯತೆಯ ವಿರುದ್ಧ ಕ್ರಾಂತಿಗೈದ ಬಸವಣ್ಣನವರು ಜಗತ್ತಿನ ಸರ್ವ ಶ್ರೇಷ್ಠ ಆರ್ಥಿಕ ತಜ್ಞರಾಗಿ, ಸಾಮಾಜಿಕ ಸುಧಾರಕರಾಗಿ ಲೋಕಕ್ಕೆ ಬೆಳಕಾಗಿದ್ದಾರೆ, ಅವರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದಾಗ ಮಾತ್ರ ಅವರ ಜಯಂತಿ ಉತ್ಸವ ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ
ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ನುಡಿದರು.
ಬೀದರ್ ನಗರದ ಸ್ಪರ್ಧಾ ಸಂಕಲ್ಪ ಅಕಾಡೆಮಿಯಲ್ಲಿ ಆಯೊಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಶ್ರೇಷ್ಠವಾದದ್ದು, ಅಂತಹ ಸಾಹಿತ್ಯ ಭಾಷೆ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಶತಮಾನೋತ್ಸವ ಸಂಭ್ರಮದ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಗಣನೀಯವಾದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಸದಸ್ಯತ್ವವನ್ನು ಹೊಂದಿರುವ ಸಂಸ್ಥೆ ಸಾಹಿತ್ಯ ಪರಿಷತ್ತಾಗಿದೆ. ಗಡಿ ಭಾಗದಲ್ಲಿ ಕನ್ನಡದ ಬೆಳವಣಿಗೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕೂಡ ಕನ್ನಡ ಅಭಿವೃದ್ಧಿಗಾಗಿ ಪರಿಷತ್ತಿನೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತದೆ” ಎಂದರು.
ಸ್ಪರ್ಧಾ ಸಂಕಲ್ಪ ಅಕಾಡೆಮಿ ಅಧ್ಯಕ್ಷ ನಾಗೇಶ ಸ್ವಾಮಿ ಮಾತನಾಡಿ, “ಕನ್ನಡ ನಾಡು-ನುಡಿಗಾಗಿ ಅನೇಕ ಸಾಹಿತಿಗಳು ಕಲಾವಿದರು, ಹೋರಾಟಗಾರರ ಶ್ರಮದ ಫಲವಾಗಿ ಇಂದು ಗಡಿ ಭಾಗದಲ್ಲಿ ಕನ್ನಡ ಉಳಿದುಕೊಂಡಿದೆ” ಎಂದರು.
ಮಹಿಳಾ ಘಟಕದ ತಾಲೂಕು ಕಸಾಪ ಅಧ್ಯಕ್ಷೆ ರೂಪಾ ಪಾಟೀಲ ಮಾತನಾಡಿ, “ಚಿಕ್ಕಂದಿನಿಂದಲೆ ಬಸವಣ್ಣನವರ ವಚನಗಳು ನಮ್ಮ ಹಿರಿಯರು ತಿಳಿಸಿಕೊಡುತಿದ್ದರು. ನೂರಕ್ಕೂ ಹೆಚ್ಚು
ವಚನಗಳು ನಮ್ಮ ಅಜ್ಜಿ ಬಾಯಿಪಾಠವಾಗಿ ಹೇಳುತ್ತಾರೆ. ವಚನ ಸಾಹಿತ್ಯ ಜನರ ಬದುಕಿಗೆ ಮಾರ್ಗದಶಿಯಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಟಿ.ಎಂ.ಮಚ್ಚೆ, ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ಮನೋಹರ, ಗೌರವ ಕಾರ್ಯದರ್ಶಿ ಪ್ರೊ.ಜಗನ್ನಾಥ ಕಮಲಾಪೂರೆ ಇದ್ದರು. ಸಿದ್ಧಾರೂಢ ಭಾಲ್ಕೆ ಸ್ವಾಗತಿಸಿದರು. ಅಶೋಕ ದಿಡಗೆ ವಂದಿಸಿದರು.