ವಿಜಯನಗರ | ʼತಿಂಡಿಗೆ ಬಂದ ತುಂಡೇರಾಯʼ ನಾಟಕ ಪ್ರದರ್ಶನ

Date:

Advertisements

ದಾರಾವಾಹಿ, ಸಿನಿಮಾ ಹಾಗೂ ಟಿವಿ ಮನರಂಜನೆಯ ಹಾವಳಿಯಲ್ಲಿ ಈ ಮಣ್ಣಿನ ಮೂಲ ಸಾಂಸ್ಕೃತಿಕ ಮನರಂಜನೆಗಳೆಲ್ಲ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ನಿರ್ದಿಗಂತ ಕಲಾತಂಡ ಮಹತ್ತರ ಹೆಜ್ಜೆಯನ್ನಿಡುತ್ತಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಶ್ರೀರಂಗ ದತ್ತಿನಿಧಿ ಮತ್ತು ನಾಟಕ ವಿಭಾಗದ ಸಹಯೋಗದಲ್ಲಿ ಪ್ರಕಾಶರಾಜ್ ಸಾರಥ್ಯದ ನಿರ್ದಿಗಂತ ಕಲಾ ತಂಡದವರಿಂದ “ತಿಂಡಿಗೆ ಬಂದ ತುಂಡೇರಾಯ” ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.

ನಾಟಕ, ರಂಗ ವೇದಿಕೆಗಳು ಮನರಂಜಿಸುವ ಕಲಾವಿದರನ್ನು ಹುಟ್ಟು ಹಾಕುವುದಲ್ಲ. ಬದಲಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದು, ಆಳುವವರ ದುರಾಡಳಿತದ ಬಗ್ಗೆ ಪ್ರಜೆಗಳಿಗೆ ತಿಳಿಸಿ ಅರಿವು ಮೂಡಿಸುವುದು ಜತೆ ಜತೆಗೆ ಜಾಗೃತಗೊಳಿಸಬೇಕು. ಭ್ರಷ್ಟಾಚಾರ, ಭ್ರಷ್ಟಾಚಾರಿಗಳ ಬಗ್ಗೆ ಎಚರಿಕೆ ನೀಡುತ್ತ ಈ ಧಾರ್ಮಿಕ ಹಿನ್ನೆಲೆಯಲ್ಲಿ ದೇಶವನ್ನು ಒಡೆದು ಆಳುತ್ತಿರುವ ಕೋಮು ಮುಖಂಡರನ್ನು ಖಂಡತುಂಡವಾಗಿ ವಿರೋಧಿಸಬೇಕಾಗಿದೆ. ಜನರಲ್ಲಿ ಸಾಮರಸ್ಯ, ಸೌಹಾರ್ದತೆ ಕುರಿತು ತಿಳಿಹೇಳುವ ರಂಗಕಲಾವಿದರು ಮನರಂಜನೆಯ ಮುಖಾಂತರ ಮನವರಿಕೆ ಮಾಡಬೇಕಾಗಿದೆ.

ಈ ಸುದ್ದಿ ಓದಿದ್ದೀರಾ? ಹಾಸನ | ಫೆಬ್ರವರಿಯೊಳಗೆ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡದಿದ್ದರೆ ಮತ್ತೆ ಹೋರಾಟ; ಜಯಕರ್ನಾಟಕ ಎಚ್ಚರಿಕೆ

Advertisements

ನೊಂದವರ ಧ್ವನಿಯಾಗಿ, ಶೋಷಿತ ಸಮುದಾಗಳ ಬೆಳಕಾಗಿ ನಾಟಕಗಳು ರಚನೆಯಾಗಿ ಕಲಾವಿದರ ಪ್ರದರ್ಶನವಾಗುತ್ತವೆ. ಆ ನಿಟ್ಟಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇವತ್ತಿನ ಬಂಡವಾಳಶಾಹಿ, ಬಂಡವಾಳಶಾಹಿಗಳ ಪರವಾಗಿ ಸರ್ಕಾರದ ನಡೆಯನ್ನು, ಬೆಲೆ ಏರಿಕೆ, ಆಡಳಿತಗಾರರ ಸರ್ವಾಧಿಕಾರ, ದಬ್ಬಾಳಿಕೆ, ಶೋಷಣೆಗಳು, ನ್ಯಾಯಾಲಯಗಳ ದುರುಪಯೋಗ ಒಟ್ಟಾರೆ ನೀಚ ಮತ್ತು ಕೆಟ್ಟ ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡು “ತಿಂಡಿಗೆ ಬಂದ ತುಂಡೇರಾಯ” ಹಾಸ್ಯದ ಮೂಲಕ ವಿಶಿಷ್ಟ, ವಿಶೇಷವಾದ ನಾಟಕ ಪ್ರದರ್ಶನಗೊಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X