ವಿಜಯಪುರ | ಧಾರ್ಮಿಕ ಸಹಬಾಳ್ವೆಗೆ ಮಾದರಿಯಾದ ಸೌಹಾರ್ದ ಮೆರವಣಿಗೆ

Date:

Advertisements

ನಮ್ಮ ದೇಶ ಬಹುತ್ವವನ್ನು ಪ್ರತಿಪಾದಿಸುವಂತಹದ್ದು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದು, ವಿವಿಧ ಧರ್ಮ ಜಾತಿಯ ಭಾಷೆಯ ಜನಾಂಗದವರಿದ್ದೇವೆ ನಾವೆಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರು ಹೇಳಿದರು.

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ರಾಷ್ಟ್ರೀಯ ಏಕತೆಗಾಗಿ ನಡೆದ ಬೃಹತ್ ಸೌಹಾರ್ದ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

ಸೌಹಾರ್ದ ಸಮನ್ವಯ ವೇದಿಕೆ ಆಶ್ರಯದಲ್ಲಿ ಈ ಮೌನ ಮೆರವಣಿಗೆ ಬಸವೇಶ್ವರ ಚೌಕದಿಂದ ಕಂಟ್ರಿ ಸರ್ಕಲ್ ವರೆಗೆ ನಡೆಯಿತು.

Advertisements

ಈ ಮೆರವಣಿಗೆಯಲ್ಲಿ ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು, ಮದ್ರಸಾ ಮತ್ತು ಶಾಲೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ರಾಷ್ಟ್ರಪರತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು.

ನಂದವಾಡಗಿ ಯಾ ಚಂದ್ರಮಹಾಸ್ವಾಮೀಜಿ ಮಾತನಾಡಿ, “ಪ್ರೀತಿ ಹಂಚುವುದು ಮತ್ತು ಹೃದಯಗಳನ್ನು ಬೆಸೆದುಕೊಳ್ಳುವುದು ಕಾಲದ ಅವಶ್ಯಕತೆ. ಶುದ್ಧ ಮನಸ್ಸು, ಉತ್ತಮ ನಡೆ ಸಮಾಜದಲ್ಲಿ ಶಾಂತಿಯನ್ನು ತಂದೊಡುತ್ತದೆ.” ಎಂದರು.

ಶರಣಪ್ಪ ಅಮದಿಹಾಳ್ ಮಾತನಾಡಿ, ದೇಶದ ಇತ್ತೀಚಿನ ಪರಿಸ್ಥಿತಿಗಳತ್ತ ಗಮನ ಸೆಳೆಯುತ್ತಾ, ಸಂವಿಧಾನಕ್ಕೆ ವ್ಯಕ್ತಪಡಿಸುತ್ತಿರುವ ದೊಡ್ಡ ಶಕ್ತಿಗಳ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ.ಸಂವಿಧಾನದ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದರು.

WhatsApp Image 2025 07 06 at 8.43.11 AM

ಇದನ್ನೂ ಓದಿ: ವಿಜಯಪುರ | ವಿದ್ಯಾರ್ಥಿನಿಯರ ವಸತಿ ನಿಲಯ ಮಂಜೂರಾತಿಗೆ ಆಗ್ರಹ

ಕ್ರೈಸ್ತ ಸಮುದಾಯದ ಪ್ರತಿನಿಧಿ ಶ್ರೀ ಜಾನ್ ಬೆಟ್ಟರ್ ಅವರು ಧರ್ಮ, ಜಾತಿ, ಭಾಷೆ ಮೀರಿ ಸೌಹಾರ್ದತೆ, ಸಹಬಾಳ್ವೆ ಕುರಿತು ಮಾತನಾಡಿದರು.

ಈ ಮೆರವಣಿಗೆಯಲ್ಲಿ ಮೊಹಮ್ಮದ್ ಯೂನೂಸ್ ಮುದ್ದಗಲ್, ಸಿದ್ರಾ ಅಕಾಡೆಮಿ ವಿದ್ಯಾರ್ಥಿಗಳು, ಸ್ಥಳೀಯ ಶಾಲೆಗಳ ಶಿಕ್ಷಕರು, ಜನಾಬ್ ಅಬ್ದುಲ್ ರಝಕ ಟಟ್ಗಾರ್, ಜಮಾತ್ ಇಸ್ಲಾಮಿ ಹಿಂದ್ ಸ್ಥಾನಿಯ ಅದ್ದಕ್ಷರು ಹುಸೈನ್ ಭಾಷಾ, ಸುಳಿಬಾವಿ ಸಾಯೇದ್ ಕೂತವಾಲ್,ಡಾ. ಟಿಪ್ಪುಸುಲ್ತಾನ್ ಬಂಡಾರಿ, ಫಾರೂಕ್ ಉಮಾರಿ ,ಹಾಫೀಜ್ ಮೊಹಮ್ಮದ್, ಸೂಫಿಯನ್ ಸಖಾಫಿ,ಮೊಲಾನಾ ಫಾರೂಕ್ ಸಖಾಫಿ ಮತ್ತು ಸಾಮಾನ್ಯ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X