ವಿಜಯಪುರ | ಸ್ತ್ರೀ ಎಂದರೆ ಬರೀ ಹೆಣ್ಣಲ್ಲ ಅವಳೊಂದು ಅದ್ಭುತ ಶಕ್ತಿ: ನೀಲಮ್ಮ ಹತ್ತಳ್ಳಿ

Date:

Advertisements

“ಸ್ತ್ರೀ ಎಂದರೆ ಬರೀ ಹೆಣ್ಣಲ್ಲ ಅವಳೊಂದು ಅದ್ಭುತ ಶಕ್ತಿ, ಚೇತನ್ಯ ಸ್ವರೂಪಿ, ಸಮಾಜದ ಬಹುಮುಖ್ಯ ಅಂಗ ಹೆಣ್ಣು” ಎಂದು ಶಿಕ್ಷಕಿ ನೀಲಮ್ಮ ಹತ್ತಳ್ಳಿ ಹೇಳಿದರು.

ವಿಜಯಪುರ ಪಟ್ಟಣದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ  ಆಯೋಜಿಸಿದ್ದ ಮಹಿಳಾ ಕಲಾವಿದರ  ಮನದಂಗಳ ಚಿತ್ರಕಲಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಶಂಕ್ರಮ್ಮ ಹೂಗಾರ ಮಾತನಾಡಿ, “ಹೆಣ್ಣು ಸಂಸಾರದ ಕಣ್ಣಾದರೆ ಕಲಾವಿದ ಸಮಾಜದ ಕಣ್ಣು. ಸ್ತ್ರೀ ತಾನು ಏನೆಂದು ನಿರೂಪಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಾಳೆ. 12ನೇ ಶತಮಾನದ ಅಕ್ಕಮಹಾದೇವಿಗೆ ಅನುಭವ ಮಂಟಪದಲ್ಲಿ ಅವಕಾಶ ನೀಡದಿದ್ದರೆ, ಇಂದು ನಾವು ಅವರನ್ನು ಓದುತ್ತಿರಲಿಲ್ಲ” ಎಂದು ಹೇಳಿದರು.

Advertisements

“ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಕಲಾ ಶಿಬಿರಗಳು ಆಯೋಜನೆ ಆಗಬೇಕು. ಬೇರೆ ರಾಜ್ಯದ ಮಹಿಳಾ ಕಲಾವಿದರು ಚಿತ್ರ ರಚಿಸುವುದನ್ನು ಜಿಲ್ಲೆಯ ಕಲಾವಿದರು ನಾಗರಿಕರು ನೋಡುವಂತಾಗಬೇಕು. ಎಂಬ  ಆಶಯವನ್ನು ಕಲಾವಿದ ರಮೇಶ್ ಚೌಹಾನ್ ತಿಳಿಸಿದರ.

ಶರಣಮ್ಮ ಕುಂಸಿ ಸ್ಥಳದಲ್ಲಿಯೇ ಕವನ ರಚಿಸಿ ಹಾಡಿದರು, ಅನನ್ಯ ಯಳಮೇಲಿ, ಸುಚಿತ್ರಾ ಲಿಂಗದಳ್ಳಿ, ಧನಲಕ್ಷ್ಮಿ ದೊಡ್ಡಮನಿ, ದಾಕ್ಷಾಯಿಣಿ ಇಮ್ನಾದ,ಗಿರಿಜಾ ಬಿರಾದರ, ಹಾಜಮಾ ಹುದ್ದಾರ್ ,ಕಲ್ಪನಾ ಬಾಬಕರ್ ,ಲಕ್ಷ್ಮಿ ಬಿರಾದರ, ಮಹದೇವಿ ಕೊಪ್ಪದ,ರಾಜೇಶ್ವರಿ ಕೌಲಗಿ, ಯಾಮಿನಿ ಶಹಾ ಇವರುಗಳು ತಮ್ಮ ಮನದಂಗಳದಿಂದ ಮೂಡಿಬಂದ ಚಿತ್ರಗಳನ್ನು ಬಣ್ಣಗಳ ಮೂಲಕ ಕ್ಯಾನ್ವಾಸ್ ಮೇಲೆ ಚಿತ್ರ ಬರೆದು ಸಂಭ್ರಮಿಸಿದರು.

ಅಕಾಡೆಮಿಯ ಜೀವಮಾನ ಸಾಧನೆಯ ಪುರಸ್ಕಾರ ಲಭಿಸಿರುವ ಸುಭಾಸ ಕೆಂಭಾವಿ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ 52ನೇ ವಾರ್ಷಿಕ ಕಲಾ ಪ್ರಶಸ್ತಿ ವಿಜೇತರಾದ ರಮೇಶ್ ಚೌಹಾನ ಇವರನ್ನು ಕಲಾಸಂಘದ ವತಿಯಿಂದ ಮಹಿಳಾ ಸದಸ್ಯರೆಲ್ಲರೂ ಗೌರವಿಸಿ ಸನ್ಮಾನಿಸಿದರು.

ಈ ಸುದ್ದಿ ಓದಿದ್ದೀರಾ? ಗುಬ್ಬಿ | ಕಿಡಿಗೇಡಿಗಳಿಂದ ಸುರಿಗೇನಹಳ್ಳಿ ಕಾಡಿಗೆ ಬೆಂಕಿ : ಕಂಗಾಲಾದ ಮರಗಿಡಗಳಲ್ಲಿನ ಪಕ್ಷಿ ಸಂಕುಲ

ಕಾರ್ಯಕ್ರಮದಲ್ಲಿ ಕಲಾವಿದರಾದ ಪಿ ಎಸ್ ಕಡೆಮನಿ, ವಿದ್ಯಾಧರ ಸಾಲಿ, ವೀರಯ್ಯ ಹಿರೇಮಠ, ಲಿಂಗರಾಜ ಕಜಾಪುರ, ಆನಂದ ಝ೦ಡೆ, ಮಲ್ಲಿಕಾರ್ಜುನ ಕನ್ನೂರ , ಸಿದ್ದು ಬಳಲಗಿಡದ, ಮುರಳಿಧರ ಭೋವಿ, ವಿಜಯ ರವಿ ನಾಯಕ, ಶಿವಾನಂದ ಅಥಣಿ, ಕಮಲೇಶ ಭಜಂತ್ರಿ, ರವಿ ಮುದುಗಲ್, ಬಿ ಎಸ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ವಿವಿ ಹಿರೇಮಠ ಪ್ರಾರ್ಥಿಸಿದರು, ಸ್ವಪ್ನ ಕಲಾದಗಿ ಸ್ವಾಗತಿಸಿದರು, ಕಲಾ ಸಂಘದ ಅಧ್ಯಕ್ಷೆ ರಾಜೇಶ್ವರಿ ಮೋಪಗಾರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ಕಲ್ಪನಾ ಬಾಬಕರ ನಿರೂಪಿಸಿದರು ಹಾಗೂ ಧನಲಕ್ಷ್ಮಿ ದೊಡ್ಡಮನಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X