ಡಾ. ಬಾಬಾಸಾಹೇಬರ ಅಂಬೇಡ್ಕರ್ ಜಯಂತಿ ನಿಮಿತ್ಯವಾಗಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕದಿಂದ ನಾಲ್ಕು ದಿನದ ʼಅಂಬೇಡ್ಕರ್ ಕಪ್ʼ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಜಿಲ್ಲೆಯ ಕಾಲೇಜು ಮತ್ತು ವಸತಿ ನಿಲಯ ವಿದ್ಯಾರ್ಥಿಗಳಿಗೆ ಈ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರಲಿದೆ. ಫೈನಲ್ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ₹15,000, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡುವ ತಂಡಕ್ಕೆ ದ್ವಿತೀಯ ಬಹುಮಾನ ₹10,000 ಬಹುಮಾನ ಇರಲಿದೆ” ಎಂದು ತಿಳಿಸಿದರು.
“ಭಾಗವಹಿಸುವರು ಕಡ್ಡಾಯವಾಗಿ ನೋಂದಣಿ ಪತ್ರದಲ್ಲಿ ಕಾಲೇಜು/ವಸತಿ ನಿಲಯ ಮುಖ್ಯಸ್ಥರ ಪರವಾನಗಿ ಪತ್ರ ತರಬೇಕು. ಮಾರ್ಚ್ 26ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ₹1,100 ಪ್ರವೇಶ ಶುಲ್ಕ ಇರಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಏ.1ರಿಂದ ₹10,000 ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಆಗ್ರಹ
“ಪಂದ್ಯಾವಳಿಗಳು ಜಿಲ್ಲಾ ಪಂಚಾಯತ್ ಆವರಣದಲ್ಲಿ ಇರುವ ಮೈದಾನದಲ್ಲಿ ನಡೆಯಲಿದೆ. ಭಾಗಿಯಾಗುವ ಎಲ್ಲ ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಗುಹುದು. ಹೆಚ್ಚಿನ ಮಾಹಿತಿಗಾಗಿ 9739396446, 8088160436, 8431626548ಕ್ಕೆ ಸಂಪರ್ಕಿಸಬಹುದು” ಎಂದು ಅಕ್ಷಯ್ ಕುಮಾರ್ ಅಜಮನಿ ತಿಳಿಸಿದ್ದಾರೆ.