ವಿಜಯಪುರ | ನಿಗದಿತ ಅವಧಿಯೊಳಗೆ ಒಳಮೀಸಲಾತಿ ಸಮೀಕ್ಷೆ ಅಸಾಧ್ಯ; ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಡಿಎಸ್‌ಎಸ್ ಮುಖಂಡರ ಆಗ್ರಹ

Date:

Advertisements

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮೇ 5ರಿಂದ ಆರಂಭಗೊಂಡಿರುವ ಒಳಮೀಸಲಾತಿ ಸಮೀಕ್ಷೆಯನ್ನು, ನಿಗದಿಯಾಗಿರುವ ಮೇ 17ರ ಅವಧಿಗೆ ಮುಗಿಸಲು ಸಮೀಕ್ಷೆದಾರರು ತಿಣುಕಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಡಿಎಸ್‌ಎಸ್ ಮುಖಂಡರಾದ ಗುಂಡಪ್ಪ ಛಲವಾದಿ, ಸಿದ್ದಣ್ಣ ಕಟ್ಟಿಮನಿ ಸಮಾಜ ಕಲ್ಯಾಣ ಅಧಿಕಾರಿ ಬಸಂತಿ ಮಠ ಅವರನ್ನು ಒತ್ತಾಯಿಸಿದರು.

ನಾಲತವಾಡದಲ್ಲಿ ಆರಂಭಗೊಂಡ ಒಳಮೀಸಲಾತಿ ಸಮೀಕ್ಷೆ ಪರಿಶೀಲನೆಗೆ ಆಗಮಿಸಿದ ವೇಳೆ ಅಧಿಕಾರಿ ಬಸಂತಿ ಅವರಿಗೆ ಮನವಿ ಮಾಡಿದ ಮುಖಂಡರು, “ನೀವು ನೀಡಿದ ಕಾಲಮಿತಿಯಲ್ಲಿ ಸಮೀಕ್ಷೆ ಮುಕ್ತಾಯಗೊಳಿಸುವುದು ಬಹುತೇಕ ಅನುಮಾನವಾಗಿದೆ. ಆದ್ದರಿಂದ ಹೆಚ್ಚಿನ ಸಿಬ್ಬಂದಿ ನೇಮಿಸಿ, ಇಲ್ಲ ಸಮೀಕ್ಷೆ ಅವಧಿ ವಿಸ್ತರಿಸಬೇಕು” ಎಂದರು.

“ಪ್ರತಿ ಕುಟುಂಬಕ್ಕೆ ದತ್ತಾಂಶ ಸಂಗ್ರಹಕ್ಕೆ ಕನಿಷ್ಠ ಅರ್ಧ ಗಂಟೆ ತೆಗೆದುಕೊಳ್ಳುತ್ತಿದೆ. ಪಟ್ಟಣದಲ್ಲಿ ಸಾವಿರಾರು ಕುಟುಂಬಗಳಿವೆ. ಹೀಗಾದ್ರೆ ಅವಧಿಯೊಳಗೆ ಸಮೀಕ್ಷೆ ಅಸಾಧ್ಯವಾಗುತ್ತದೆ. 101 ಉಪ ಜಾತಿಗಳು ಪರಿಶೀಲನೆ ಜತಗೆ ಕುಟುಂಬಸ್ಥರ ದತ್ತಾಂಶ ಸೇರ್ಪಡೆ ಸೂಕ್ತ ದಾಖಲೆ ಪಡೆಯಲು ಹಾಗೂ ಅವರ ಜಾತಿ ನಮೂದಿಸಲು ಸಿಬ್ಬಂದಿಗೆ ಸಮಯ ಬೇಕು. ಜತಗೆ ಸರ್ವರ್ ಸಮಸ್ಯೆಯೂ ಇದೆ” ಎಂದು ದೂರಿದರು.

Advertisements

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮರ ಕಡಿತ ಕಾರ್ಯಕ್ಕೆ ವಿರೋಧ; ನೆಲದಡಿ ವಿದ್ಯುತ್ ತಂತಿ ಅಳವಡಿಕೆಗೆ ಆಗ್ರಹ

ಹೋರಾಟಗಾರರು ನಾಲತವಾಡ ಭಾಗದಲ್ಲಿ “ಬೇಡ ಜಂಗಮ ಜಾತಿಗೆ ಸೇರಿದ ಯಾವುದೇ ಕುಟುಂಬಗಳಿಲ್ಲ. ಒಂದು ವೇಳೆ ತಾವು ಅವರ ಮಾತು ಕೇಳಿ ಕಾಲಂಗಳಲ್ಲಿ ಬೇಡ ಜಾತಿ ಜಂಗಮ ಎಂದು ಸೇರ್ಪಡೆ ಮಾಡಿದರೆ ನಿಮ್ಮ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ” ಎಂದು ಡಿಎಸ್‌ಎಸ್‌ ಮುಖಂಡರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

“ಪಟ್ಟಣದಲ್ಲಿ ಹೆಚ್ಚಿನ ಸಂಬಂಧಿ ನೇಮಿಸಲು ಸ್ಥಳದಲ್ಲಿ ಆದೇಶ ಮಾಡಿದ್ದೇನೆ. ದತ್ತಾಂಶಗಳ ಸಂಗ್ರಹಕ್ಕೆ ತಾವು ಸಹಕರಿಸಬೇಕು. ಅವಧಿ ವಿಸ್ತರಣೆ ಕುರಿತು ಮೇಲಧಿಕಾರಿಗಳ ಮಟ್ಟದಲ್ಲಿದೆ. ಸಾಧ್ಯವಾದಷ್ಟು ಅವಧಿಯೊಳಗೇ ಮುಗಿಸುವ ಲಕ್ಷಣಗಳಿವೆ” ಎಂದು ಮಾಹಿತಿ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X