ವಿಜಯಪುರ | ಬಿಳಿಜೋಳಕ್ಕೆ ಕೀಟಗಳ ಕಾಟ ರೈತರು ಕಂಗಾಲು

Date:

Advertisements

ಮಳೆಯಿಲ್ಲದೆ ಸಂಕಷ್ಟದಲ್ಲಿ ಇರುವ ವಿಜಯಪುರ ಜಿಲ್ಲೆಯ ರೈತರು ಸದ್ಯ ಜೋಳ ಬೆಳೆದು ಬೆಳೆ ಕೈಗೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಬಿಳಿಜೋಳದ ಬೆಳೆಗೆ ಕೀಟಬಾಧೆ ಕಾಡುತ್ತಿದ್ದು ಜೋಳಬೆಳೆದ ರೈತರು ಆತಂಕಗೊಂಡಿದ್ದಾರೆ.

ಬಿಳಿಜೋಳಕ್ಕೆ ಸಾಮಾನ್ಯವಾಗಿ ಕೀಟಗಳು ಕಾಡುವುದಿಲ್ಲ. ಆದರೆ, ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಈ ಬಾರಿ ಎಲ್ಲಕಡೆಯೂ ಎಲೆಯನ್ನು ತಿಂದು ಹಾಕುವ ಬಿಳಿಶೀರು ಕೀಟಬಾಧೆ ರೈತರನ್ನು ಕಾಡುತ್ತಿದ್ದು, ಇದರಿಂದ ತೆನೆಗಟ್ಟುತ್ತದೆಯೋ ಇಲ್ಲವೋ ಎಂಬ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಿದ್ದಾರೆ ಜೋಳ ಬೆಳೆದ ರೈತರು.

ನೀರಾವರಿ ಹಾಗೂ ಕಾಲುವೆ ನೀರಿನ ವ್ಯವಸ್ಥೆ ಇದ್ದಲ್ಲಿ ಜೋಳದ ಬೆಳೆ ಉತ್ತಮವಾಗಿ ಬೆಳೆದಿದೆ. ಇನ್ನೊಂದು ತಿಂಗಳಲ್ಲಿ ಫಸಲು ರೈತರ ಕೈ ಸೇರಲಿದೆ. ಹೀಗಾಗಿ ಉತ್ತಮ ದರ ಸಿಗುವ ಉತ್ಸಾಹದಲ್ಲಿ ರೈತರಿದ್ದು, ಕೀಟಬಾಧೆ ಅವರನ್ನು ನಿರಾಸೆಗೆ ದೂಡಿದೆ.

Advertisements

ತಾಲೂಕಿನ ಇಂಗಳಗೇರಿ ಸೇರಿದಂತೆ ಬಹುತೇಕ ಕಡೆ ಬೆಳೆದಿರುವ ಜೋಳದ ತೆನೆಗಳ ಒಳಗಡೆ ಬಿಳಿ ಶೀರು ಕೀಟ ಕಂಡು ಬಂದಿದೆ. ಇದರಿಂದ ಬೆಳೆಯಲ್ಲಿ ಕಾಳು ಮೂಡದಂತಾಗಿ ತೆನೆಯೇ ಕಾಣುವುದಿಲ್ಲ. ಹೀಗಾದಾಗ ಇಳುವರಿ ಕುಸಿತ ಕಂಡು ರೈತರು ಬೆಳೆದಿರುವ ಖರ್ಚು ಹೊಂದಿಸಲು ಕಷ್ಟ ಪಡುವ ದುಸ್ಥಿತಿ ಎದುರಾಗಬಹುದು ಎನ್ನುವುದು ರೈತರ ಆತಂಕ.

ಜೋಳದ ಬೆಲೆ ಏರಿಕೆಯಾಗಿದ್ದು, 8000 ರೂ. ಕ್ವಿಂಟಲ್‌ಗೆ ಬಿಳಿ ಜೋಳ ಮಾರಾಟವಾದ ಉದಾಹರಣೆಗಳಿವೆ. ಕೆ.ಜಿ ಜೋಳ 70ರೂ.ದಿಂದ 80ರೂ. ಮಾರಾಟವಾಗುತ್ತಿದೆ. ಈ ಬಾರಿ ಜೋಳದ ಫಸಲು ಉತ್ತಮವಾಗಿ ಬರದೇ ಹೋದರೆ ಈ ದರ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಗ್ರಾಹಕರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X