ಆಲಮಟ್ಟಿಯ ಕೆಬಿಜೆಎನ್ಎಲ್ (ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ) ಗಾರ್ಡ್ನಲ್ಲಿ ಕೆಲಸಮಾಡುತ್ತಿರುವ ಡಿ ಗ್ರೂಪ್ ನೌಕರರಿಗೆ 5 ತಿಂಗಳ ಬಾಕಿ ವೇತವನ್ನು ಪಾವತಿಸಿಲ್ಲ. ವೇತನಕ್ಕೆ ಆಗ್ರಹಿಸಿ ನೌಕರರು ಆಲಮಟ್ಟಿ ಸಿಇ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್ ಎಚ್.ಟಿ, ವಿಶ್ವದ ಅತಿ ದೊಡ್ಡ ಆಣೆಕಟ್ಟಾ ಆಲಮಟ್ಟಿ ಆಣೆಕಟ್ಟಿನ ಸುತ್ತಮುತ್ತಲು ನೂರಾರು ಎಕರೆಯಲ್ಲಿ ತಲೆ ಎತ್ತಿರುವ ಗಾರ್ಡನ್ಗಳನ್ನು ವಿಕ್ಷಸಿಸಲು ದೇಶ ವಿದೇಶಗಳಿಂದ ಜನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅವುಗಳ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಆದರೆ, ಈ ಗಾರ್ಡನ್ಗಳನ್ನು ಹಗಲಿರುಳು ಶ್ರಮವಹಿಸಿ ತಯಾರಿಸಿದ ನೌಕರರ ಮಾತ್ರ 5 ತಿಂಗಳಿಂದ ವೇತನ ವಿಲ್ಲದೆ ಅರೆ ಹೂಟ್ಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆದರೆ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಆರೋಗ್ಯ, ಬಟ್ಟೆಗಳನ್ನು ಒದಗಿಸುವುದು ಕನಸಿನ ಮಾತಾಗಿದೆ. ಮನೆ ನಿರ್ವಹಣೆ ಜೊತೆಯಲ್ಲಿ ಮಾಲೀಕರಿಗೆ ಬಾಡಿಗೆ ನೀಡುವುದು ಹೇಗೆ? ಆದಕಾರಣ ಸದರಿ ನೌಕರರು ಈ ಸಮಸ್ಯೆ ಪರಿಹರಿಸಬೇಕೆಂದು ಹಲವು ಬಾರಿ ಸಂಭಂದ ಪಟ್ಟ ಅಧಿಕಾರಿಗಳಿಗೆ ಬೇಟೆಯಾಗಿ ಚರ್ಚಿಸಿದರು ಸಹ ಇಲ್ಲಿಯವರೆಗೆ ಯಾವುದೇ ತರಹ ಪ್ರಯೋಜನ ಆಗಿಲ್ಲ.
ಆದಷ್ಟೂ ಬೇಗನೆ ಈ ಬಾಕಿ ಇರುವ 5 ತಿಂಗಳ ವೇತನವನ್ನು ಪಾವತ್ತಿಸಲು ಸೂಕ್ತವಾದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಅನಿವಾರ್ಯವಾಗಿ ಗಾರ್ಡನ್ಗಳನ್ನು ಸ್ಥಗಿತ ಗೊಳಿಸಿ ಅನಿರ್ದಿಷ್ಟಾವಧಿ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಬೇಡಿಕೆಗಳು.
- ಬಾಕಿ ಇರುವ ಜುಲೈ 2023ರಿಂದ ನವೆಂಬರ್ 2023ರವರೆಗಿನ ಐದು ತಿಂಗಳ ವೇತನವನ್ನು ಒಟ್ಟಿಗೆ ಕಾರ್ಮಿಕರ ಖಾತೆಗೆ ಜಮಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಿ.
- ಕಾರ್ಮಿಕರಿಗೆ ಪ್ರತಿ ವರ್ಷ ಎರಡು ಜೊತೆ ಯುನಿಫಾರ್ಮ್ ಒದಗಿಸಿ.
- ಸದರಿ ಕಾರ್ಮಿಕರ ಕೆಲಸ ಸ್ಥಳವನ್ನು ಮೇಲಿಂದ ಮೇಲೆ ಬದಲಾಯಿಸಿ.