ವಿಜಯಪುರ | ‌ಭಾರೀ ಮಳೆಯಿಂದ ಸೋಗಲಿ ಹಳ್ಳದಲ್ಲಿ ಪ್ರವಾಹ; ಹಲವು ಅಂತರ ಜಿಲ್ಲಾ ಮಾರ್ಗಗಳು ಬಂದ್

Date:

Advertisements

ಭಾರೀ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಮೂಕಿಹಾಳ ಬಳಿಯ ಸೋಗಲಿ ಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೆಲಮಟ್ಟದ ಸೇತುವೆ ಮೇಲೆ ನೀರು ಹೆಚ್ಚಾಗಿ, ಕೆಲ ಗ್ರಾಮ, ಪಟ್ಟಣಗಳು ಸೇರಿ ಅಂತರ ಜಿಲ್ಲಾ ಮಾರ್ಗಗಳ ಸಂಪರ್ಕ ಕಡಿತವಾಗಿದೆ. ಮುದ್ದೇಬಿಹಾಳ, ಬಸವನಬಾಗೇವಾಡಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಮಂಗಳೂರು ಬೆಂಗಳೂರು ರಸ್ತೆ ಸಂಪರ್ಕವು ಕಡಿತವಾಗಿದೆ. ಹುಣಸಗಿ, ಸುರಪುರ, ಕಲಬುರ್ಗಿ, ಲಿಂಗಸೂರು ರಾಯಚೂರು, ಬೀದರ್ ಮಾರ್ಗಗಳು ಬಂದ್ ಆಗಿವೆ.

ತಾಳಿಕೋಟೆಯಲ್ಲಿ ನಡೆಯುತ್ತಿರುವ ಇಸ್ತಮಾ ಕಾರ್ಯಕ್ರಮಕ್ಕೆಂದು ವಿವಿಧ ಭಾಗಗಳಿಂದ ಬಂದಿದ್ದ ಐವತ್ತಕ್ಕೂ ಅಧಿಕ ವಾಹನಗಳು ಮುಖ್ಯಹಾಳ ದರ್ಗಾದಲ್ಲಿ ಬೀಡು ಬಿಟ್ಟಿವೆ. ಪಟ್ಟಣದಿಂದ ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿನ ಸೇತುವೆ ಮೇಲು ದೋಣಿ ನದಿ ನೀರು ಮತ್ತಷ್ಟು ಆವರಿಸಿದ್ದರಿಂದ ಶನಿವಾರವು ಅಣಗಿನಾಳ ಮುಖ್ಯಹಾಳ ಮೆಣಜಿಗೆ ಮಾರ್ಗದಿಂದ ವಾಹನಗಳು ಸಂಚರಿಸಿವೆ.

ದೋಣಿ ನದಿ ದಡದ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆನಾಶದ ಭೀತಿ ಎದುರಾಗಿದೆ. ಗುತ್ತಿಹಾಳ ಬೋಳವಾಡ ತುಂಬಗಿ ಶಾಸನೂರ ಮೊದಲಾದ ಗ್ರಾಮಗಳ ಸುಮಾರು ರೂ.200ಕ್ಕೂ ಅಧಿಕ ಆಕ್ಟರ್ ಪ್ರದೇಶದ ಜಮೀನು ಜಲಾವೃತವಾಗಿದೆ. ಹತ್ತಿ ತೊಗರಿ ಸೂರ್ಯಕಾಂತಿ ಬೆಳೆಗಳು ನೀರಿನಲ್ಲಿ ಮುಳುಗಿವೆ.

Advertisements

ಇದನ್ನೂ ಓದಿ: ವಿಜಯಪುರ | ʼಸಾಮಾಜಿಕ ಜಾಲತಾಣದ ಪ್ರಭಾವದಲ್ಲಿ ಯುವಜನತೆ ಪತ್ರಕರ್ತರಾಗುತ್ತಿದ್ದಾರೆʼ

ದೋನಿ ನದಿ ಪ್ರವಾಹ ಪೀಡಿತ ಜಮೀನುಗಳಿಗೆ ವಿಪತ್ತು ನಿರ್ವಹಣೆ ನೋಡಲ್ ಅಧಿಕಾರಿಯೂ ಆದ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್ ಮತ್ತು ತಾಳಿಕೋಟೆ ತಸಿಲ್ದಾರ ವಿನಯ ಹೂಗಾರ್ ಭೇಟಿ ನೀಡಿ ಪರಿಶೀಲಿಸಿದರು.

ತಾಳಿಕೋಟೆಯ ವಿಜಯಪುರ ರಸ್ತೆಯಲ್ಲಿ 110ಕೆ ಹೆಚ್ ಬಿ ಸಾವಿರದ ಬಳಿಯ ಜಮೀನಿನಲ್ಲಿ ವಾಸವಿರುವ ಚಂದ್ರಮ ಹಲಗಲ್ ಅವರ ಮನೆ ಸುತ್ತ ನೀರು ಆವರಿಸಿದೆ. ವಿಷ ಜಂತುಗಳು ಮನೆಯೊಳಗೆ ಬರುತ್ತಿದ್ದು ಎಲ್ಲಾ ಸಾಮಗ್ರಿಗಳು ಹಾಳಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X