ವಿಜಯಪುರ | ಕನಕದಾಸನಾದ ತಿಮ್ಮಪ್ಪ ನಾಯಕ: ಮುಖ್ಯ ಶಿಕ್ಷಕ ಖಾಜಿ

Date:

Advertisements

ಕನಕದಾಸರು ನಾಡು ಕಂಡ ಸಂತ ಶ್ರೇಷ್ಠರಲ್ಲೊಬ್ಬರಾಗಿದ್ದು, ಅವರ ಆದರ್ಶಗಳು ಎಲ್ಲರಿಗೂ ಅನುಕರಣೀಯ ಎಂದು ನಾಲತವಾಡ ಸರ್ಕಾರಿ ಉರ್ದು ಶಾಲೆಯ ಮುಖ್ಯ ಶಿಕ್ಷಕ ಎ ಎಚ್ ಖಾಜಿ ಹೇಳಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉರ್ದು ಶಾಲೆಯಲ್ಲಿ ಜರಗಿದ ಕನಕದಾಸರ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

“ದೇವಸ್ಥಾನ ನಿರ್ಮಾಣಕ್ಕಾಗಿ ಭೂಮಿಯನ್ನು ಅಗೆಯುತ್ತಿರುವ ಸಂದರ್ಭದಲ್ಲಿ ಏಳು ಕೊಪ್ಪರಿಗೆಯಷ್ಟು ಬಂಗಾರ ದೊರಕಿತು. ತಿಮ್ಮಪ್ಪ ನಾಯಕ ಕಾಗಿನೆಲೆಯಲ್ಲಿ ಆದಿಕೇಶವ ದೇವಸ್ಥಾನ ನಿರ್ಮಾಣ ಮಾಡಿ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಉಳಿದುದ್ದನ್ನು ಬಡಬಗ್ಗರಿಗೆ ಹಂಚಿದ. ಈ ಉದಾರ ಗುಣದಿಂದ ಜನರು ತಿಮ್ಮಪ್ಪ ನಾಯಕನನ್ನು ʼಕನಕʼ ಎಂದು ಕರೆದರು” ಎಂದು ಹೇಳಿದರು.

Advertisements

“ಹೆಂಡತಿ ಸುಜ್ಞಾನ ವಧೂಟಿ ಹಾಗೂ ತಾಯಿಯ ಮರಣದಿಂದ ದುಃಖದ ಕೂಪಕ್ಕೆ ತಳ್ಳಲ್ಪಟ್ಟ ಕನಕನಿಗೆ ಭಗವಂತ ಕನಸಿನಲ್ಲಿ ಬಂದು ದಾಸನಾಗುವಂತೆ ಸೂಚಿಸಿದ್ದರೂ ಸ್ವೀಕರಿಸಲಿಲ್ಲ. ಶಿಗ್ಗಾಂವಿಯ ಮೇಲೆ ಪರಕೀಯರ ದಾಳಿ ನಡೆದಾಗ ಆತನಿಗೆ ಯುದ್ಧ ಮಾಡುವ ಸನ್ನಿವೇಶ ಎದುರಾಗಿ, ಅಪಾರವಾದ ಗಾಯಕ್ಕೆ ತುತ್ತಾದನು. ಈ ವೇಳೆ ಭಗವಂತನ ದರ್ಶನವಾಗಿ ವೈರಾಗ್ಯ ತಾಳಿದ ಕನಕ ಮೈ ಮೇಲೆ ಒಂದು ಪಂಚೆಯನ್ನುಟ್ಟು, ಹೆಗಲಿಗೆ ಕಂಬಳಿ ಹಾಕಿ, ಕೈಯಲ್ಲಿ ಏಕತಾರಿ ಹಿಡಿದು ಆದಿಕೇಶವನನ್ನು ನೆನೆಯುತ್ತಾ, ಈಶ ನಿನ್ನ ಭಜನೆಯನ್ನು ಆಶೆಯಿಂದ ಮಾಡುವೆನು ಎನ್ನುತ್ತಾ ಕನಕದಾಸನಾದ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕನಕ ಜಯಂತಿ ಮೆರವಣಿಗೆ ವೇಳೆ ಯುವಕರ ನಡುವೆ ಗಲಾಟೆ

ಈ ವೇಳೆ ಶಿಕ್ಷಕಿಯರುಗಳಾದ ಎಂ ಎಂ ಇಸ್ಲಾಂಪೂರ, ಜೆ ಕೆ ಯರಂತೇಲಿಮಠ, ಶಮಶಾದಬೇಗಂ ಸಿಕ್ಕಲಗಾರ, ಎಂ ಎ ಮುಲ್ಲಾ, ಜಡ್ ಎಸ್ ಮುಲ್ಲಾ, ಜೆ ಎಂ ಮೂಲಿಮನಿ ಸೇರಿದಂತೆ ಮಕ್ಕಳು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X