ಯಾದಗಿರಿ| ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮನವಿ

Date:

Advertisements

ಸುರಪುರ ತಾಲೂಕಿನ ರಾಜ್ ಕಾಲುವೆ ಡಿ-6ನ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಹಾಗಾಗಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸುರಪುರ ತಾಲೂಕು ಸಮಿತಿ ವತಿಯಿಂದ ಕೃಭಾಜನಿನಿ ಭೀಮರಾಯನಗುಡ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಪತ್ರ ಸಲ್ಲಿಸಿ ಬಳಿಕ ಹಣಮಂತ್ರಾಯ ಚಂದಲ್ಲಾಪುರ್ ಮಾತನಾಡಿ, ʼಸುರಪುರ ತಾಲೂಕಿನ ಡಿ-6 ಕಾಲವೆಯ ಕೊನೆಯ ಭಾಗ 36 ಕಿ ಮೀ ಇದ್ದು, 14.8000 ಹೆಕ್ಟರ್ ರೈತರ ಜಮೀನು ಇದೆ. ಕೊನೆಯ ಭಾಗದ ರೈತರ ಜಮೀನುಗಳಲ್ಲಿ ಕವಡಿಮಟ್ಟಿ, ಶೆಳ್ಳಗಿ ಮತ್ತು ಮುಷ್ಕಳ್ಳಿ, ಕುಂಬಾರಪೇಟ, ವೆಂಕಟಾಪೂರ, ರುಕ್ಷಾಪೂರ ಗುಡಿಹಾಳ, ಕುಪಗಲ್, ಲಿಂಗದಳ್ಳಿ, ಚಂದ್ಲಾಪೂರ, ಬೇವಿನಾಳ, ಕರ್ನಾಳ, ಸೂಗೂರ, ಹೆಮ್ಮಡಗಿ ಮೂಲಕ ನೀರಾವರಿ ಇಲಾಖೆಯಿಂದ ಕಾಲುವೆ ಹಾದು ಹೋಗಿರುತ್ತದೆ. ಈ ಭಾಗದ ರೈತರ ಜಮೀನಿಗೆ ಬರುವ ಕಾಲುವೆ ಯಾವುದೇ ರೀತಿ ಸಿಲ್ಟ್ ಮತ್ತು ಜಂಗಲ್ ಕಟ್ಟಿಂಗ್ ಮಾಡಿರುವುದಿಲ್ಲ. ಕೇವಲ ಟೆಂಡರ್ ಆಗಿರುತ್ತದೆ ಎಂದು ಹೇಳುತ್ತಿದ್ದಾರೆ ಒಂದು ಕೆಲಸ ಕೂಡಾ ಆಗಿಲ್ಲ. ಟೆಂಡರ್ ಕರೆದಿದ್ದರೆ ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಬೋನ್ಹಾಳ ಏತ ನೀರಾವರಿ ಮೇಲ್ವಿಚಾರಣೆಯನ್ನು ಈ ಕೂಡಲೇ ಹಸನಾಪೂರ ಸಬ್ ಡಿವಿಜನ್‌ನ ಅಧಿಕಾರಿಗಳಿಗೆ ವಹಿಸಬೇಕುʼ ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ?: ಯಾದಗಿರಿ| ರೈತ ಸಂಘಟನೆಯ ಪದಾಧಿಕಾರಿಗಳ ನೇಮಕ

Advertisements

ಈ ಸಂದರ್ಭದಲ್ಲಿ ವೆಂಕಟೇಶಗೌಡ ಕುಪಗಲ್, ವೆಂಕೋಬ ದೊರೆ ಕುಪಗಲ್, ರಾಘು ಕುಪಗಲ್, ಶೀನಪ್ಪಗೌಡ ಪೊಲೀಸ್ ಪಾಟೀಲ, ದೇವಪ್ಪ ಪೂಜಾರಿ, ದೇವಿಂದ್ರಪ್ಪ ವಂಟೂರು, ಪರಮಣ್ಣ ಬಾಣತಿಹಾಳ, ಭೀಮಣ್ಣ ಕುಪಗಲ್, ತಿರುಪತಿ ಕುಪಗಲ್, ನಿಂಗಪ್ಪ
ಬಸವರಾಜ ನಗರಗುಂಡ, ಮರೆಪ್ಪ ನಗರಗುಂಡ ಇನ್ನಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X