ಯಾದಗಿರಿ | ಜಾತಿ ಗಣತಿಯಲ್ಲಿ ಬಲಗೈ ಸಮುದಾಯ ಹೊಲೆಯ ಎಂದು ನಮೂದಿಸಿ : ಗಾಳೆಪ್ಪ ಪೂಜಾರಿ

Date:

Advertisements

ಯಾದಗಿರಿ ಜಿಲ್ಲಾ ಒಳ ಮೀಸಲಾತಿ ಸಮನ್ವಯ ಸಮಿತಿ ವತಿಯಿಂದ ಬಲಗೈ ಸಮುದಾಯ ಮುಖಂಡರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನಲ್ಲಿ ಒಳ ಮೀಸಲಾತಿ ಜಾತಿ ಜನಗಣತಿ ಜಾಗೃತಿ ಕುರಿತು ಸಭೆ ನಡೆಸಿದರು.

ಜಿಲ್ಲಾಧ್ಯಕ್ಷ ಡಾ.ಗಾಳೆಪ್ಪ ಪೂಜಾರಿ ಮಾತನಾಡಿ, ʼನ್ಯಾಯಮೂರ್ತಿ ಎಸ್.ನಾಗಮೋಹನ್ ದಾಸ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಒಳ ಮೀಸಲಾತಿ ಜಾತಿ ಜನಗಣತಿ ಮೇ 5 ರಿಂದ 17 ವರೆಗೆ ನಡೆಯುವ ಜಾತಿ ಗಣತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಬಲಗೈ ಸಮುದಾಯದವರು ಕಡ್ಡಾಯವಾಗಿ ʼಹೊಲೆಯʼ ಎಂದು ನಮೂದಿಸಬೇಕುʼ ತಿಳಿಸಿದರು.

ಸಮಿತಿಯ ಡಾ.ಭಗವಂತ ಅನ್ವರ, ಗೌರವಾಧ್ಯಕ್ಷ ಶ್ರೀಶೈಲ ಹೂಸಮನಿ, ಉಪಾಧ್ಯಕ್ಷ ಸಾಬಣ್ಣ ಬಡಿಗೇರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಮರೆಪ್ಪ ಬುಕ್ಕಲ್, ಮುಖಂಡರಾದ ರಾಹುಲ್ ಹುಲಿಮನಿ, ಶಿವಪುತ್ರ ಜವಳಿ, ಮಾಳಿಂಗರಾಯ ಅನಕಸೂಗುರ, ಕಾಶಿನಾಥ ನಾಟೇಕರ್, ಪರಶುರಾಮ, ಅಶೋಕ ಹೂಸಮನಿ, ಮರೆಪ್ಪ ಪರಮೇಶ್ವರ್, ಮಲ್ಲೆಶ ಕುರುಕುಂದಿ, ಶರಣಪ್ಪ ಮದ್ದರಕಿ, ಚಂದ್ರಕಾಂತ ಚಲುವಾದಿ, ಶಿವು ಕುರುಕುಂಬಳ, ರಂಗನಾಥ ಬಾಗ್ಲಿ, ವಿರೇಶ್ ಕೊಂಕಲ್ ಮುಂತಾದವರು ಉಪಸ್ಥಿತರಿದ್ದರು

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X