ಯಾದಗಿರಿ | ‘ಲುಂಬಿನಿ ವನ’ ಉದ್ಯಾನವನಕ್ಕಿಲ್ಲ ನಿರ್ವಹಣೆ ಭಾಗ್ಯ; ಆಡಳಿತದ ವಿರುದ್ಧ ಜನರ ಆಕ್ರೋಶ

Date:

Advertisements

ಯಾದಗಿರಿ ಜಿಲ್ಲೆಯ ಹೃದಯ ಭಾಗದಲ್ಲಿರುವ ʼಲುಂಬಿನಿ ವನʼ ಉದ್ಯಾನವನವು ನಿರ್ವಹಣೆ ಇಲ್ಲದೆ ಪಾಳು ಬಿದ್ದ ಜಾಗದಂತಾಗಿದೆ. ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.

ಉದ್ಯಾನವನವು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಕಳೆಹೀನವಾಗಿದೆ. ಪಾಥ್‌ ವೇ, ವಾಕಿಂಗ್‌ ವೇ, ಅಲಂಕಾರಿಕ ಗಿಡಗಳಿಗೆ ನೀರು ಹರಿಸಲು ನಿರ್ಮಾಣ ಮಾಡಲಾದ ನಲ್ಲಿಗಳು ಕೆಟ್ಟುನಿಂತಿವೆ. ವಾಕಿಂಗ್ ಮಾಡಿ ಆಶ್ರಯ ಪಡೆಯಲು ನಿರ್ಮಾಣ ಮಾಡಲಾದ ಮಂಟಪದ ಹಾಸಿಗೆ, ಮೇಲ್ಛಾವಣಿ ಕಿತ್ತು ಹೋಗಿದೆ. 2015ರ ನವೆಂಬರ್ 22ರಂದು ಉದ್ಘಾಟನೆಗೊಂಡ ಈ ಉದ್ಯಾನವನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಒಂದು ಭಾಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

WhatsApp Image 2025 05 08 at 11.01.01 AM

₹5 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಉದ್ಯಾನವನದೊಳಗೆ ವಿವಿಧ ಕಾಮಗಾರಿ ನಿರ್ಮಾಣ ಮಾಡಲಾಗಿದೆ. ಆದರೆ, ಈಗ ಎಲ್ಲವೂ ನಿಷ್ಪ್ರಯೋಜನವಾದಂತೆ ಭಾಸವಾಗುತ್ತಿದೆ. 52 ಎಕರೆ ಪ್ರದೇಶದ ವಿಶಾಲವಾದ ಲುಂಬಿನಿ ಉದ್ಯಾನವನ ಈಗ ಅಲ್ಲಲ್ಲಿ ಹಾಳಾಗಿದೆ. ಮಕ್ಕಳಿಗಾಗಿ ತೂಗುಯ್ಯಾಲೆ, ಜಾರುಬಂಡಿ ಅಳವಡಿಸಲಾಗಿದೆ. ಆದರೆ, ಆ ಜಾಗ ಈಗ ನೀರು ತುಂಬಿಕೊಂಡು ಕೆಸರುಗದ್ದೆಯಂತಾಗಿದೆ. ಮಕ್ಕಳು ಆಟವಾಡಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಕತ್ತು ಕಿತ್ತ ಜಿರಾಫೆ, ರಂಧ್ರಗಳಿಂದ ಕೂಡಿದ ಆನೆ ಸೇರಿದಂತೆ ಬಹುತೇಕ ಅಲಂಕಾರಿಕ ಗೊಂಬೆಗಳು, ಆಟಿಕೆಗಳು ದುಸ್ಥಿತಿಯಲ್ಲಿವೆ.

Advertisements

ಹಸಿರು ಮಾಯಾ ವನದ ಐಲ್ಯಾಂಡ್‌ಗೆ ತೆರಳುವ ಮಾರ್ಗದಲ್ಲಿ ನೆಲಹಾಸು ಬಂಡೆಗಳು ಮೇಲೆದ್ದು, ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದೇ ಮಾರ್ಗದಲ್ಲಿ ಕಾಂಪೌಂಡ್ ಗೋಡೆ ಮುರಿದು ಬಿದ್ದಿದೆ. ಅಲ್ಲೇ ನಿರ್ಮಾಣ ಮಾಡಲಾಗಿರುವ ಕ್ಯಾಂಟೀನ್ ಮಳಿಗೆಗಳು ಬಳಕೆಗೆ ಮುನ್ನವೇ ಪಾಳು ಬಿದ್ದಿವೆ. ಸೂಕ್ತ ನಿರ್ವಾಹಣೆ ಇಲ್ಲದೆ ಮಳಿಗೆಗಳ ಮೇಲ್ಛಾವಣಿಗಳು ಕಿತ್ತು ಬೀಳುವ‌ ಹಂತದಲ್ಲಿವೆ. ಕೋಟ್ಯಂತರ ಅನುದಾನ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಉದ್ಯಾನವನವನ್ನು ಸಂಬಂಧಪಟ್ಟವರು ಹಾಳುಗೆಡವಿದ್ದಾರೆ. ಸೂಕ್ತ ನಿರ್ವಹಣೆ ಮಾಡಬೇಕಾದವರು ಕಂಡೂ ಕಾಣದಂತೆ ಇದ್ದಾರೆ ಎಂದು ಸ್ಥಳೀಯರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Image 2025 05 08 at 11.01.02 AM 1

ಯುವ ಮುಖಂಡ ರಾಹುಲ್ ಕೊಲ್ಲೂರ್ ಈದಿನ.ಕಾಮ್ ನೊಂದಿಗೆ ಮಾತನಾಡಿ, “ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಲುಂಬಿನಿ ವನದ ಆವರಣದ ಬಲ ಭಾಗದಲ್ಲಿ ಮಳೆ ಬಂದರೆ ನೀರು ನಿಲುತ್ತದೆ. ಎರಡು ಫೀಟ್ ಮಣ್ಣು ಹಾಕಿ ಎತ್ತರ ಮಾಡಬೇಕು. ವನದಲ್ಲಿರುವ ರಸ್ತೆ ಎತ್ತರವಾಗಿ ನಿರ್ಮಾಣ ಮಾಡಬೇಕಿದೆ. ಲುಂಬಿನಿ ವನವೆಂದು ಹೆಸರಿಟ್ಟರೆ ಮಾತ್ರ ಸಾಕಾಗುವುದಿಲ್ಲ ವನದಲ್ಲಿ ಗೌತಮ ಬುದ್ಧನ ಪ್ರತಿಮೆ ಸ್ಥಪನೆ ಮಾಡಬೇಕು” ಎಂದು ಆಗ್ರಹಿಸಿದರು.

ಈ ಕುರಿತು ಉದ್ಯಾನವನದಲ್ಲಿ ಕೆಲಸ ಮಾಡುತ್ತಿರುವ ನಾಗಪ್ಪ ಮಾತಾನಾಡಿ, “ಸಾರ್ವಜನಿಕರು ಲುಂಬಿನಿ ಉದ್ಯಾನವನಕ್ಕೆ ಪ್ರವೇಶಿಸಲು 10‌ ರೂಪಾಯಿ ಟಿಕೆಟ್ ಶುಲ್ಕ ದರ ಇದೆ. ಪ್ರತಿನಿತ್ಯ ಕನಿಷ್ಠ ಇನ್ನೂರು ಜನ ಬರುತ್ತಾರೆ. ಬಂದ ಹಣದಲ್ಲಿ ಅಲ್ಲೇ ಕೆಲಸ ಮಾಡುವ ನಾಗಪ್ಪ, ವಿರುಪಾಕ್ಷಯ್ಯ ಸ್ವಾಮಿ, ಬಸವರಾಜ ಸಜ್ಜನ್, ಅಪ್ಸರ ಹುಸೇನಿ, ನಾಗಮ್ಮ ಗಿರಪ್ಪನೂರ್, ನಾಗಮ್ಮ ದೋರನಹಳ್ಳಿ, ನಿರ್ಮಲ ಸೇರಿ ಏಳು ಜನ ಹಂಚಿಕೊಳ್ಳಬೇಕು. ಉದ್ಯಾನವನದಲ್ಲಿ ಡ್ಯಾಮೇಜ್ ಆಗಿರುವ ವಸ್ತುಗಳು ಕೂಡಾ ಪ್ರವೇಶ ಶುಲ್ಕದಲ್ಲಿಯೇ ದುರಸ್ತಿ ಮಾಡಿಸಬೇಕು. ಕಳೆದ 10 ವರ್ಷಗಳಿಂದ ನಮಗೆ ಉದ್ಯೋಗ ಭದ್ರತೆಯೂ ಇಲ್ಲ. ಈ ಮೊದಲು ಟೆಂಡರ್‌ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೆವು. ಈಗ ದಿನಗೂಲಿಗೆ ಕೆಲಸ ಮಾಡುತ್ತಿದ್ದೇವೆ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ನಮಗೆ ಉದ್ಯೋಗ ಭದ್ರತೆ ನೀಡಿ, ಪಾರ್ಕ್‌ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

WhatsApp Image 2025 05 08 at 11.01.01 AM 1

ʼಲುಂಬಿನಿ ವನʼ ಉದ್ಯಾನವನದ ದುಸ್ಥಿತಿ ಕೇವಲ ಒಂದು ಉದ್ಯಾನವನದ ನಿರ್ವಹಣಾ ಸಮಸ್ಯೆಯಲ್ಲ, ಇದು ಸಾರ್ವಜನಿಕ ಸಂಪತ್ತಿನ ಬಗ್ಗೆ ಆಡಳಿತದ ಗಂಭೀರತೆ ಕೊರತೆಯನ್ನೂ ತೋರಿಸುತ್ತದೆ. ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಉದ್ಯಾನವನ ನಿರ್ಲಕ್ಷ್ಯ, ನಿರ್ವಹಣೆಯ ಕೊರತೆ ಮತ್ತು ಆಡಳಿತ ಯಂತ್ರದ ಅಸಡ್ಡೆಯಿಂದ ಇಂದು ಬಿಕೋ ಎನ್ನುತ್ತಿದೆ.

WhatsApp Image 2025 05 08 at 11.01.00 AM 1

ಸ್ಥಳೀಯರ ತೀವ್ರ ಅಸಮಾಧಾನ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗೆ ಎಚ್ಚರಿಕೆಯಾಗಬೇಕು. ಈ ಪರಿಸ್ಥಿತಿಯಿಂದ ಪಾಠಗಳನ್ನೂ ಕಲಿಯಬೇಕು. ಸಾರ್ವಜನಿಕರು ತೆರಿಗೆಯ ರೂಪದಲ್ಲಿ ಕೊಡುವ ಹಣ ಸರಿಯಾಗಿ ಬಳಕೆಯಾಗುವುದಾದರೆ ಮಾತ್ರ ಇಂಥ ಯೋಜನೆಗಳು ತಮ್ಮ ಉದ್ದೇಶ ಸಾಧಿಸಬಲ್ಲವು. ಆದ್ದರಿಂದ, ಆದಷ್ಟು ಬೇಗ ಪ್ರತ್ಯಕ್ಷ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ, ಉದ್ಯಾನವನದ ಪುನಶ್ಚೇತನಕ್ಕಾಗಿ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.

WhatsApp Image 2025 05 08 at 11.01.00 AM 2
WhatsApp Image 2024 11 08 at 12.18.37 667ed234 e1731048718511
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X