ಯಾದಗಿರಿ | ಆಸ್ತಿ ವಿವಾದದಿಂದ ತಂದೆಯನ್ನು ಮಗ ಕೊಲೆ ಮಾಡಿರುವ ಘಟನೆ ಶಹಾಪುರ ತಾಲ್ಲೂಕಿನ ಮಡ್ನಾಳ ಕ್ಯಾಂಪ್ ಹತ್ತಿರ ಭಾನುವಾರ ನಡೆದಿದೆ.
ಶಹಾಪುರ ನಗರದ ಹಳಿಸಗರದ ಯಂಕಪ್ಪ ಅಂಬಲಪ್ಪ ಮ್ಯಾಕಲದೊಡ್ಡಿ (65) ಕೊಲೆಯಾದ ವ್ಯಕ್ತಿ. ನಾಗಪ್ಪ ಯಂಕಪ್ಪ (29) ಕೊಲೆ ಮಾಡಿದ ಮಗ ಎನ್ನಲಾಗಿದೆ.
ಭಾನುವಾರ ಮಡ್ನಾಳ ಸೀಮಾಂತರದಲ್ಲಿ ಬರುವ ತಮ್ಮ ಹೊಲಕ್ಕೆ ಹಳಿಸಗರದಿಂದ ಯಂಕಪ್ಪ ತೆರಳಿದ್ದರು. ಆಗ ತಂದೆ ಮತ್ತು ಮಗನ ನಡುವೆ ಆಸ್ತಿ ವಿಷಯವಾಗಿ ಜಗಳ ನಡೆದಿದೆ. ಆಗ ಸಿಟ್ಟಿನಿಂದ ಮಗ ನಾಗಪ್ಪ ತಂದೆಯ ಮೇಲೆ ಹಲ್ಲೆ ಮಾಡಿದಾಗ ಸ್ಥಳದಲ್ಲಿಯೇ ಯಂಕಪ್ಪ ಮೃತಪಟ್ಟಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಬೀದರ್ | ವಸತಿ ನಿಲಯದಲ್ಲಿ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ
ಘಟನಾ ಸ್ಥಳಕ್ಕೆ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುರಪುರ ಡಿವೈಎಸ್ಪಿ ಜಾವೇದ್ ಇನಾಂದಾರ, ಸಿಪಿಐ ಶರಣಗೌಡ ನ್ಯಾಮಣ್ಣನವರ ಹಾಗೂ ಇತರ ಅಧಿಕಾರಿಗಳು ಇದ್ದರು