2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇವಲ 1000 ಸಹಾಯಕಿಯರಿಗೆ ರೂ.750 ಗೌರವ ಧನವನ್ನು ಹೆಚ್ಚಳ ಮಾಡಿರುವುದು ಇಡೀ ರಾಜ್ಯದ ಅಂಗನವಾಡಿ ನೌಕರರಿಗೆ ಬಹಳ ಬೇಸರ ತಂದಿದೆ ಕರ್ನಾಟಕ ರಾಜ್ಯ
ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ತಿಳಿಸಿದೆ.
ʼಅಂಗನವಾಡಿ ನೌಕರರು ಗ್ರಾಮೀಣ ಮಟ್ಟದಲ್ಲಿ ಕೊಳೆಗೇರಿಗಳ ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಶಾಲಾ ಪೂರ್ವ ಶಿಕ್ಷಣ ನಿಡುವಲ್ಲಿ ಗರ್ಭಿಣಿ ಮತ್ತು ಬಾಣಂತಿಯ ಕಿಶೋರಿಯರ, ಅವರುಗಳಿಗೆ ಪೌಷ್ಟಿಕಾಂಶ ನಿಡುವಲ್ಲಿ ಮಹತ್ತರವಾದ ಸೇವೆಯನ್ನು
ಕಳೆದ 50 ವರ್ಷಗಳಿಂದಲೂ ಸಲ್ಲಿಸುತ್ತಾ ಬಂದಿದ್ದಾರೆ ಎಂದು ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ, ರಾಜ್ಯ ಕಾರ್ಯದರ್ಶಿ ಎಂ.ಉಮಾದೇವಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಈ ಯೋಜನೆಯಲ್ಲಿ ಬಹುತೇಕ ಕಾರ್ಯಕರ್ತೆಯರು ಒಬ್ಬಂಟಿ ಮಹಿಳೆ, ವಿಧವೆಯರು ಇರುವುದರಿಂದ ಹೆಣ್ಣು ಮಕ್ಕಳ ಆರ್ಥಿಕವಾಗಿ ಮೇಲೆ ಬರುವ ಹಿನ್ನೆಲೆಯಲ್ಲಿ ಐಸಿಡಿಎಸ್ ಯೋಜನೆ ಜಾರಿಗೆ ತಂದಿರುವುದು, ಈ ಸೇವೆಯನ್ನು ಸಮರ್ಪಕವಾಗಿ ಕೆಳ ಮಟ್ಟದ ಜನಗಳಿಗೆ ತಲುಪುವ ನಿಟ್ಟಿನಲ್ಲಿ ಈ ಕಾರ್ಯಕರ್ತೆಯರನ್ನು ಸೇವೆಗೆ ತೆಗೆದುಕೊಂಡಿದ್ದಾರೆ, ಇಡೀ ಕುಟುಂಬದ ಜವಾಬ್ದಾರಿಯನ್ನು ಈ ಬಡ ಹೆಣ್ಣುಮಕ್ಕಳ ಮೇಲೆ ಇದೆ. ಇಂತಹ ಸಂದರ್ಭದಲ್ಲಿ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆರುತ್ತಿವೆ. ಈಗ ತಮಗೆ ಸಿಗುವ ಗೌರವ ಧನದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಆರೋಗ್ಯ, ಮನೆ ಬಾಡಿಗೆ ನೀಡುವುದು ದುಸ್ತರವಾಗಿದೆʼ ಎಂದರು
ʼಈಗಿನ ಬೆಲೆ ಏರಿಕೆ ಸಂದರ್ಭದಲ್ಲಿ ಕನಿಷ್ಠ ವೇತನ ಜಾರಿಗೊಳಿಸದೆ ಕೇಂದ್ರ ಮತ್ತು ರಾಜ್ಯ ಎರಡು ಸರಕಾರಗಳೂ ಇವರಿಗೆ ಅನ್ಯಾಯ ಮಾಡಿವೆ. ಕೇಂದ್ರ ಸರಕಾರವು ತನ್ನ 11ನೇ ಬಜೆಟ್ನಲ್ಲಿ ಸಹ ನಯಾ ಪೈಸೆ ಗೌರವ ಧನವನ್ನು ಏರಿಕೆ ಮಾಡದೆ
ಇರುವುದು ಆ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಚುನಾವಣಾ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿರುವ 6ನೇ ಗ್ಯಾರಂಟಿಯಂತೆ ಗೌರವ ಧನವನ್ನು 15 ಸಾವಿರಕ್ಕೆ ಹೆಚ್ಚಿಸಬಹುದು ಎನ್ನುವ ಕನಿಷ್ಟ ನಿರೀಕ್ಷೆಯೂ ಹುಸಿಯಾಗಿದೆʼ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನವ ಉದಾರೀಕರಣ ನೀತಿಗಳಿಗೆ ಮಣೆ ಹಾಕಿರುವ ರಾಜ್ಯ ಬಜೆಟ್ : ಶರಣಬಸಪ್ಪ ಮಮಶೆಟ್ಟಿ
ʼಒಟ್ಟಾರೆಯಾಗಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ಅಂಗನವಾಡಿ ನೌಕರರು ಇಟ್ಟಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದೆ. ಸರ್ಕಾರ ಈ ತೀರ್ಮಾನವನ್ನು ಮರು ಪರಿಶೀಲಿಸಿ ಈ ಹಿಂದೆ ಭರವಸೆ ನೀಡಿರುವಂತೆ ಮಾಸಿಕ ಗೌರವ ಧನವನ್ನು 15 ಸಾವಿರಕ್ಕೆ ಹೆಚ್ಚಿಸುವುದೂ ಸೇರಿದಂತೆ ಸಂಘವು ಮುಂದಿಟ್ಟಿರುವ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ರಾಜ್ಯ ಸಮಿತಿ ಆಗ್ರಹಿಸುತ್ತದೆʼ ಎಂದಿದ್ದಾರೆ.