ರಾಯಚೂರು | ದಲಿತರ ‘ಯೇವೋಲಾ ಘೋಷಣಾ ಪುನರುಚ್ಛಾರ’ ಸಮಾವೇಶ

Date:

Advertisements

ಅಂಬೇಡ್ಕರ್‌ ಅವರು ʼಹಿಂದುವಾಗಿ ಹುಟ್ಟಿದ್ದೇನೆ; ಆದರೆ ಹಿಂದುವಾಗಿ ಸಾಯಲಾರೆʼ ಎಂದು ಹೇಳಿದ ಘೋಷಣೆಯನ್ನು ದಲಿತರು ಪುನರುಚ್ಛಾರ ಸಂಕಲ್ಪ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹಿರಿಯ ಹೋರಾಟಗಾರ ಎಂ.ಆರ್.ಭೇರಿ ಹರ್ಷ ವ್ಯಕ್ತಪಡಿಸಿದರು.

ರಾಯಚೂರಿನಲ್ಲಿ ನಡೆಯುತ್ತಿರುವ ಏಮ್ಸ್ ಹೋರಾಟ ವೇದಿಕೆಯಲ್ಲಿ ಶುಕ್ರವಾರ ಯೇವೋಲಾ ಘೋಷಣಾ ಸಂಕಲ್ಪ ಸಮಿತಿ ವತಿಯು ʼದಲಿತರ ಯೇವೋಲಾ ಘೋಷಣಾ ಪುನರುಚ್ಛಾರ ಸಮಾವೇಶʼ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಹಿಂದು ಧರ್ಮದಲ್ಲಿನ ಜಾತಿಪದ್ಧತಿ, ಶೋಷಣೆ, ದೌರ್ಜನ್ಯ, ಮೌಢ್ಯ ಮತ್ತು ಅಸ್ಪೃಶ್ಯತೆ ಸೇರಿದಂತೆ ಹಿಂದು ಧರ್ಮದ ಸಂಕೋಲೆಯಿಂದ ಹೊರಬರಲು ಅಂಬೇಡ್ಕರ್ ಅವರು 1935ರ ಅ.13 ರಂದು ಯೋವೋಲಾದ ನಿಮ್ನ ವರ್ಗಗಳ ಸಮ್ಮೇಳನ ನಡೆಸಿದರು” ಎಂದು ಹೇಳಿದರು.

Advertisements

ಹಿರಿಯ ಹೋರಾಟಗಾರ ಜೆ.ಬಿ. ರಾಜು ಮಾತನಾಡಿ, “ಹಿಂದು ಎನ್ನುವುದು ಅಸಾಂವಿಧಾನಿಕ ಪದವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ನೀಡುತ್ತಿದ್ದ ವೇಳೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ನಿಮ್ನ ವರ್ಗಗಳಿಗೆ ವಿದ್ಯೆ, ಉದ್ಯೋಗ ಹಾಗೂ ರಾಜಕೀಯ ಅಧಿಕಾರದಲ್ಲಿ ಮೀಸಲಾತಿ ಹಕ್ಕು ನೀಡಬೇಕೆಂದು ಬ್ರಿಟಿಷರಿಗೆ ಒತ್ತಾಯಿಸಿದರು” ಎಂದು ನುಡಿದರು.

“ದಲಿತರು ಹಿಂದುಗಳು ಹೌದೋ-ಅಲ್ಲವೋ ಎಂಬುದನ್ನು ಬ್ರಿಟಿಷರಿಗೆ ಸಾಬೀತು ಪಡಿಸಲು ಚೌಡರ್ ಕೆರೆ ನೀರು ಮುಟ್ಟುವ ಹೋರಾಟ ಮತ್ತು ಕಾಳರಾಂ ದೇವಸ್ಥಾನ ಪ್ರವೇಶ ಹಮ್ಮಿಕೊಂಡು ದಲಿತರು ಹಿಂದುಗಳಲ್ಲ ಎಂಬುದನ್ನು ಬ್ರಿಟಿಷರಿಗೆ ಬಾಬಾ ಸಾಹೇಬರು ಸಾಬೀತು ಪಡಿಸಿದ್ದರು” ಎಂದರು.

ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗ ʼಹಿಂದುವಾಗಿ ಹುಟ್ಟಿದ್ದೇನೆ-ಆದರೆ ಹಿಂದುವಾಗಿ ಸಾಯಲಾರೆʼ ಎಂದು ಸಾಮೂಹಿಕ ಪ್ರತಿಜ್ಞೆ ಬೋಧಿಸಿದರು.

ಹಿರಿಯ ಹೋರಾಟಗಾರ ಸಿ.ದಾನಪ್ಪ ನಿಲೋಗಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೆ.ಶರಣಪ್ಪ ಬಲ್ಲಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರಾದ ಸಿ.ದಾನಪ್ಪ ನಿಲೋಗಲ್, ರವೀಂದ್ರ ನಾಥ ಪಟ್ಟಿ, ದೊಡ್ಡಪ್ಪ ಮುರಾರಿ, ಏಮ್ಸ್ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಕಳಸ, ಖಾಜಾ ಅಸ್ಲಂ, ಶರಣಪ್ಪ ದಿನ್ನಿ, ಹೇಮರಾಜ್ ಅಸ್ಕಿಹಾಳ, ಆರ್.ತಿಮ್ಮಾರೆಡ್ಡಿ, ಎಂ.ಈರಣ್ಣ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ನರಸಿಂಹಲು, ಲಕ್ಷ್ಮಣ ಜಾನೇಕಲ್, ಕೆ.ಇ.ಕುಮಾರ್, ಶಿವರಾಯ ಅಕ್ಕರಕಿ, ಸಿ.ಕೆ.ಆಶೋಕ್ ಕುಮಾರ್ ಜೈನ್, ಭೀಮಣ್ಣ ಮಂಚಾಲೆ, ವಿಶ್ವನಾಥ ಪಟ್ಟಿ, ಶೇಖರ್ ರಾಂಪೂರಿ, ರವಿದಾದಸ್, ಯಮುನಪ್ಪ ಜಾಗೀರ ಪನ್ನೂರು, ತಮ್ಮಣ್ಣ ವಕೀಲರು, ವರಲಕ್ಷ್ಮೀ, ಶಾಂತಾದೇವಿ, ಪ್ರಭು ಯಮನಾಳ, ಕ ಶಾಂತಪ್ಪ ಪಿತಗಲ್ ಸೇರಿದಂತೆ ದಲಿತ ಸಂಘಟನೆ ಮುಖಂಡರು, ಪ್ರಗತಿಪರ ಚಿಂತಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X