ಎಂಬಿಬಿಎಸ್ ಇಂಟರ್ನ್‌ಗಳಿಗೆ ರೂ. 25 ಸಾವಿರ ಶಿಷ್ಯವೇತನ ಪಾವತಿಸಲು ಎನ್ಎಂಸಿಗೆ ಸುಪ್ರೀಂ ನಿರ್ದೇಶನ

Date:

Advertisements

ಶೇ.70 ರಷ್ಟು ವೈದ್ಯಕೀಯ ಕಾಲೇಜುಗಳು ಎಂಬಿಬಿಎಸ್‌ ಇಂಟರ್ನ್‌ಶಿಪ್ ಮಾಡುತ್ತಿರುವ ವೈದ್ಯರಿಗೆ ಯಾವುದೇ ಶಿಷ್ಯವೇತನ ನೀಡುತ್ತಿಲ್ಲ ಅಥವಾ ಕನಿಷ್ಠ ಶಿಷ್ಯವೇತನ ಪಾವತಿಸುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 15) ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ನಿರ್ದೇಶನ ನೀಡಿದೆ.

ಆರ್ಮಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ (ಎಸಿಎಂಎಸ್) ಶಿಷ್ಯ ವೇತನ ಪಾವತಿಸಲು ಕೋರಿ ವೈದ್ಯಕೀಯ ಇಂಟರ್ನಿಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ವಿಚಾರಣೆ ನಡೆಸುತ್ತಿದ್ದ ವೇಳೆ ಈ ಬೆಳವಣಿಗೆ ನಡೆದಿದೆ.

ಎಸಿಎಂಎಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ನಿವೃತ್ತ ಕರ್ನಲ್ ಆರ್ ಬಾಲಸುಬ್ರಮಣ್ಯಂ ಅವರು, ಸಶಸ್ತ್ರ ಸಿಬ್ಬಂದಿಯ ಮಕ್ಕಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ (ಎಡಬ್ಲ್ಯೂಇಎಸ್) ಸಂಸ್ಥೆಯು ಯಾವುದೇ ಲಾಭರಹಿತ ಆಧಾರದ ಮೇಲೆ ಕಾಲೇಜುಗಳನ್ನು ನಡೆಸುತ್ತಿದೆ. ಸಂಸ್ಥೆಯು ಯಾವುದೇ ಸರ್ಕಾರಿ ನೆರವು ಪಡೆಯುತ್ತಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.

Advertisements

ಈ ಸುದ್ದಿ ಓದಿದ್ದೀರಾ? ದಾಭೋಲ್ಕರ್ ಹತ್ಯೆ ಪ್ರಕರಣ: ಅಂತಿಮ ವರದಿಯಲ್ಲಿ ಮೂವರು ಆರೋಪಿಗಳ ಬಿಡುಗಡೆಗೆ ಸಿಬಿಐ ಶಿಫಾರಸ್ಸು

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್, ನಾವು ಲಾಭರಹಿತವಾಗಿರುವುದರಿಂದ ಸಫಾಯಿ ಕರ್ಮಚಾರಿಗಳಿಗೆ ಹಣ ನೀಡುವುದಿಲ್ಲ ಎಂದು ನೀವು ಹೇಳಬಹುದೆ? ಇದು ನಿಮಗೆ ಲಾಭ ಆದರೆ ಅವರಿಗೆ ಜೀವನಾಧಾರವಾಗಿದೆ. ನಾವು ಶಿಕ್ಷಕರಿಗೆ ವೇತನ ನೀಡುವುದಿಲ್ಲ ಎಂದು ನೀವು ಹೇಳಬಹುದೇ? ಎಲ್ಲರಿಗೂ ಪೋಷಕರ ಬೆಂಬಲ ಇಲ್ಲದಿರಬಹುದು. ಕಾನೂನು ಗುಮಾಸ್ತರಿಗೆ ಮಾಸಿಕ 80,000 ರೂ.ಗಳನ್ನು ಸುಪ್ರೀಂ ಕೋರ್ಟ್ ಪಾವತಿಸುತ್ತದೆ ಎಂದು ಸೂಚಿಸಿದ ಮುಖ್ಯ ನ್ಯಾಯ ಮೂರ್ತಿಗಳು ಎಸಿಎಂಎಸ್ ಕನಿಷ್ಠ 1 ಲಕ್ಷ ರೂ. ಪಾವತಿಸಬೇಕು ಎಂದು ಕೇಳಿದರು.

ಈ ಹಂತದಲ್ಲಿ ಪೀಠವು ಇತರ ಸರ್ಕಾರಿ ಕಾಲೇಜುಗಳಲ್ಲಿ ಪಾವತಿಸುವ ಶಿಷ್ಯವೇತನ ದರವನ್ನು ಹೋಲಿಸಿತು ಮತ್ತು ಅರ್ಜಿದಾರರಿಗೆ ಅವರು ಎಷ್ಟು ನಿರೀಕ್ಷಿಸುತ್ತಿದ್ದಾರೆ ಎಂದು ಕೇಳಿತು. ಅರ್ಜಿದಾರರ ಪರ ವಕೀಲ ಚಾರು ಮಾಥುರ್, 25,000 ರೂ. ಎಂದು ಹೇಳಿದರು.

ನಂತರದಲ್ಲಿ ಪೀಠವು ಪ್ರಸ್ತುತ ನೂರು ಇಂಟರ್ನಿಗಳಿದ್ದು ವೈದ್ಯಕೀಯ ಇಂಟರ್ನ್‌ಗಳಿಗೆ ಶಿಷ್ಯ ವೇತನವಾಗಿ ತಿಂಗಳಿಗೆ ರೂ.25,000 ಪಾವತಿಸಲು ಎಸಿಎಂಎಸ್‌ಗೆ ಸೂಚಿಸಿತು.

“ಇಂಟರ್ನ್‌ಶಿಪ್ ಅವಧಿಯಲ್ಲಿ ಇಂಟರ್ನ್‌ಗಳಿಗೆ ಶಿಷ್ಯವೇತನ ಪಾವತಿಸಬೇಕಾಗುತ್ತದೆ. ಎನ್‌ಎಂಸಿ ಅಳವಡಿಸಿಕೊಂಡಿರುವ ನಿಯಮಾವಳಿಗಳ ಆದೇಶವನ್ನು ಉಲ್ಲಂಘಿಸಲಾಗುವುದಿಲ್ಲ” ಎಂದು ಪೀಠವು ತನ್ನ ತನ್ನ ಆದೇಶದಲ್ಲಿ ಹೇಳಿದೆ.

ಈ ಹಂತದಲ್ಲಿ ವಕೀಲ ವೈಭವ್ ಗಗ್ಗರ್ ಅವರು ಶೇ. 70 ರಷ್ಟು ಕಾಲೇಜುಗಳು ಶಿಷ್ಯ ವೇತನ ಪಾವತಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋರ್ಟ್ ಅಫಿಡವಿಟ್ ಸಲ್ಲಿಸುವಂತೆ ಎನ್‌ಎಂಸಿ ಪರ ವಕೀಲ ಗೌರವ್ ಶರ್ಮಾ ಅವರಿಗೆ ಸೂಚಿಸಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X