ರಾಜಸ್ಥಾನ | ನಾಪತ್ತೆಯಾದ ವಧುವಿಗಾಗಿ ಮಂಟಪದಲ್ಲೇ 13 ದಿನ ಕಾದು ವಿವಾಹವಾದ ವರ

Date:

Advertisements
  • ರಾಜಸ್ಥಾನ ಗ್ರಾಮದಲ್ಲಿ ಮೇ 3ರಂದು ನಿಶ್ಚಯವಾಗಿದ್ದ ವಿವಾಹ
  • ಮೇ 15ರಂದು ವಧು ದೊರಕಿದ ನಂತರ ಆಕೆಯೊಂದಿಗೆ ವಿವಾಹ

ರಾಜಸ್ಥಾನ ಗ್ರಾಮವೊಂದರಲ್ಲಿ ವಿವಾಹದ ದಿನದ ಶಾಸ್ತ್ರಗಳು ಆರಂಭವಾದ ನಂತರ ವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಮೇಲೆ ವರ ವಧುವಿಗಾಗಿ 13 ದಿನಗಳ ಕಾಲ ಮಂಟಪದಲ್ಲೇ ಕಾದಿದ್ದಾನೆ.

13 ದಿನಗಳ ನಂತರ ಕೊನೆಗೂ ಮಂಟಪಕ್ಕೆ ಆಗಮಿಸಿದ ವಧುವಿನೊಂದಿಗೆ ವಿವಾಹ ನೆರವೇರಿದೆ. ಇಂತಹ ವಿಚಿತ್ರ ಮದುವೆ ಇದೀಗ ರಾಜಸ್ಥಾನ ಸೇರಿದಂತೆ ದೇಶವಿಡೀ ಸುದ್ದಿಯಾಗಿದೆ.

ರಾಜ್ಯದ ಸೈನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇ 3ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ವಧು ಸೃಷ್ಟಿಸಿದ ಗೊಂದಲದಿಂದ ವಿವಾಹ ಮೇ 15ಕ್ಕೆ ನೆರವೇರಿದೆ.

Advertisements

ಆಗಿದ್ದೇನು?

ಮೇ 3ರಂದು ವಿವಾಹ ನೆರವೇರಿಸಲು ನಿಶ್ಚಯಿಸಲಾಗಿದ್ದು, ವಧು, ವರ ಹಾಗೂ ಅವರ ಕುಟುಂಬದವರು ಮದುವೆ ಮಂಟಪಕ್ಕೆ ತಲುಪಿದ್ದರು.

ಮದುವೆ ಶಾಸ್ತ್ರಗಳು ನಡೆಯುತ್ತಿದ್ದಂತೆ ವಧು ಹೊಟ್ಟೆ ನೋವು, ವಾಕರಿಕೆ ಬರುತ್ತಿರುವುದಾಗಿ ಹೇಳಿ ತೆರಳಿದಾಕೆ, ಎಷ್ಟು ಸಮಯವಾದರೂ ಹಿಂತಿರುಗಿ ಬರಲಿಲ್ಲ. ಅನುಮಾನದಿಂದ ವಧುವಿನ ಪೋಷಕರು ಮಂಟಪ ಹುಡುಕಿದರು.

ಸ್ವಲ್ಪ ಸಮಯದ ಬಳಿ ಆಕೆ ತನ್ನ ಪ್ರಿಯಕರನೊಂದಿಗೆ ಮಂಟಪ ಬಿಟ್ಟು ತೆರಳಿರುವುದಾಗಿ ತಿಳಿದು ಬಂದಿದೆ. ಆದರೆ ವರ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು 13 ದಿನಗಳವರೆಗೆ ಮದುವೆ ಮಂಟಪದಲ್ಲೇ ಕುಳಿತಿದ್ದ.

ಈ ಸುದ್ದಿ ಓದಿದ್ದೀರಾ? ಸಂಸತ್ ಭವನ ಉದ್ಘಾಟನೆ ಪಟ್ಟಾಭಿಷೇಕ ಅಲ್ಲ; ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳ ಟೀಕೆ

ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ನಡೆಸಿದ್ದರು. ರಾಜಸ್ಥಾನ ಪೊಲೀಸರು ಮೇ 15ರಂದು ವಧುವನ್ನು ಪತ್ತೆಹಚ್ಚಿದ್ದಾರೆ. ನಂತರ ಮಗಳ ಮನಸ್ಸು ಒಲಿಸುವಲ್ಲಿ ಆಕೆಯ ಪೋಷಕರು ಯಶಸ್ವಿಯಾದರು. ಮಂಟಪದಲ್ಲೇ ಕಾದು ಕುಳಿತಿದ್ದ ವರನೊಂದಿಗೆ ಎಲ್ಲ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿಸಲಾಯಿತು.

ವಧು ಹಿಂತಿರುಗಿ ಬಂದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ವಿವಾಹದ ನಂತರ ವಧು-ವರ ಸಂತಸವಾಗಿದ್ದಾರೆ ಎಂದು ಹೇಳಲಾಗಿದೆ. ಮಂಟಪದಲ್ಲಿದ್ದ ವಧು ಇಷ್ಟು ದಿನಗಳ ಕಾಲ ಎಲ್ಲಿ ಹೋಗಿದ್ದಳು ಎಂದು ಚರ್ಚೆ ಆರಂಭವಾಗಿತ್ತು.

ಬಳಿಕ ವಧು ಮತ್ತು ವರನ ಮನೆಯವರು ಮಾತುಕತೆ ನಡೆಸಿ ವಿವಾಹಕ್ಕೆ ಅನುಮತಿ ನೀಡಿದರು. ಬಳಿಕ ವಿವಾಹ ನೆರವೇರಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X