ವೃದ್ದಾಪ್ಯ ವೇತನಕ್ಕಾಗಿ 2 ಕಿ.ಮೀ ತೆವಳಿಕೊಂಡೇ ಕಚೇರಿಗೆ ಬಂದ ವೃದ್ಧ ಮಹಿಳೆ; ಮನಕಲಕುವ ವಿಡಿಯೋ ವೈರಲ್

Date:

Advertisements

77 ವರ್ಷದ ವೃದ್ಧ ಮಹಿಳೆಯೊಬ್ಬರು ವೃದ್ಧಾಪ್ಯವೇನತಕ್ಕಾಗಿ ತೆವಳಿಕೊಂಡೇ 2 ಕಿ.ಮೀ ದೂರದ ಪಂಚಾಯತಿ ಕಚೇರಿಗೆ ತೆರಳಿರುವ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ತೆವಳುತ್ತಾ ಕಚೇರಿಗೆ ಹೋಗಿರುವ ಮನಕಲಕುವ ದೃಶ್ಯಗಳುಳ್ಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿಯೋಂಜಾರ್ ಜಿಲ್ಲೆಯ ಟೆಲ್ಕೊಯ್ ಪ್ರದೇಶದ ನಿವಾಸಿ ಪಥೂರಿ ದೆಹುರಿ ಎಂಬ ವೃದ್ಧ ಮಹಿಳೆ ತಮ್ಮ ಜೀವನೋಪಾಯಕ್ಕಾಗಿ ಸರ್ಕಾರದಿಂದ ಬರುವ ವೃದ್ಧಾಪ್ಯವೇತನವನ್ನೇ ಅವಲಂಭಿಸಿದ್ದಾರೆ. ಈ ಹಿಂದೆ ಅವರಿಗೆ ಅಪಘಾತವೂ ಆಗಿದ್ದರಿಂದ, ನೇರವಾಗಿ ನಿಂತು ನಡೆಯಲು ವೃದ್ಧಗೆ ಸಾಧ್ಯವಿಲ್ಲ. ಆದರೂ, ವೃದ್ಧಾಪ್ಯವೇತನವನ್ನು ಪಡೆಯಲು ಬೇರಾರು ಸಹಾಯಕ್ಕೆ ಇಲ್ಲದ ಕಾರಣ, ಆಕೆ ತೆವಳುತ್ತಲೇ ಪಂಚಾಯತ್ ಕಚೇರಿಗೆ ಹೋಗಿ, ಬರಬೇಕಾದ ಅನಿವಾರ್ಯತೆ ಇದೆ ಎಂದು ತಿಳಿದುಬಂದಿದೆ.

ಆದಾಗ್ಯೂ, ವೃದ್ದ, ವಿಧವಾ, ವಿಶೇಷಚೇತನರಿಗೆ ನೀಡಲಾಗುವ ಪಿಂಚಣಿಗಳನ್ನು ಮನೆ ಬಾಗಿಲಿಗೇ ತಲುಪಿಸಬೇಕೆಂಬ ನಿಯಮಗಳಿವೆ. ಮನೆ ಬಾಗಿಲಿಗೆ ಸರ್ಕಾರಿ ಸೇವೆ ಎಂದು ಹಲವಾರು ಸರ್ಕಾರಗಳು ಘೋಷಿಸುತ್ತಿವೆ. ಪ್ರಚಾರ ಪಡೆಯುತ್ತಿವೆ. ಆದರೆ, ಈ ವೃದ್ದೆ ತಮ್ಮ ಮಾಸಿಕ ವೃದ್ದಾಪ್ಯವೇತನಕ್ಕಾಗಿ ಕಚೇರಿ ಬಾಗಿಲಿಗೆ ತಾವೇ ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

Advertisements

ಪಿಂಚಣಿ ಬೇಕೆಂದರೆ ಕಚೇರಿಗೆ ಬರಬೇಕೆಂದು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ಹೇಳಿದ್ದರೆಂದು ಆರೋಪಿಸಲಾಗಿದೆ. ಕಚೇರಿಗೂ-ಮನೆಗೂ ತೆವಳಿಕೊಂಡೇ ಓಡಾಡುತ್ತಿರುವುದರಿಂದ ಆಕೆಯ ಕೈಗಳು ಮತ್ತು ಕಾಲುಗಳಲ್ಲಿ ‘ಬೊಬ್ಬೆ’ (ಗುಳ್ಳೆ) ಎದ್ದಿವೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ, “ಮಹಿಳೆಯ ಸಂಕಷ್ಟದ ಪರಿಸ್ಥಿತಿ ಬಗ್ಗೆ ನಮಗೆ ತಿಳಿದಿರಲಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಮುಂದಿನ ತಿಂಗಳಿನಿಂದ ಆಕೆಯ ಮನೆಗೆ ಸೇವೆಗಳನ್ನು ಒದಗಿಸುತ್ತೇವೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X