ಏಳು ರಾಜ್ಯಗಳಾದ್ಯಂತ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಬುಧವಾರ ಪ್ರಾರಂಭವಾಗಿದೆ. ಏಪ್ರಿಲ್-ಜೂನ್ನಲ್ಲಿ ನಡೆದ ಲೋಕಸಭೆ ಚುನಾವಣೆಯ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.
ಬಿಹಾರದ ರುಪೌಲಿ, ಪಶ್ಚಿಮ ಬಂಗಾಳದ ರಾಯ್ಗಂಜ್, ರಣಘಾಟ್ ದಕ್ಷಿಣ, ಬಾಗ್ದಾ ಮತ್ತು ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಂಡಿ, ಮಧ್ಯಪ್ರದೇಶದ ಅಮರವಾರ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್, ಪಂಜಾಬ್ನ ಜಲಂಧರ್ ಪಶ್ಚಿಮ, ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್ಪುರ ಮತ್ತು ನಲಗಢದಲ್ಲಿ ಚುನಾವಣೆ ನಡೆಯುತ್ತಿದೆ.
ಬೆಳಗ್ಗೆ 9 ಗಂಟೆಯವರೆಗೆ ರುಪೌಲಿಯಲ್ಲಿ ಶೇ.9.23, ರಾಯಗಂಜ್ನಲ್ಲಿ ಶೇ.10.01, ರಣಘಾಟ್ ದಕ್ಷಿಣದಲ್ಲಿ ಶೇ.11.58, ಬಾಗ್ದಾದಲ್ಲಿ ಶೇ.10.61, ಮಾಣಿಕ್ತಾಲಾದಲ್ಲಿ ಶೇ.9.01, ವಿಕ್ರವಾಂಡಿಯಲ್ಲಿ ಶೇ.12.94, ಅಮರವಾರದಲ್ಲಿ ಶೇ.16.90, ಬದರಿನಾಥದಲ್ಲಿ ಶೇ.6.50, ಮಂಗಳೌರ್ನಲ್ಲಿ ಶೇ.8.58, ಜಲಂಧರ್ ಪಶ್ಚಿಮದಲ್ಲಿ ಶೇ.10.30, ಡೆಹ್ರಾದಲ್ಲಿ ಶೇ.15.70, ಹಮೀರ್ಪುರದಲ್ಲಿ ಶೇ.15.71 ಮತ್ತು ನಲಗಢದಲ್ಲಿ ಶೇ.16.48 ಮತದಾನವಾಗಿದೆ.
ಇದನ್ನು ಓದಿದ್ದೀರಾ? ಉಪಚುನಾವಣೆ | ಕುಟುಂಬದ ಯಾರೂ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ: ಡಿಕೆ ಶಿವಕುಮಾರ್
ಉತ್ತರಾಖಂಡದಲ್ಲಿ ಮತದಾನದ ವೇಳೆ ಘರ್ಷಣೆ
ಉತ್ತರಾಖಂಡದ ಮಂಗಳೌರ್ನಲ್ಲಿ ಮತದಾನದ ನಡುವೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಂಗಳೌರ್ನ ಕಾಂಗ್ರೆಸ್ ಅಭ್ಯರ್ಥಿ ಖಾಜಿ ನಿಜಾಮುದ್ದೀನ್, “ದುಷ್ಕರ್ಮಿಗಳು ಬಹಿರಂಗವಾಗಿ ಗುಂಡು ಹಾರಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ಆಂಬ್ಯುಲೆನ್ಸ್ ಅಥವಾ ಯಾವುದೇ ವ್ಯವಸ್ಥೆ ಇರಲಿಲ್ಲ” ಎಂದು ಹೇಳಿದರು.
VIDEO | Assembly bypoll: A clash broke out between two groups in Uttarakhand’s Manglaur.
“Miscreants have been openly firing. This is the murder of Democracy. There is also news of someone being injured. There was no ambulance or any other measures taken to take the injured to… pic.twitter.com/xAU3Qu2tGL
— Press Trust of India (@PTI_News) July 10, 2024
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಸ್ವಪನ್ ಕಿಶೋರ್ ಸಿಂಗ್, “ಇಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ. ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿವಾದವೊಂದರ ಬಗ್ಗೆ ನಮಗೆ ಮಾಹಿತಿ ಬಂದಿದೆ. ಅದಕ್ಕಾಗಿಯೇ ನಾವು ಇಲ್ಲಿದ್ದೇವೆ. ಗುಂಡು ಹಾರಿಸಿರುವ ವಿಚಾರ ಇನ್ನೂ ದೃಢಪಟ್ಟಿಲ್ಲ” ಎಂದು ಹೇಳಿದರು.
ಹಾಲಿ ಶಾಸಕರ ನಿಧನ ಮತ್ತು ವಿವಿಧ ಪಕ್ಷಗಳಿಗೆ ರಾಜೀನಾಮೆ ನೀಡಿದ ಕಾರಣ ತೆರವಾದ ಸ್ಥಾನಗಳಲ್ಲಿ ಉಪಚುನಾವಣೆ ನಡೆಸಲಾಗುತ್ತಿದೆ. ಜುಲೈ 13ರಂದು ಮತ ಎಣಿಕೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸ್ಪರ್ಧೆ ನೀಡಿದ ಇಂಡಿಯಾ ಒಕ್ಕೂಟ ಉಪಚುನಾವಣೆಯಲ್ಲಿಯೂ ಅಧಿಕ ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಿದೆ.
VIDEO | Assembly By-poll: A clash between two groups was reported from Uttarakhand’s Manglaur. Here’s what SP Rural Swapan Kishore Singh said.
“The situation is normal here. The voting is happening peacefully. Enough police force has been deployed. We received information about… pic.twitter.com/kv0ys4Erqu
— Press Trust of India (@PTI_News) July 10, 2024