ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ‘ದೆಹಲಿ ಚಲೋ’ ಜಾಥಾ ನಡೆಸಲು ಹೊರಟಿರುವ ರೈತರನ್ನು ಮತ್ತೆ ತಡೆಯಲಾಗಿದೆ. ರೈತರ ಮೇಲೆ ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 101 ರೈತರುಗಳು ದೆಹಲಿಗೆ ಶಂಭು ಗಡಿಯಿಂದ ಜಾಥಾ ಹೊರಟ್ಟಿದ್ದರು. ಎಂಎಸ್ಪಿಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಜಾಥಾ ಹೊರಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಹಾವೇರಿ | ಎಂಟನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
VIDEO | Police use water cannons to disperse protesting farmers. Visuals from #ShambhuBorder. A 'jatha' of 101 farmers has resumed their foot march to Delhi at 12 noon to press the Centre for various demands including a legal guarantee for minimum support price.
— Press Trust of India (@PTI_News) December 14, 2024
(Full video… pic.twitter.com/yAvH9XOYf6
ಈ ಹಿಂದೆಯೂ ರೈತರು ಜಾಥಾ ಹೊರಟಾಗ ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದ ಪೊಲೀಸರು ಇಂದು ಮತ್ತೆ ತಮ್ಮ ಬಲ ಪ್ರಯೋಗ ಮಾಡಿ ರೈತರನ್ನು ತಡೆದಿದ್ದಾರೆ.
ಕಳೆದ ಭಾನುವಾರ ದೆಹಲಿ ಚಲೋ ಜಾಥಾ ಹೊರಟ ರೈತರನ್ನು ತಡೆದ ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದರು. ಅದಕ್ಕೂ ಮುನ್ನ ಬ್ಯಾರಿಕೇಡ್ ಹಾಕಿ ರೈತರನ್ನು ತಡೆದ ಪೊಲೀಸರು ಗುರುತಿನ ಚೀಟಿ ತೋರಿಸುವಂತೆ ಹೇಳಿದ್ದರು. ಹಾಗೆಯೇ 101 ಜನರಿಗೆ ಮಾತ್ರ ದೆಹಲಿ ಚಲೋ ನಡೆಸಲು ಅವಕಾಶವಿದೆ ಆದರೆ ಅವಕಾಶ ಪಡೆದವರು ಮಾತ್ರವೇ ದೆಹಲಿ ಚಲೋದಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಗುರುತಿನ ಚೀಟಿ ಕೇಳುತ್ತಿದ್ದೇವೆ ಎಂದು ಹೇಳಿದ್ದರು.
