ಸ್ಟೆಥಸ್ಕೋಪ್ ಬಿಟ್ಟು ರಾಜಕಾರಣಕ್ಕೆ: ತೆಲಂಗಾಣ ವಿಧಾನಸಭೆಗೆ ಆಯ್ಕೆಯಾದ 15 ವೈದ್ಯರು

Date:

Advertisements

ಸ್ಟೆಥಸ್ಕೋಪ್ ಹಿಡಿದು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೀಗ ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಸಲುವಾಗಿ ವಿಧಾನಸಭೆಯ ಮೆಟ್ಟಿಲು ತುಳಿದಿದ್ದಾರೆ. ಭಾರಿ ಕುತೂಹಲಕಾರಿ ವಿದ್ಯಮಾನದಲ್ಲಿ ತೆಲಂಗಾಣ ಚುನಾವಣೆಯಲ್ಲಿ 15 ವೈದ್ಯರು ಗೆಲುವು ಗಳಿಸಿದ್ದು, ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ಜಯಗಳಿಸಿರುವ 15 ವೈದ್ಯರಲ್ಲಿ 11 ಮಂದಿ ಕಾಂಗ್ರೆಸ್, ಬಿಆರ್‌ಎಸ್‌ 3 ಹಾಗೂ ಬಿಜೆಪಿಯಿಂದ ಒಬ್ಬರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸಿನಿಂದ ನಿಜಾಮಾಬಾದ್ ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿರುವ ಡಾ ಆರ್ ಭೂಪತಿ ರೆಡ್ಡಿ, ಡಾ. ರಾಮ್ ಚಂದರ್ ನಾಯ್ಕ್ (ಡೋರ್ನಕಲ್), ಡಾ ವಂಶಿ ಕೃಷ್ಣ (ಅಚಂಪೇಟೆ), ಡಾ ಮುರಳಿ ನಾಯ್ಕ್ (ಮಹಬೂಬಾಬಾದ್), ಡಾ ಕೆ ಸತ್ಯ ನಾರಾಯಣ (ಮನಕೊಂಡೂರು) ಕ್ಷೇತ್ರಗಳಿಂದ ತೆಲಂಗಾಣ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಚೆನ್ನೈ ನಂತರ ಆಂಧ್ರಕ್ಕೆ ಅಪ್ಪಳಿಸಿದ ಮಿಚಾಂಗ್ ಚಂಡಮಾರುತ

ನಾರಾಯಣ ಪೇಟೆಯಿಂದ ಡಾ. ಪರ್ಣಿಕಾ ರೆಡ್ಡಿ, ನಾರಾಯಣಖೇಡ್‌ನಿಂದ ಮಕ್ಕಳ ತಜ್ಞ ಡಾ.ಪಿ. ಸಂಜೀವ ರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಮೇಡಕ್‌ನಿಂದ ಡಾ ಮೈನಂಪಲ್ಲಿ ರೋಹಿತ್, ಚೆನ್ನೂರು ಕ್ಷೇತ್ರದಿಂದ ವಿವೇಕ್ ವೆಂಕಟಸ್ವಾಮಿ, ಸತ್ತುಪಲ್ಲಿಯಿಂದ ಎಂ ರಾಗಮಯಿ, ನಾಗರ್ಕರ್ನೂಲ್‌ನಿಂದ ಡಾ ಕುಚುಕುಲ್ಲಾ ರಾಜೇಶ್ ರೆಡ್ಡಿ ವಿಧಾನಸಭೆ ಪ್ರವೇಶಿಸಿದ್ದು ಇವರೆಲ್ಲರೂ ಹಸ್ತದ ಗುರುತಿನಿಂದ ಜಯದ ನಗೆ ಬೀರಿದ್ದಾರೆ.

ಇವರ ಜೊತೆ ಭದ್ರಾಚಲಂ ಕ್ಷೇತ್ರದಿಂದ ಡಾ.ತೆಲ್ಲಂ ವೆಂಕಟ ರಾವ್, ಜಗತಿ ಕ್ಷೇತ್ರದಿಂದ ಸಂಜಯ್ ಕುಮಾರ್, ಕೊರಟ್ವಲಾದಿಂದ ಕಲ್ವಾಕುಂಟ ಸಂಜಯ್ ಬಿಆರ್‌ಎಸ್‌ನಿಂದ ಗೆಲುವು ಸಾಧಿಸಿದರೆ, ಸಿರ್ಪುರ ಕ್ಷೇತ್ರದಿಂದ ಡಾ ಪಾಲ್ವಾಯಿ ಹರೀಶ್ ಬಾಬು ಬಿಜೆಪಿಯಿಂದ ಜಯಗಳಿಸಿದ್ದಾರೆ.

ನೂತನ ಶಾಸಕ ಕಂ ವೈದ್ಯರಲ್ಲಿ ಒಪಿಡಿ, ದಂತ ಚಿಕಿತ್ಸಕ, ಮೂಳೆ ವಿಭಾಗ, ಶಸ್ತ್ರ ಚಿಕಿತ್ಸಕ, ನೇತ್ರ ವಿಭಾಗ ಸೇರಿದಂತೆ ಎಲ್ಲ ವಿಭಾಗದವರು ಸೇರಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X