ಯುಪಿಯ ಈ ಗ್ರಾಮದಲ್ಲಿ ನಡೆಯಲ್ಲ ದಸರಾ; ಇಲ್ಲಿ ರಾವಣನಿಗಾಗಿ ನಡೆಯುತ್ತದೆ ಪ್ರಾರ್ಥನೆ

Date:

Advertisements

ಇಡೀ ದೇಶದಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ದಸರಾ ಆರಚಣೆ ನಡೆಯುತ್ತಿದೆ. ಆದರೆ, ಭಾರತದ ಈ ಒಂದು ಗ್ರಾಮದಲ್ಲಿ ದಸರಾ ಸಂಭ್ರಮವಿಲ್ಲ. ಈ ಗ್ರಾಮದ ಜನರು ದಸರಾ ಆಚರಿಸುವುದೇ ಇಲ್ಲ. ಉತ್ತರ ಪ್ರದೇಶದ ಬಿಸ್ರಖ್‌ ಗ್ರಾಮದಲ್ಲಿ ವಿಜಯ ದಶಮಿಯನ್ನು ಸಂಭ್ರಮಿಸುವುದಿಲ್ಲ. ಬದಲಾಗಿ ರಾವಣನ ಸಂಹಾರಕ್ಕಾಗಿ ಅವರು ದುಃಖಿಸುತ್ತಾರೆ. ಸಂತಾಪ ವ್ಯಕ್ತಪಡಿಸುತ್ತಾರೆ.

ರಾವಣ ಬಿಸ್ರಖ್ ಗ್ರಾಮದಲ್ಲಿಯೇ ಜನಿಸಿದ್ದರೆಂದು ಗ್ರಾಮದ ಜನರು ನಂಬಿಸಿದ್ದಾರೆ. ತಮ್ಮನ್ನು ತಾವು ರಾವಣನ ಅಂಶಸ್ಥು ಎಂದು ಪರಿಗಣಿಸುತ್ತಾರೆ. ಹೀಗಾಗಿ, ರಾವಣ, ಕುಂಭಕರ್ಣ ಹಾಗೂ ರಾವಣ ಪುತ್ರ ಮೇಘನಾಥನ ಪ್ರತಿಕೃತಿಯನ್ನು ಸುಡುವುದನ್ನು ಈ ಗ್ರಾಮದ ಜನರು ವಿರೋಧಿಸುತ್ತಾರೆ. ರಾವಣನನ್ನು ಪ್ರಾರ್ಥಿಸುತ್ತಾರೆ.

ರಾಮಾಯಣದಲ್ಲಿ ಹೇಳಲಾಗಿರುವಂತೆ ರಾವಣ ಕೆಟ್ಟ ವ್ಯಕ್ತಿಯಲ್ಲ. ಆತ ಶಿವನ ಪರಮ ಭಕ್ತನಾಗಿದ್ದರು. ತನ್ನ ಜ್ಞಾನದಿಂದಲೇ ಶಿವನನ್ನು ಒಲಿಸಿಕೊಂಡಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ ರಾವಣ ಮಂದಿರವೂ ಇದ್ದು, ನಿತ್ಯ ಪೂಜೆ ಸಲ್ಲಿಸುತ್ತಾರೆ.

Advertisements

ಗ್ರಾಮದಲ್ಲಿರುವ ದೇವಾಲಯದಲ್ಲಿ ರಾವಣ ಮತ್ತು ಆತನ ತಂದೆ ವಿಶ್ರವಸ್ ಋಷಿ ಪೂಜಿಸುತ್ತಿದ್ದ ಶಿವಲಿಂಗವನ್ನೇ ಇಂದಿಗೂ ಪೂಜಿಸಲಾಗುತ್ತಿದೆ ಎಂದು ಗ್ರಾಮದ ಜನರು ಹೇಳುತ್ತಾರೆ. ಅಲ್ಲದೆ, ರಾವಣನಿಗೆ ಹೊಸ ದೇವಾಲಯ ಕಟ್ಟುವುದಕ್ಕಾಗಿ ಹಣ ಸಂಗ್ರಹವನ್ನೂ ಮಾಡುತ್ತಿದ್ದಾರೆ.

ಗಮನಾರ್ಹವಾಗಿ ಭಾರತದಲ್ಲಿ ಸುಮಾರು 5 ರಾವಣ ದೇವಾಲಯಗಳಿವೆ. ಉತ್ತರ ಪ್ರದೇಶದ ಬಿಸ್ರಖ್ ಗ್ರಾಮ ಮತ್ತು ಕಾನ್ಪುರ, ಮಧ್ಯಪ್ರದೇಶದ ವಿದಿಶಾ, ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಸಂಗೋಲಾ ಗ್ರಾಮ ಹಾಗೂ ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ರಾವಣ ದೇವಾಲಯಗಳಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X