ಅಡುಗೆ ಎಣ್ಣೆ ಬೆಲೆ ದಿಢೀರ್‌ ಹೆಚ್ಚಳ: ಗ್ರಾಹಕರ ಜೇಬಿಗೆ ಕತ್ತರಿ

Date:

Advertisements

ಸದ್ದಿಲ್ಲದೆ ಅಡುಗೆ ಎಣ್ಣೆ ಬೆಲೆ ದಿಢೀೕರ್‌ ಏರಿಕೆ ಕಂಡಿರುವುದು ಹಬ್ಬದ ಬಜೆಟ್‌ ಏರು ಪೇರಾಗುವಂತೆ ಮಾಡುತ್ತಿದೆ. ತಾಳೆ(ಪಾಮ್‌) ಎಣ್ಣೆ ಬೆಲೆ ಒಮ್ಮೆಲೆ 130 ರೂ. ಆಸುಪಾಸು ಏರಿಕೆ ಕಂಡಿರುವುದು ಗ್ರಾಹಕರ ಜೇಬು ಬಿಸಿಯಾಗುವಂತೆ ಮಾಡಿದೆ.

ಕಳೆದ ತಿಂಗಳು ಮಧ್ಯಭಾಗದವರೆಗೆ ಅಡುಗೆ ಎಣ್ಣೆ ಅದರಲ್ಲೂ ತಾಳೆ ಎಣ್ಣೆ ಬೆಲೆ ಸೆ.10ರ ವರೆಗೆ 100 ರೂ. ಒಳಗಿತ್ತು. ಹೋಲ್‌ಸೇಲ್‌ನಲ್ಲಿ 90 ರೂ. ಮಾರಾಟ ಕಂಡಿದ್ದರೆ, ರಿಟೇಲ್‌ ಆಗಿ 95 ರೂ. ಮಾರಾಟವಾಗುತ್ತಿತ್ತು. ಇದೀಗ ಒಂದು ತಿಂಗಳ ಅಂತರದಲ್ಲಿ ಸುಮಾರು ಶೇ.40ರಷ್ಟು ಹೆಚ್ಚಳ ಕಂಡಿದೆ. ಇದರಿಂದ ಸದ್ಯ ಮಾರುಕಟ್ಟೆಯಲ್ಲಿ 130ರಿಂದ 135 ರೂ. ಪ್ರತಿ ಲೀಟರ್‌ ಮಾರಾಟ ಕಾಣುತ್ತಿದೆ.

ಪಾಮ್‌ ಎಣ್ಣೆ ಜತೆ ಸೂರ್ಯಕಾಂತಿ ಎಣ್ಣೆ ಬೆಲೆಯೂ ಹೆಚ್ಚಳ ಕಂಡಿದೆ. ಸೆ.10ರವರೆಗೆ 110ರಿಂದ 115 ರೂ. ಪ್ರತಿ ಲೀಟರ್‌ಗೆ ದರ ಇತ್ತು. ಇದೀಗ ಬ್ರ್ಯಾಂಡೆಡ್‌ ಎಣ್ಣೆ ಬೆಲೆ 140 ರೂ. ದಾಟಿದೆ. ಕೆಲವು ಬ್ರ್ಯಾಂಡ್‌ ಎಣ್ಣೆಗಳ ದರ 150 ರೂ. ಮುಟ್ಟಿದೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ

ಕಳೆದ ತಿಂಗಳು ಕೇಂದ್ರ ಸರಕಾರ ಪಾಮ್‌ ಹಾಗೂ ಸೂರ್ಯಕಾಂತಿ ಎಣ್ಣೆ ಆಮದು ಮೇಲೆ ಸುಂಕ ಹೆಚ್ಚಳ ಮಾಡಿತ್ತು. ಅದು ನೇರವಾಗಿ ಪ್ರಭಾವ ಬೀರಿದ್ದು ಶೇ.20ರಷ್ಟು ದರ ಹೆಚ್ಚಳ ಕಂಡಿತ್ತು. ಇನ್ನೂ ಹಬ್ಬದ ಸೀಸನ್‌ ಆಗಿದ್ದರಿಂದ ಇನ್ನುಳಿದ ಶೇ.20ರಷ್ಟು ಬೆಲೆ ಹೆಚ್ಚಳ ಕಂಡಿದೆ ಎಂದು ಎಣ್ಣೆ ವ್ಯಾಪಾರಿಗಳು ಹೇಳುತ್ತಿದ್ದಾರೆ. ಪಾಮ್‌ ಎಣ್ಣೆ ದೇಶದಲ್ಲಿಉತ್ಪಾದನೆಗಿಂತ ಆಮದಿನ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ಇದರಿಂದ ಸುಂಕ ಹೆಚ್ಚಳ ನೇರವಾಗಿ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.

ಮುಖ್ಯವಾಗಿ ನವರಾತ್ರಿ ವೇಳೆ ಉತ್ತರ ಕರ್ನಾಟಕದಲ್ಲಿಎಣ್ಣೆ ಬಳಕೆ ಹೆಚ್ಚಳ ಆಗುತ್ತದೆ. ಪ್ರತಿ ಮನೆಗಳಲ್ಲೂ9 ದಿನ ಘಟ ಸ್ಥಾಪನೆ ಮಾಡಲಾಗುತ್ತದೆ. ಈ ವೇಳೆ ನಿರಂತರ ದೇವಿ ಹೆಸರಿನಲ್ಲಿಜ್ಯೋತಿ ಪ್ರಜ್ವಲನೆ ಮಾಡಲಾಗುತ್ತದೆ. ಇದರಿಂದ ಪ್ರತಿ ಬಾರಿ ಹಬ್ಬದ ವೇಳೆ ಬೆಲೆ ತುಸು ಹೆಚ್ಚಳ ಕಾಣುತ್ತಿತ್ತು. ಆದರೆ, ಈ ಬಾರಿ ಕೇಂದ್ರದ ಆಮದು ಸುಂಕ ಹೆಚ್ಚಳ ಹಿನ್ನೆಲೆ ಒಂದು ಬಾರಿಗೆ ಶೇ.30ರಿಂದ 40 ರಷ್ಟು ಹೆಚ್ಚಳ ಕಾಣುವಂತಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X