ಸುಪ್ರೀಂ ಕೋರ್ಟ್‌ ಆವರಣದಲ್ಲಿ ಇವಿಎಂ ಮತ ಮರುಎಣಿಕೆ; ಸೋತಿದ್ದ ಅಭ್ಯರ್ಥಿ ಗೆಲುವು

Date:

Advertisements

ಚುನಾವಣಾ ಇತಿಹಾಸದಲ್ಲಿ ಅಚ್ಚರಿಯ ಘಟನೆಯೊಂದು ಗುರುವಾರ ನಡೆದಿದೆ. ವಿದ್ಯುನ್ಮಾನ ಮತಯಂತ್ರ (ಇವಿಎಂ) ಮೂಲಕ ಚಲಾಯಿಸಲಾಗಿದ್ದ ಮತಗಳನ್ನು ಸುಪ್ರೀಂ ಕೋರ್ಟ್‌ ಆವರಣದಲ್ಲಿಯೇ ಮರು ಎಣಿಕೆ ನಡೆಸಲಾಗಿದೆ. ಈ ವೇಳೆ, ಹಿಂದಿನ ಫಲಿತಾಂಶದಲ್ಲಿ ಸೋತಿದ್ದಾರೆಂದು ಘೋಷಿಸಲಾಗಿದ್ದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇದು, ಚುನಾವಣಾ ಪ್ರಕ್ರಿಯೆಯ ಬಗ್ಗೆ ಭಾರೀ ಕಳವಳ ಮತ್ತು ಆತಂಕ ಹುಟ್ಟುಹಾಕಿದೆ.

ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲುಖು ಗ್ರಾಮ ಪಂಚಾಯತಿಗೆ 2022ರ ನವೆಂಬರ್ 2ರಂದು ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೋಹಿತ್ ಕುಮಾರ್ ಎಂಬವರು ತಮ್ಮ ಪ್ರತಿಸ್ಪರ್ಧಿ ಕುಲದೀಪ್ ಸಿಂಗ್‌ ವಿರುದ್ಧ ಸೋತಿದ್ದಾರೆ ಎಂದು ಫಲಿತಾಂಶದಲ್ಲಿ ಘೋಷಿಸಲಾಗಿತ್ತು.

ಆದರೆ, ಈ ಫಲಿತಾಂಶವನ್ನು ಒಪ್ಪಿಕೊಳ್ಳದೆ, ಅನುಮಾನ ವ್ಯಕ್ತಪಡಿಸಿದ್ದ ಮೋಹಿತ್ ಕುಮಾರ್, ಸ್ಥಳೀಯ ಚುನಾವಣಾ ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ನ್ಯಾಯಮಂಡಣಿಯು ಕೇವಲ ಒಂದು ಬೂತ್‌ (ನಂ.69) ಮತಗಳ ಮರುಎಣಿಕೆಗೆ ಸೂಚಿಸಿತ್ತು. ಆದರೆ, ಆ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಬಳಿಕ, ಮೋಹಿತ್ ಕುಮಾರ್ ಅವರು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದರು.

Advertisements

ಅವರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. “ಬುವಾನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಬೂತ್‌ಗಳ ಇವಿಎಂ ಮತಗಳನ್ನು ಸುಪ್ರೀಂ ಕೋರ್ಟ್‌ ಆವರಣದಲ್ಲಿ, ನ್ಯಾಯಾಲಯದ ರಿಜಿಸ್ಟಾರ್‌ ಕಾವೇರಿ ಅವರ ಉಸ್ತುವಾರಿಯಲ್ಲಿ ಮರುಎಣಿಕೆ ನಡೆಸಬೇಕು. ಅದನ್ನು ವಿಡಿಯೋ ಚಿತ್ರೀಕರಣ ಮಾಡಬೇಕು” ಎಂದು ಪೀಠವು ಆದೇಶಿಸಿತ್ತು.

ಅಂತಿಮವಾಗಿ, ಗುರುವಾರ, ಮತಗಳ ಮರುಎಣಿಕೆ ನಡೆದಿದೆ. ಚಲಾವಣೆಯಾಗಿದ್ದ ಒಟ್ಟು 3,767 ಮತಗಳಲ್ಲಿ ಈ ಹಿಂದೆ ಸೋತಿದ್ದಾರೆಂದು ಘೋಷಿಸಿಲಾಗಿದ್ದ ಮೋಹಿತ್ ಕುಮಾರ್ ಅವರು 1,051 ಮತಗಳು ಪಡೆದಿದ್ದಾರೆ. ಗೆದ್ದಿದ್ದಾರೆಂದು ಘೋಷಿಸಿ, ಪಂಚಾಯತಿ ಸದಸ್ಯತ್ವ ನೀಡಲಾಗಿದ್ದ ಕುಲದೀಪ್ ಸಿಂಗ್‌ 1,000 ಮತಗಳನ್ನು ಪಡೆದಿದ್ದಾರೆ.

ಹೀಗಾಗಿ, 2022ರಲ್ಲಿ ಪರಾಜಿತರೆಂದು ಘೋಷಿಸಿದ್ದ ಮೋಹಿತ್ ಅವರು 51 ಮತಗಳ ಅಂತರದಲ್ಲಿ ಕುಲದೀಪ್ ಸಿಂಗ್‌ ವಿರುದ್ಧ ಗೆದ್ದಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಈ ಲೇಖನ ಓದಿದ್ದೀರಾ?: ಕ್ಯೂಬಾ ಕ್ರಾಂತಿಯ ಕಿಡಿ, ಬಂಡವಾಳಿಗರ ದುಸ್ವಪ್ನ ಫಿಡೆಲ್ ಕ್ಯಾಸ್ಟ್ರೋ

ಮರುಎಣಿಕೆಯ ಮರದಿಯನ್ನು ಗಮನಿಸಿದ ನ್ಯಾಯಾಲಯವು, ಮೋಹಿತ್ ಕುಮಾರ್ ಅವರನ್ನೇ ಬುವಾನಾ ಲಖು ಗ್ರಾಮ ಪಂಚಾಯಿತಿಯ ನೂತನ ಸರಪಂಚ್ (ಸದಸ್ಯ) ಎಂದು ಘೋಷಿಸಿದೆ. ಎರಡು ದಿನಗಳೊಳಗೆ ಅಧಿಕೃತ ಅಧಿಸೂಚನೆ ಹೊರಡಿಸಿ, ಮೋಹಿತ್ ಕುಮಾರ್ ಅವರಿಗೆ ತಕ್ಷಣವೇ ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಪಾಣಿಪತ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X