ಸತ್ಯಶೋಧ | 6,000 ವರ್ಷಗಳಷ್ಟು ಹಳೆಯ ಶಿವಲಿಂಗ ಪತ್ತೆ?

Date:

Advertisements

ಸುಮಾರು 6,000 ವರ್ಷಗಳಷ್ಟು ಹಳೆಯದಾದ ಶಿವಲಿಂಗವೊಂದು ದಕ್ಷಿಣ ಆಫ್ರಿಕಾದ ಸುದ್ವಾರ ಎಂಬ ಗುಹೆಯಲ್ಲಿ ಪತ್ತೆಯಾಗಿದೆ ಎಂಬ ಹೇಳಿಕೆಯ ಜೊತೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಶಿವಲಿಂಗವೊಂದರ ಚಿತ್ರವಿದ್ದು, ಹಲವರು ಹಂಚಿಕೊಳ್ಳುತ್ತಿದ್ದಾರೆ.

ವಿಡಿಯೋದಲ್ಲಿ ಶಿವಲಿಂಗದ ಚಿತ್ರದೊಂದಿದೆ ಇಂಗ್ಲಿಷ್‌ನಲ್ಲಿ, “ಹಿಂದು ಧಾರ್ಮಿಕ ಸಂಕೇತಗಳನ್ನು ನಾಶಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಆದರೂ, ಧಾರ್ಮಿಕ ಪುರಾವೆಗಳು ಹೊರಬರುತ್ತಲೇ ಇವೆ. ದಕ್ಷಿಣ ಆಫ್ರಿಕಾದ ಸುದ್ವಾರ ಗುಹೆಯಲ್ಲಿ ಸುಮಾರು 6 ಸಾವಿರ ವರ್ಷಗಳಷ್ಟು ಹಳೆಯದಾದ ಶಿವಲಿಂಗ ಪತ್ತೆಯಾಗಿದೆ” ಎಂದು ಬರೆಯಲಾಗಿದೆ.

ಅದನ್ನು ಸತ್ಯವೆಂದು ನಂಬಿರುವ ಹಲವರು ಆ ವಿಡಿಯೋವನ್ನು ಫೇಸ್​ಬುಕ್, ವಾಟ್ಸಾಪ್‌ ಹಾಗೂ ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Advertisements

ಆದರೆ, ಸತ್ಯವೇನು? ಪರಿಶೀಲಿಸೋಣ;

ವೈರಲ್ ಆದ ವಿಡಿಯೋ ಬಗ್ಗೆ ಟಿವಿ9 ಸತ್ಯಶೋಧ ನಡೆಸಿದೆ. ದಕ್ಷಿಣ ಆಫ್ರಿಕಾದ ಇಂಪುಮಲಂಗಾ ಪ್ರಾಂತ್ಯದಲ್ಲಿ ಸುದ್ವಾರ ಎಂಬ ಗುಹೆಗಳು ಇವೆ. ಆದರೆ, ಸುದ್ವಾರ ಗುಹೆಯೂ ಸೇರಿದಂತೆ ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಶಿವಲಿಂಗವೂ ಪತ್ತೆಯಾಗಿಲ್ಲ ಎಂದು ಕಂಡುಹಿಡಿದಿದೆ.

ಸುದ್ವಾರ ಗುಹೆಗಳಲ್ಲಿ 6,000 ವರ್ಷಗಳಷ್ಟು ಹಳೆಯ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಪುರಾತತ್ತ್ವಜ್ಞರು ತಿಳಿಸಿದ್ದಾರೆಯೇ, ಅಥವಾ ಪ್ರತಿಕ್ರಿಯಿಸಿದ್ದಾರೆಯೇ ಎಂದು ಹುಡುಕಲಾಗಿದೆ. ಆದರೆ, ಯಾವುದೇ ಪುರಾತತ್ತ್ವಜ್ಞರು ಶಿವಲಿಂಗ ಪತ್ತೆಯಾದ ಬಗ್ಗೆ ಮಾತನಾಡಿಲ್ಲ. ಸುದ್ವಾರದಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಯಾವ ವಿಶ್ವಾಸಾರ್ಹ ಮೂಲಗಳೂ ಸುದ್ದಿ ಪ್ರಕಟಿಸಿಲ್ಲ. ವರದಿ ಮಾಡಿಲ್ಲ.

ಸುದ್ವಾರ ಗುಹೆಗಳಿಂದ ಸುಮಾರು 35-40 ಕಿ.ಮೀ ದೂರದಲ್ಲಿರುವ ನೆಲ್ಸ್‌ಪ್ರೂಟ್ ನೇಚರ್ ರಿಸರ್ವ್ ಪ್ರದೇಶದಲ್ಲಿ ಬಂಡೆಯ ರಚನೆಯನ್ನು ಶಿವಲಿಂಗವೆಂದು ಪರಿಗಣಿಸಲಾಗಿತ್ತು. ಇದನ್ನು, ನೂರಾರು ವರ್ಷಗಳ ಹಿಂದೆ ಆಫ್ರಿಕಾದಲ್ಲಿದ್ದ ಭಾರತೀಯರು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ. ಆದರೆ, 6,000 ವರ್ಷಗಳಷ್ಟು ಹಳೆಯದಾದ ಯಾವುದೇ ಶಿವಲಿಂಗ ಪತ್ತೆಯಾಗಿಲ್ಲ ಎಂಬುದು ಖಚಿತವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X