ಕೂದಲು ಕಳ್ಳಸಾಗಣೆ: ಪ್ರಕರಣದ ವಿಚಾರಣೆಗೆ ನಾಂಪಲ್ಲಿ ನ್ಯಾಯಾಲಯ ಸಮ್ಮತಿ

Date:

Advertisements

ಭಾರತದಿಂದ ಮ್ಯಾನ್ಮಾರ್‌ಗೆ ಮಾನವ ಕೂದಲನ್ನು ಅಕ್ರಮವಾಗಿ ಸಾಗಿಸಿದ್ದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಪ್ರಾಸಿಕ್ಯೂಷನ್‌ ದೂರನ್ನು ತೆಲಂಗಾಣದ ನಾಂಪಲ್ಲಿ ವಿಷೇಶ ನ್ಯಾಯಾಲಯ ಪರಿಗಣನೆಗೆ ತೆಗದುಕೊಂಡಿದೆ.

2022ರಲ್ಲಿ ‘ನಯ್ ಲಾ ಫ್ಯಾಮಿಲಿ ಎಕ್ಸ್‌ಪೋರ್ಟ್ಸ್’ ಮೂಲಕ ಮಿಜೋರಾಂ ನಿವಾಸಿಯೊಬ್ಬ ಸೇರಿದಂತೆ 16 ಮಂದಿ ಆರೋಪಿಗಳು ಕೂಲದನ್ನು ಕಳ್ಳ ಸಾಗಾಣಿಕೆ ಮಾಡಿದ್ದರು ಎಂದು ಇಡಿ ಆರೋಪಿಸಿದೆ. ಇಡಿ ದಾಖಲಿಸಿದ್ದ ದೂರನ್ನು ಇದೀಗ, ನ್ಯಾಯಾಲಯ ಪರಿಗಣಿಸಿದೆ.

ಹೈದರಾಬಾದ್‌ನಲ್ಲಿ ಅಕ್ರಮ ಹಣ ವರ್ಗಾವಣೆ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ, 11,793 ಕೋಟಿ ರೂ. ಮೌಲ್ಯದ ಮಾನವ ಕೂದಲು ಕಳ್ಳಸಾಗಣೆ ದಂಧೆಯನ್ನು ಇಡಿ ಪತ್ತೆಹಚ್ಚಿದೆ ವರದಿಯಾಗಿದೆ.

Advertisements

ಚೀನಾದ ಜನರನ್ನು ಕಾಡುತ್ತಿರುವ ಬೋಳು ಸಮಸ್ಯೆಯ ನಡುವೆ, ಹೈದರಾಬಾದ್‌ನಿಂದ ಕಳ್ಳಸಾಗಣೆ ಮೂಲಕ ಕೂದಲನ್ನು ಚೀನಾಕ್ಕೆ ಸಾಗಿಸಲಾಗಿದೆ. ಹಾಗೆಯೇ ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ವಿಯೆಟ್ನಾಂನಂತಹ ಇತರ ದೇಶಗಳಿಗೆ ಹೈದರಾಬಾದ್ ವಿಮಾನ ನಿಲ್ದಾಣದಿಂದ ಮತ್ತು ಇತರ ಭೂ ಮಾರ್ಗಗಳ ಮೂಲಕ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.

ಕಳ್ಳಸಾಗಣೆದಾರರು ಹವಾಲಾ ಜಾಲಗಳನ್ನು ಬಳಸಿಕೊಂಡು ಸರಕುಗಳ ವಿತ್ತೀಯ ವಹಿವಾಟು ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ನಕಲಿ ದಾಖಲೆಗಳ ಮೂಲಕ ಮಾನವ ಕೂದಲನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ‘ನಯ್ ಲಾ ಫ್ಯಾಮಿಲಿ ಎಕ್ಸ್‌ಪೋರ್ಟ್ಸ್’ ವಿರುದ್ಧ ಹೈದರಾಬಾದ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ 2022ರ ಫೆಬ್ರವರಿಯಲ್ಲಿ ಇಡಿ ತನಿಖೆ ಆರಂಭಿಸಿತ್ತು.

ಚೀನಾದ ಕೂದಲು ಉದುರುವಿಕೆಯ ಸಮಸ್ಯೆ
ಚೀನಾದಲ್ಲಿ 251 ಮಿಲಿಯನ್ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು 2020ರಲ್ಲಿ ವರದಿಯಾಗಿತ್ತು. ಅದರಲ್ಲಿ 88 ಮಿಲಿಯನ್ ಮಹಿಳೆಯರು ಇದ್ದಾರೆ. ಚೀನೀ ವ್ಯಕ್ತಿಗಳಲ್ಲಿ ಕಿರಿಯ ವಯಸ್ಸಿನಲ್ಲೇ ಕೂದಲು ಉದುರುವಿಕೆ ಸಮಸ್ಯೆ ಎದುರಾಗುತ್ತಿದೆ. ಅನೇಕರು, 21 ರಿಂದ 30 ವರ್ಷ ವಯಸ್ಸಿನಲ್ಲಿಯೇ ಈ ಸದಸ್ಯೆಗೆ ತುತ್ತಾಗುತ್ತಿದ್ದಾರೆ. ಹಿಂದಿನ ಪೀಳಿಗೆಗೆ ಹೋಲಿಸಿದರೆ ಗಣನೀಯ ಬದಲಾವಣೆಯಾಗಿದೆ ಎಂದು ಹೇಳಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X