ಮಣಿಪುರ ಜನಾಂಗೀಯ ದ್ವೇಷ: ಜೀರಿ ನದಿಯಲ್ಲಿ ಶವಗಳಾಗಿ ತೇಲಿದ ಮಹಿಳೆ – ಮಕ್ಕಳು

Date:

Advertisements

ಮಣಿಪುರದಲ್ಲಿ ಹಚ್ಚಲಾಗಿರುವ ಜನಾಂಗೀಯ ದ್ವೇಷದ ಬೆಂಕಿ ಧಗಧಗಿಸುತ್ತಲೇ ಇದೆ. ಶುಕ್ರವಾರ ಸಂಜೆ ಜೀರಿ ನದಿಯಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಶವಗಳು ತೇಲಿವೆ.

ಜೀರಿಬಮ್‌ನಲ್ಲಿ ಕಳೆದ ಸೋಮವಾರದಿಂದ ನಾಪತ್ತೆಯಾಗಿರುವ ಒಂದೇ ಕುಟುಂಬದ ಆರು ಮಂದಿ ಮೈಥೇಯಿಗಳ ಪೈಕಿ ಮೂವರ ಶವಗಳಿವು ಎಂದು ನಂಬಲಾಗಿದೆ. ಜೀರಿಬಮ್‌ನ ಬೋರೋಬೆಕ್ರ ಸೀಮೆಯಲ್ಲಿ ಹಿಂಸಾಚಾರದ ನಂತರ ಮೂವರು ಮಹಿಳೆಯರು ಮತ್ತು ಶಿಶುವೊಂದು ಸೇರಿದಂತೆ ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಕಳೆದ ಜೂನ್ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಬೋರೋಬೆಕ್ರ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗಿದ್ದ ಪರಿಹಾರ ಶಿಬಿರದಲ್ಲಿ ಈ ಕುಟುಂಬ ಆಶ್ರಯ ಪಡೆದಿತ್ತು.

ಜೀರಿ ನದಿಯಲ್ಲಿ ತೇಲುತ್ತಿದ್ದ ಈ ಶವಗಳನ್ನು ಅಸ್ಸಾಮ್ ರೈಫಲ್ಸ್ ಸಿಬ್ಬಂದಿ ಹೊರಗೆಳೆದಿದೆ. ಕಳೇಬರಗಳನ್ನು ಕುಟುಂಬ ಇನ್ನೂ ಗುರುತಿಸಬೇಕಿದೆ. ಜೀರಿ ನದಿಯು ಬರಾಕ್ ನದಿಯನ್ನು ಕೂಡುವ ಸಂಗಮ ಸ್ಥಳ ಜೀರಿಮುಖದಲ್ಲಿ ಈ ಶವಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದವರ ಪೈಕಿ ವೃದ್ಧೆ, ಆಕೆಯ ಇಬ್ಬರು ಹೆಣ್ಣುಮಕ್ಕಳು ಹಾಗೂ ಮೂವರು ಮೊಮ್ಮಕ್ಕಳು ಸೇರಿದ್ದಾರೆ. ಸೋಮವಾರ ಬೆಳಗಿನ ಜಾವ ದಾಳಿ ನಡೆಸಿದ ಉಗ್ರಗಾಮಿಗಳು ಎನ್ನಲಾದ ಶಸ್ತ್ರಧಾರಿ ಹ್ಮಾರ್ ಗಂಡಸರ ಗುಂಪೊಂದು ಇವರನ್ನು ಅಪಹರಿಸಿರುವುದಾಗಿ ಮೈತೇಯಿ ಗುಂಪುಗಳು ಆಪಾದಿಸಿವೆ.

Advertisements

ನಿರಾಶ್ರಿತರ ಶಿಬಿರದ ಮೇಲೆ ದಾಳಿ-ಹಿಂಸಾಚಾರದ ನಂತರ ಭದ್ರತಾ ಪಡೆಗಳು 10 ಮಂದಿ ಶಸ್ತ್ರಧಾರಿಗಳನ್ನು ಕೊಂದಿದ್ದವು. ನಿರಾಶ್ರಿತ ಶಿಬಿರ ವಾಸಿಗಳಾಗಿದ್ದ ಇಬ್ಬರು ವಯಸ್ಕ ಮೈತೇಯಿ ಪುರುಷರ ಶವಗಳೂ ಈ ವಾರದ ಆರಂಭದಲ್ಲಿ ಪತ್ತೆಯಾಗಿದ್ದವು. ನಾಪತ್ತೆಯಾದ ಮೈತೇಯಿಗಳ ಶೋಧಕಾರ್ಯಾಚರಣೆ ಜರುಗಿತ್ತು. ಆಪಾದಿತ ಅಪಹರಣದ ಬಗ್ಗೆ ಜೀರಿಬಮ್ ಮತ್ತು ರಾಜ್ಯದ ಮೈತೇಯಿ ಬಹುಳ ಕಣಿವೆಯಲ್ಲಿ ಆಕ್ರೋಶವನ್ನು ಬಡಿದೆಬ್ಬಿಸಿತ್ತು. ಮೈತೇಯಿ ಗುಂಪುಗಳು ಅಪಹೃತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದವು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X