ಬಿಜೆಪಿ ಆಡಳಿತದ ಅದ್ಭುತ: ಸಮರ್ಪಕ ರಸ್ತೆ ಕೊರತೆ; ಬೈಕ್ ಸಂಚಾರಕ್ಕೆ ರೈಲ್ವೇ ಹಳಿಯೇ ಆಧಾರ

Date:

Advertisements

15 ತಿಂಗಳನ್ನು (2018ರ ಡಿಸೆಂಬರ್ – 2020ರ ಮಾರ್ಚ್‌) ಹೊರತುಪಡಿಸಿ ಕಳೆದ 22 ವರ್ಷಗಳಿಂದ ಬಿಜೆಪಿಯೇ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ಜನರ ಬದುಕು ಹೇಳತೀರಲಾಗಿದೆ. ಸರಿಯಾದ ರಸ್ತೆಗಳಿಲ್ಲದೆ ಬೈಕ್‌ ಸವಾರರು ಚಂಬಲ್ ಕಾಲುವೆಯ ಮೇಲೆ ನಿರ್ಮಿಸಲಾದ ರೈಲ್ವೇ ಹಳಿಗಳ ಮೇಲೆ ಕಾಲುವೆಯನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಬೈಕ್‌ ಸವಾರರು ಕಾಲುವೆ ಮೇಲಿರುವ ರೈಲ್ವೇ ಹಳಿಗಳಲ್ಲಿ ತಮ್ಮ ಬೈಕ್‌ಗಳನ್ನು ತಳ್ಳಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ ಚಂಬಲ್ ಕಾಲುವೆಯ ಮೇಲೆ ನ್ಯಾರೋ ಗೇಜ್ ರೈಲ್ವೇ ಹಳಿಗಳನ್ನು ನಿರ್ಮಿಸಲಾಗಿದೆ. ಆದರೆ, ಇದೇ ರೈಲ್ವೇ ಹಳಿಯು ಶಿಯೋಪುರ ಮತ್ತು ಸಲಾಪುರ ನಡುವೆ ಪ್ರಯಾಣಿಸುವ ಹಲವಾರು ಗ್ರಾಮಗಳ ಬೈಕ್‌ ಸವಾರರಿಗೆ ಕಿರಿದಾದ ರಸ್ತೆಯ ರೀತಿಯಲ್ಲಿ ನೆರವಾಗುತ್ತಿದೆ.

ಕಾಲುವೆಯಿಂದ ಕೆಲವು ಕಿ.ಮೀ ದೂರದಲ್ಲಿ ಶಿಯೋಪುರ-ಮಾಧೋಪುರ್ ಹೆದ್ದಾರಿಯಿದೆ. ಆ ಹೆದ್ದಾರಿಯನ್ನು ಹೊರತುಪಡಿಸಿದರೆ ಸಲಾಪುರ ಪ್ರದೇಶದಲ್ಲಿ ಕಾಲುವೆ ಮೇಲೆ ಬೇರಾವುದೇ ರಸ್ತೆ ಅಥವಾ ಸೇತುವೆ ಇಲ್ಲ ಎಂದು ಹೇಳಲಾಗಿದೆ. ಇತ್ತೀಚೆಗೆ, ಹೆದ್ದಾರಿಯಲ್ಲಿ ಸಂಪೂರ್ಣ ಸಂಚಾರ ದಟ್ಟಣೆ ಉಂಟಾಗಿದ್ದರಿಂದ, ಸ್ಥಳೀಯ ಗ್ರಾಮಗಳ ಗ್ರಾಮಸ್ಥರು ಕಾಲುವೆ ದಾಟಲು ರೈಲ್ವೇ ಹಳಿಯನ್ನೇ ಆಶ್ರಯಿಸಿದ್ದಾರೆ.

Advertisements

ವೈರಲ್ ಆಗಿರುವ ವಿಡಿಯೋದಲ್ಲಿ; ದ್ವಿಚಕ್ರ ವಾಹನ ಸವಾರರು ಚಂಬಲ್ ಕಾಲುವೆಯ ಮೇಲಿನ ರೈಲ್ವೆ ಹಳಿಯಲ್ಲಿ ತಮ್ಮ ಬೈಕ್‌ಗಳನ್ನು ನಿಧಾನವಾಗಿ ಚಲಾಯಿಸುತ್ತಿರುವುದು ಕಾಣಿಸುತ್ತದೆ. ರೈಲ್ವೇ ಹಳಿಗಳ ಮೇಲೆ ಕಾಲುವೆ ಕಾಟುವುದು ಅತ್ಯಂತ ಅಪಾಯಕಾರಿಯಾಗಿದೆ. ಯಾವುದೇ ಸುರಕ್ಷತಾ ವ್ಯವಸ್ಥೆ ಹಳಿಗಳ ಬದಿಯಲ್ಲಿಲ್ಲ. ಆದರೂ, ಜನರು ಆ ಹಳಿಗಳ ಮೇಲೆಯೇ ಬೈಕ್ ಚಲಾಯಿಸಿಕೊಂಡು ಕಾಲುವೆ ದಾಟುತಿದ್ದಾರೆ. ಇದು ಅವರ ಬಹುತೇಕ ದೈನಂದಿನ ಪರಿಪಾಠವಾಗಿಹೋಗಿದೆ.

“ಈ ಪ್ರದೇಶದಲ್ಲಿ ಸೂಕ್ತ ರಸ್ತೆಗಳು ಮತ್ತು ಸೇತುವೆಗಳು ಇಲ್ಲದ ಕಾರಣ, ಜನರು ಚಂಬಲ್ ಕಾಲುವೆಯನ್ನು ದಾಟಲು ಈ ರೈಲ್ವೇ ಹಳಿಯನ್ನೇ ಆಶ್ರಯಿಸಿದ್ದಾರೆ” ಎಂದು ಸ್ಥಳೀಯರು ಹೇಳಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದೇ ಬಿಜೆಪಿಯ ಅಮೃತಕಾಲ. ರಸ್ತೆ ಮತ್ತು ಸೇತುವೆಯಂತಹ ಮೂಲ ಸೌಕರ್ಯಗಳನ್ನೇ ಒದಗಿಸದ ಬಿಜೆಪಿ ಸರ್ಕಾರ ‘ಜುಮ್ಲಾ’ ಸುಳ್ಳು ಆಶ್ವಾಸನೆ ನೀಡುತ್ತಲೇ ಅಧಿಕಾರ ನಡೆಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ರೈಲ್ವೇ ಹಳಿಯ ಮೇಲೆ ಬೈಕ್‌ ಚಲಾಯಿಸುವುದು ಕಾನೂನುಬಾಹಿರವಾಗಿದೆ. ಆದರೆ, ರಸ್ತೆಗಳೇ ಇಲ್ಲದೆ ಜನರು ಅಪಾಯಕಾರಿ ಹಳಿಗಳ ಮೇಲೆ ಚಲಿಸುವಂತಾಗಿದೆ. ಆದಾಗ್ಯೂ, ಶಿಯೋಪುರ ಜಿಲ್ಲಾಡಳಿತ ಅಥವಾ ರೈಲ್ವೆ ಇಲಾಖೆ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X