ಮೊಬೈಲ್ ಲೋನ್ ಆ್ಯಪ್ ಸುಳಿ: ಪತ್ನಿಯ ‘ಅಶ್ಲೀಲ’ ಫೋಟೋ ವೈರಲ್; ಪತಿ ಆತ್ಮಹತ್ಯೆ

Date:

Advertisements

ಮೊಬೈಲ್ ಲೋನ್ ಆ್ಯಪ್ ಮೂಲಕ ಪಡೆದುಕೊಂಡ ಎರಡು ಸಾವಿರ ರೂಪಾಯಿ ಮೊತ್ತದ ಸಾಲ, ಪ್ರೀತಿಸಿ ಮದುವೆಯಾಗಿದ್ದ ಯುವ ದಂಪತಿಯ ಪೈಕಿ ಪತಿಯ ಬಲಿ ಪಡೆದಿದೆ. ಆಂಧ್ರಪ್ರದೇಶದಲ್ಲಿ ನಡೆದಿರುವ ದಾರುಣ ಪ್ರಕರಣವಿದು.

21 ವರ್ಷದ ನರೇಂದ್ರ ಮತ್ತು 24 ವರ್ಷ ವಯಸ್ಸಿನ ಅಖಿಲಾ ಮದುವೆಯಾಗಿ ಎರಡು ತಿಂಗಳೂ ಕಳೆದಿಲ್ಲ. ಮದುವೆಗೆ ಮುನ್ನ ಪಡೆದಿದ್ದ 2,000 ರೂಪಾಯಿ ಮೊಬೈಲ್ ಆ್ಯಪ್ ಸಾಲದ ವಸೂಲಿಗಾಗಿ ಲೋನ್ ಏಜೆಂಟರು ನರೇಂದ್ರನ ಹಿಂದೆ ಬಿದ್ದಿದ್ದರು. ನರೇಂದ್ರನ ಪತ್ನಿ ಅಖಿಲಾ ಫೋಟೋ ಸಂಪಾದಿಸಿ, ಅದನ್ನು ನಗ್ನಚಿತ್ರವಾಗಿ ಬದಲಾಯಿಸಿದರು. ಫೋಟೋದ ಕೆಳಗೆ ‘ರೇಟು’ ಅಂತ ಮೊತ್ತವೊಂದನ್ನು ನಮೂದಿಸಿದರು.

ನರೇಂದ್ರನ ಫೋನಿನಲ್ಲಿದ್ದ ಎಲ್ಲ ನಂಬರುಗಳಿಗೂ ಕಳಿಸಿದರು. ಅಖಿಲಾಗೆ ಕರೆಗಳು ಬರತೊಡಗಿದವು. ನಡೆದದ್ದೇನೆಂದು ಆಕೆಗೆ ತಿಳಿಯಿತು. 2,000 ರೂಪಾಯಿ ಸಾಲವನ್ನು ಮರಳಿಸಿದರು. ಆದರೂ ಆಕೆಯ ಫೋಟೋ ಹಂಚುವುದನ್ನು ನಿಲ್ಲಿಸಲಿಲ್ಲ ಏಜೆಂಟರು. ಪತ್ನಿಯನ್ನು ಬಹುವಾಗಿ ಪ್ರೀತಿಸುತ್ತಿದ್ದ ನರೇಂದ್ರ, ಸೂಕ್ಷ್ಮ ಸ್ವಭಾವದವ. ಅಪಮಾನ ತಾಳಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಹಾಯಕ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಖಿಲಾ ಮನೆಗೆ ಧಾವಿಸುವ ವೇಳೆಗೆ ತಡವಾಗಿತ್ತು. ಪೊಲೀಸರು ಲೋನ್ ಆ್ಯಪ್ ಮತ್ತು ಏಜೆಂಟರ ಪತ್ತೆಯಲ್ಲಿ ತೊಡಗಿದ್ದಾರೆ.

Advertisements

ಎರಡು ದಿನಗಳ ಹಿಂದೆಯಷ್ಟೇ ಇಂತಹುದೇ ಸಾಲ (15 ಸಾವಿರ ರೂಪಾಯಿ) ಪಡೆದಿದ್ದ ಆಂಧ್ರದ ಯುವತಿಯೊಬ್ಬಳು ಆತ್ಮಹತ್ಯೆಗೆ ಮುಂದಾಗಿದ್ದಳು. ಶ್ರೀಶೈಲಂ ಜಲಾಶಯಕ್ಕೆ ಧುಮುಕಿದ್ದಳು. ಜಲಾಶಯಕ್ಕೆ ಕಾವಲಿದ್ದ ಪೊಲೀಸರು ಆಕೆಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿ ಕಾಪಾಡಿದ್ದಾರೆ. 15 ಸಾವಿರ ಸಾಲಕ್ಕೆ ಪ್ರತಿಯಾಗಿ 60 ಸಾವಿರ ರೂಪಾಯಿಯನ್ನು ಪಾವತಿಸಿದ್ದರೂ, ಏಜೆಂಟರ ಕಾಟ ನಿಂತಿರಲಿಲ್ಲ. ಆಕೆಯ ಫೋಟೋವನ್ನು ನಗ್ನವಾಗಿಸಿ ವೈರಲ್ ಮಾಡುವ ಬೆದರಿಕೆ ಹಾಕಿದ್ದರು.

ಇದನ್ನು ಓದಿದ್ದೀರಾ? ಗದಗ | ಅಧಿಕಾರಿಗಳ ನಿರ್ಲಕ್ಷ್ಯ: ಉಳ್ಳಾಗಡ್ಡಿ ಕಣವಾಗಿ ಮಾರ್ಪಟ್ಟ ಇಟಗಿ ಬಸ್ ನಿಲ್ದಾಣ!

ಮೊಬೈಲ್ ಆ್ಯಪ್ ಲೋನ್‌ಗಳ ಜಾಲಕ್ಕೆ ಬೀಳದಿರಿ, ಖಾಸಗಿ ಮಾಹಿತಿಯನ್ನು ಅವುಗಳೊಂದಿಗೆ ಹಂಚಿಕೊಳ್ಳಬೇಡಿ. ಬೆದರಿಕೆ ಬಂದರೆ ಪೊಲೀಸರನ್ನು ಸಂಪರ್ಕಿಸಿ ಎಂದು ಆಂಧ್ರ ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X