‘ರಸ್ತೆಯಲ್ಲಿ ನಮಾಝ್ ಮಾಡಿದ್ರೆ ಪಾಸ್‌ಪೋರ್ಟ್ ರದ್ದು’

Date:

Advertisements

ರಂಜಾನ್ ಉಪವಾಸ ಅಂತ್ಯಗೊಳ್ಳುವ ಈದ್ ದಿನ ರಸ್ತೆಗಳಲ್ಲಿ ಸಾಮೂಹಿಕ ನಮಾಝ್ ಮಾಡುವಂತಿಲ್ಲ. ಒಂದು ವೇಳೆ, ರಸ್ತೆಗಳಲ್ಲಿ ನಮಾಝ್ ಮಡಿದರೆ, ಅವರ ಪಾಸ್‌ಪೋರ್ಟ್‌ ಮತ್ತು ಪರವಾನಗಿಗಳನ್ನು ರದ್ದು ಮಾಡಲಾಗುತ್ತದೆ. ಮಾತ್ರವಲ್ಲದೆ, ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ಮೀರತ್ ಪೊಲೀಸರು ಹೇಳಿದ್ದಾರೆ.

ಕಳೆದ ವರ್ಷವೂ, ರಂಜಾನ್ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಝ್ ಮಾಡಬಾರದೆಂದು ಪೊಲೀಸರು ಆದೇಶ ಹೊರಡಿಸಿದ್ದರು. ಆದರೆ, ಪಾಸ್‌ಪೋರ್ಟ್‌, ಪರವಾನಗಿ ರದ್ದತಿಯಂತಹ ಬೆದರಿಕೆಗಳನ್ನು ಹಾಕಿರಲಿಲ್ಲ. ಆದರೆ, ಈ ಬಾರಿ, ಪಾಸ್‌ಪೋರ್ಟ್‌, ಪರವಾನಗಿಗಳನ್ನು ರದ್ದು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಪೊಲೀಸರ ಈ ಸೂಚನೆಯನ್ನು ಆಡಳಿತಾರೂಢ ಬಿಜೆಪಿಯ ಮಿತ್ರ ಪಕ್ಷ ‘ರಾಷ್ಟ್ರೀಯ ಲೋಕದಳ’ (ಆರ್‌ಎಲ್‌ಡಿ) ಖಂಡಿಸಿದೆ. ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಸಿಂಗ್ ಚೌಧರಿ, “ರಾಜ್ಯವು 1984ರ ಆರ್ವೆಲ್ ಯುಗದ ಪೊಲೀಸ್ ಗಿರಿಯೆಡೆಗೆ ಹೊರಳುತ್ತಿದೆ! ಲೇಖಕ ಜಾರ್ಜ್ ಆರ್ವೆಲ್‌ ಅವರು ತಮ್ಮ ‘ನೈಂಟೀನ್ ಎಯ್ಟಿ ಫೋರ್’ ಕೃತಿಯಲ್ಲಿನ ಪೊಲೀಸರಿಗೆ ನಿರಂಕುಶಾಧಿಕಾರ ನೀಡುವ ಚಿಂತನೆಗಳ ಬಗ್ಗೆ ವಿವರಿಸಿದ್ದರು. ಅದು ಈಗ ಜಾರಿಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖ್ಯಾ ಕುರಿತು ಅವರು ಉಲ್ಲೇಖಿಸಿದ್ದಾರೆ.

Advertisements

ಪೊಲೀಸರ ಸೂಚನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮೀರತ್ ನಗರ ಎಸ್‌ಪಿ ಆಯುಷ್ ವಿಕ್ರಮ್ ಸಿಂಗ್, “ನಾವು ಜನರಿಗೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಬೇಕು ಅಥವಾ ಸೂಕ್ತ ಸಮಯಕ್ಕೆ ಈದ್ಗಾ ಮೈದಾನಗಳನ್ನು ತಲುಪಬೇಕೆಂದು ಮನವಿ ಮಾಡಿದ್ದೇವೆ. ಎಂಥದೇ ಪರಿಸ್ಥಿತಿಯಲ್ಲೂ ರಸ್ತೆಗಳ ಮೇಲೆ ನಮಾಝ್ ಮಾಡಲು ಅವಕಾಶ ನೀಡಬಾರದು ಎಂಬುದಾಗಿ ಸೂಚನೆ ನೀಡಿದ್ದೇವೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X