ಸಿಂಧೂರ ಧರಿಸಿದ್ದ ತಮ್ಮ ಪತ್ನಿಯ ಹಕ್ಕನ್ನೇ ಪ್ರಧಾನಿ ಕಸಿದುಕೊಂಡಿದ್ದಾರೆ: ಮೋದಿ ವಿರುದ್ಧ ಸ್ವಾಮಿ ಅವಿಮುಕ್ತೇಶ್ವರಾನಂದ ವಾಗ್ದಾಳಿ

Date:

Advertisements

ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಹೆಸರಿಟ್ಟು, ಪಹಲ್ಗಾಮ್‌ನಲ್ಲಿ ಹಿಂದು ಮಹಿಳೆಯರ ಸಿಂಧೂರ ಕಸಿದುಕೊಂಡವರ ವಿರುದ್ದ ಪ್ರತಿಕಾರ ತೀರಿಸಿಕೊಂಡಿದ್ದೇವೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಆದರೆ, ಮೋದಿ ಅವರು ‘ಸಿಂಧೂರ’ ಹಾಕಿದ್ದ ತಮ್ಮ ಪತ್ನಿಗೆ ಏನು ಮಾಡಿದರು. ಅವರ ಪತ್ನಿ ಪ್ರಧಾನಿ ನಿವಾಸದಲ್ಲಿ ಯಾಕೆ ಇಲ್ಲ? ಅವರ ಅವರ ಪತ್ನಿಯ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ, ಭಾರತದ ಎಲ್ಲ ನೆರೆಯ ರಾಷ್ಟ್ರಗಳನ್ನು ಕರೆದು ಗೌರವದಿಂದ ಸತ್ಕರಿಸಿ, ಸಭೆ ನಡೆಸಿದ್ದರು. ಆಗ, ಭಾರತವು ನೆರೆಯ ರಾಷ್ಟ್ರಗಳ ವಿಶ್ವಾಸದೊಂದಿಗೆ ದೊಡ್ಡ ಶಕ್ತಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈಗ 11 ವರ್ಷಗಳ ಬಳಿಕವೂ ನಾವು ಏಕಾಂಗಿಯಾಗಿ ನಿಂತಲ್ಲೇ ನಿಂದಿದ್ದೇವೆ.”ಮಾಲ್ಡೀವ್ಸ್‌ ರೀತಿಯ ಸಣ್ಣ ದೇಶವೂ ಭಾರತಕ್ಕೆ ಸವಾಲು ಹಾಕುತ್ತಿದೆ. ಇದಕ್ಕೆ ಏನು ಹೇಳುವುದು” ಎಂದು ವಾಗ್ದಾಳಿ ನಡೆಸಿದ್ದಾರೆ.

“ಆಪರೇಷನ್ ಸಿಂಧೂರ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ‘ಸಿಂಧೂರ’ ಎಂಬ ಪದವೇ ಅಳುತ್ತಿದೆ. ಭಾರತದಲ್ಲಿ ‘ಸಿಂಧೂರ’ ಎಂದರೆ ಬಹಳ ದೊಡ್ಡ ವಿಷಯ. ಒಂದು ಚಿಟಿಕೆ ಸಿಂಧೂರಕ್ಕೆ ದೊಡ್ಡ ಮಹತ್ವ ಇದೆ. ಇಂದು ಸಿಂಧೂರ್‌ನ ಸ್ಥಿತಿ ಏನಾಗಿದೆ? ಸಿಂಧೂರದ ಬಗ್ಗೆ ಮಾತಾಡುವವರು ಸಿಂಧೂರದ ಮಾನ ಕಾಪಾಡಿದ್ದಾರೆಯೇ? ಅವರು ಸಿಂಧೂರ ಹಾಕಿದವರ ಜೊತೆ ಹೇಗೆ ವರ್ತಿಸಿದ್ದಾರೆ. ಮೋದಿ ಅವರು ತಮ್ಮದೇ ಪತ್ನಿಯಿಂದ ಪತ್ನಿಯ ಗೌರವವನ್ನು ಹೇಗೆ ಕಸಿದುಕೊಳ್ಳಬಹುದು? ಅವರು ಪ್ರಧಾನಿ ನಿವಾಸದಲ್ಲಿ ಇರಬೇಕಿತ್ತು. ಆಕೆಗೆ ಆ ಹಕ್ಕು ಇದೆ. ಆಕೆಯ ಹಕ್ಕನ್ನು ಮೋದಿ ಕಸಿದುಕೊಂಡಿದ್ದಾರೆ” ಎಂದು ಕಿಡಿಕಾರಿದ್ದಾರೆ.

Advertisements

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X