50 ಪೈಸೆಗಾಗಿ 15,000 ರೂ. ದಂಡ ತೆತ್ತ ಅಂಚೆ ಇಲಾಖೆ

Date:

Advertisements

ಗ್ರಾಹಕನಿಗೆ 50 ಪೈಸೆ ಹಿಂದಿರುಗಿಸದ ಪ್ರಕರಣದಲ್ಲಿ ಅಂಚೆ ಇಲಾಖೆಗೆ 15,000 ರೂ. ದಂಡ ವಿಧಿಸಿ ಚೆನ್ನೈನ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಚೆನ್ನೈನ ಮನಶಾ ಎಂಬವರು ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿರುವ ಗ್ರಾಹಕರ ಆಯೋಗ, ಅಂಚೆ ಇಲಾಖೆಗೆ ದಂಡ ವಿಧಿಸಿದೆ. ದಂಡದ ಪೈಕಿ, ಗ್ರಾಹಕರಿಗೆ 10,000 ರೂ. ಪರಹಾರ ಮತ್ತು 5,000 ರೂ. ವ್ಯಾಜ್ಯ ಶುಲ್ಕ ಭರಿಸುವಂತೆ ನಿರ್ದೇಶಿಸಿದೆ.

ಮನಶಾ ಅವರು 2023ರ ಡಿಸೆಂಬರ್ 13ರಂದು ಚೆನ್ನೈನ ಪೊಜಿಚಲೂರ್ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ ಅಂಚೆ ಪತ್ರ ಖರೀದಿಸಿದ್ದರು. ಅದರ ಬೆಲೆ 29.50 ರೂ. ಆಗಿದ್ದು, ಮನಶಾ ಅವರು 30 ರೂ. ಪಾವತಿಸಿದ್ದರು. ಉಳಿದ, 50 ಪೈಸೆಯನ್ನು ಹಿಂದಿರುಗಿಸುವಂತೆ ಅಂಜೆ ಅಧಿಕಾರಿಗೆ ಕೇಳಿದ್ದರು.

Advertisements

ಆದರೆ, ಅಂಚೆ ಅಧಿಕಾರಿ 50 ಪೈಸೆಯನ್ನು ಹಿಂದಿರುಗಿಸಿಲ್ಲ. ಚಿಲ್ಲರೆ ಇಲ್ಲದಿದ್ದರೆ, ಯುಪಿಐ ಮೂಲಕ ಹಣ ಪಾವತಿಸುತ್ತೇನೆ ನಗದು ಹಣವನ್ನು ವಾಪಸ್‌ ಕೊಡಿ ಎಂದು ಕೇಳಿದರೂ, ಅಧಿಕಾರಿ ಒಪ್ಪಿಲ್ಲ.

ಅಧಿಕಾರಿಗಳ ನಡೆಯಿಂದ ಅಸಮಾಧಾನಗೊಂಡ ಮನಶಾ, ಅಂಚೆ ಇಲಾಖೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

ಅವರ ದೂರಿನ ವಿಚಾರಣೆ ನಡೆಸಿರುವ ಆಯೋಗ, ಮನಶಾ ಅವರಿಗೆ 50 ಪೈಸೆಯನ್ನು ಮರುಪಾವತಿಸಬೇಕು. ಗ್ರಾಹಕರಿಗೆ ಮಾನಸಿಕ ಒತ್ತಡ ನೀಡಿದ್ದಕ್ಕಾಗಿ 10,000 ರೂ. ಪರಿಹಾರ ನೀಡಬೇಕು. ಜೊತೆಗೆ, ವ್ಯಾಜ್ಯ ಶುಲ್ಕವಾಗಿ ₹5 ಸಾವಿರ ಪಾವತಿಸಬೇಕೆಂದು ಅಂಚೆ ಇಲಾಖೆಗೆ ಆದೇಶಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X