ಗ್ರಾಹಕನಿಗೆ 50 ಪೈಸೆ ಹಿಂದಿರುಗಿಸದ ಪ್ರಕರಣದಲ್ಲಿ ಅಂಚೆ ಇಲಾಖೆಗೆ 15,000 ರೂ. ದಂಡ ವಿಧಿಸಿ ಚೆನ್ನೈನ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಚೆನ್ನೈನ ಮನಶಾ ಎಂಬವರು ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿರುವ ಗ್ರಾಹಕರ ಆಯೋಗ, ಅಂಚೆ ಇಲಾಖೆಗೆ ದಂಡ ವಿಧಿಸಿದೆ. ದಂಡದ ಪೈಕಿ, ಗ್ರಾಹಕರಿಗೆ 10,000 ರೂ. ಪರಹಾರ ಮತ್ತು 5,000 ರೂ. ವ್ಯಾಜ್ಯ ಶುಲ್ಕ ಭರಿಸುವಂತೆ ನಿರ್ದೇಶಿಸಿದೆ.
ಮನಶಾ ಅವರು 2023ರ ಡಿಸೆಂಬರ್ 13ರಂದು ಚೆನ್ನೈನ ಪೊಜಿಚಲೂರ್ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ ಅಂಚೆ ಪತ್ರ ಖರೀದಿಸಿದ್ದರು. ಅದರ ಬೆಲೆ 29.50 ರೂ. ಆಗಿದ್ದು, ಮನಶಾ ಅವರು 30 ರೂ. ಪಾವತಿಸಿದ್ದರು. ಉಳಿದ, 50 ಪೈಸೆಯನ್ನು ಹಿಂದಿರುಗಿಸುವಂತೆ ಅಂಜೆ ಅಧಿಕಾರಿಗೆ ಕೇಳಿದ್ದರು.
ಆದರೆ, ಅಂಚೆ ಅಧಿಕಾರಿ 50 ಪೈಸೆಯನ್ನು ಹಿಂದಿರುಗಿಸಿಲ್ಲ. ಚಿಲ್ಲರೆ ಇಲ್ಲದಿದ್ದರೆ, ಯುಪಿಐ ಮೂಲಕ ಹಣ ಪಾವತಿಸುತ್ತೇನೆ ನಗದು ಹಣವನ್ನು ವಾಪಸ್ ಕೊಡಿ ಎಂದು ಕೇಳಿದರೂ, ಅಧಿಕಾರಿ ಒಪ್ಪಿಲ್ಲ.
ಅಧಿಕಾರಿಗಳ ನಡೆಯಿಂದ ಅಸಮಾಧಾನಗೊಂಡ ಮನಶಾ, ಅಂಚೆ ಇಲಾಖೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ಅವರ ದೂರಿನ ವಿಚಾರಣೆ ನಡೆಸಿರುವ ಆಯೋಗ, ಮನಶಾ ಅವರಿಗೆ 50 ಪೈಸೆಯನ್ನು ಮರುಪಾವತಿಸಬೇಕು. ಗ್ರಾಹಕರಿಗೆ ಮಾನಸಿಕ ಒತ್ತಡ ನೀಡಿದ್ದಕ್ಕಾಗಿ 10,000 ರೂ. ಪರಿಹಾರ ನೀಡಬೇಕು. ಜೊತೆಗೆ, ವ್ಯಾಜ್ಯ ಶುಲ್ಕವಾಗಿ ₹5 ಸಾವಿರ ಪಾವತಿಸಬೇಕೆಂದು ಅಂಚೆ ಇಲಾಖೆಗೆ ಆದೇಶಿಸಿದೆ.