ಪುಣೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತ ಬಾಲಕನಿಗೆ ಬಾಂಬೆ ಹೈಕೋರ್ಟ್ ಜಾಮೀನು

Date:

Advertisements

ಪುಣೆ ಕಾರು ಅಪಘಾತದಲ್ಲಿ ಬಂಧಿತನಾಗಿದ್ದ ಅಪ್ರಾಪ್ತ ಬಾಲಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದು. ಬಿಡುಗಡೆಗೆ ಆದೇಶಿಸಿದೆ. ಬಾಲಾಪರಾಧಿ ನ್ಯಾಯಮಂಡಳಿ ಆದೇಶವನ್ನು ಅಕ್ರಮ ಎಂದು ಕೋರ್ಟ್ ವಜಾಗೊಳಿಸಿದೆ.

ಅಪ್ರಾಪ್ತನ ಪೋಷಕರು ಹಾಗೂ ತಾತ ಸೆರೆಮನೆಯಲ್ಲಿರುವ ಕಾರಣ ಬಾಲಕನ ಪಾಲನೆಯ ನಿರ್ವಹಣೆಯನ್ನು ಸಂಬಂಧಿಕರಿಗೆ ನೀಡಲಾಗಿದೆ ಎಂದು ಕೋರ್ಟ್ ತಿಳಿಸಿದೆ.

ಭಾರತಿ ದಂಗ್ರೆ ಹಾಗೂ ಮಂಜೂಷಾ ದೇಶಪಾಂಡೆ ಅವರಿದ್ದ ಪೀಠವು ಬಾಲಕನಿಗೆ ಜಾಮೀನು ನೀಡಿದ್ದು, ಅಪಘಾತವು ಗಂಭೀರವಾದರೂ ಆತನನ್ನು ಬಾಲಾಪರಾಧಿಗಳ ಕಾರಾಗೃಹದಲ್ಲಿ ಇಡುವಂತಿಲ್ಲ ಎಂದು ತಿಳಿಸಿದೆ.

Advertisements

ಮೇ ತಿಂಗಳಿನಲ್ಲಿ 17 ವರ್ಷದ ಅಪ್ತಾಪ್ತ ಬಾಲಕ ದುಬಾರಿ ಪೋರ್ಷ್‌ ಕಾರಿನಲ್ಲಿ ಅಪಘಾತ ಮಾಡಿದ ಕಾರಣ ಒರ್ವ ಬೈಕ್‌ ಸವಾರ ಹಾಗೂ ಇಬ್ಬರು ಸಾಫ್ಟ್‌ವೇರ್‌ ಇಂಜಿನಿಯರ್‌ ಮೃತಪಟ್ಟಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೇ ಅಸ್ತ್ರ ಮತ್ತು ಗುರಾಣಿ

ಅಪಘಾತ ನಡೆದ ದಿನದಂದೆ ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದ. ಈತನನ್ನು ರಸ್ತೆ ಸುರಕ್ಷತೆಯ ಬಗ್ಗೆ 300 ಪದಗಳ ಪ್ರಬಂಧ ಬರೆಯುವ ಷರತ್ತಿನೊಂದಿಗೆ ಆತನ ಪೋಷಕರು ಹಾಗೂ ಅಜ್ಜನ ಮೇಲ್ವಿಚಾರಣೆಗೆ ವಹಿಸಲಾಗಿತ್ತು.

ನಂತರದಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚಾದ ನಂತರ ಬಾಲಕನ ಜಾಮೀನು ಅರ್ಜಿಗೆ ತಿದ್ದುಪಡಿ ತರಬೇಕೆಂದು ಪೊಲೀಸರು ಬಾಲಾಫರಾದ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಬಾಲಕನನ್ನು ಮೇ 22ರಂದು ಕಸ್ಟಡಿಗೆ ಪಡೆದು ಬಾಲಾಪರಾಧಿಗಳ ಗೃಹದಲ್ಲಿ ಇರಿಸಲಾಗಿತ್ತು.

“ನಾವು ಈ ಅರ್ಜಿಯನ್ನು ಪರಿಗಣಿಸಿ ಈತನ ಬಿಡುಗಡೆಗೆ ಆದೇಶಿಸುತ್ತೇವೆ. ಬಾಲಕನ ನಿರ್ವಹಣೆಯನ್ನು ಮಕ್ಕಳ ಅಪರಾಧಿ ಸುರಕ್ಷಾ ಮಂಡಳಿ  ಕಾಳಜಿ ವಹಿಸಿ ಅರ್ಜಿದಾರರಾದ ಬಾಲಕನ ಪೋಷಕರಿಗೆ ಒಪ್ಪಿಸಿದೆ. ಬಾಲಾಪರಾಧಿ ನ್ಯಾಯ ಮಂಡಳಿಯ ಆದೇಶ ಅಕ್ರಮವಾಗಿದ್ದು, ನ್ಯಾಯವ್ಯಾಪ್ತಿಯಿಲ್ಲದೆ ಅಂಗೀಕರಿಸಲ್ಪಟ್ಟಿವೆ” ಎಂದು ಕೋರ್ಟ್ ಈ ಸಂದರ್ಭದಲ್ಲಿ ತಿಳಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತನ ಪೋಷಕರು ಹಾಗೂ ಆತನ ತಾತನನ್ನು ಅಪಘಾತ, ಸಾಕ್ಷ್ಯಗಳ ನಾಶ, ಮನೆಯ ಚಾಲಕನ ಮೇಲೆ ದಬ್ಬಾಳಿಕೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಸೆರೆಮನೆಗೆ ಕಳಿಸಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X